K.H Muniyappa: ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಆಗಾಗ ಗುಡ್ ನ್ಯೂಸ್ ನೀಡುತ್ತಲೇ ಇರುತ್ತದೆ. ಹೌದು BPL ಕಾರ್ಡ್ ಇದ್ದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜ್ಯ ಸರ್ಕಾರ BPL ಕಾರ್ಡ್ ಇದ್ದವರಿಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತವಾಗಿ ಅಕ್ಕಿ ಮತ್ತು ಖಾತೆಗೆ ಹಣ ಮಾಡುತ್ತಿದೆ. ಇದರ ನಡುವೆ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ರಾಜ್ಯದ ಆಹಾರ ಮತ್ತು ನಾಗರೀಕ ಸಚಿವರಾದ ಕೆ ಹೆಚ್ ಮುನಿಯಪ್ಪ (K.H Muniyappa) ಅವರು ಈಗ ಇನ್ನೊಂದು ಗುಡ್ ನ್ಯೂಸ್ ನೀಡಿದ್ದಾರೆ.
BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ಕರ್ನಾಟಕದ ಆಹಾರ ಮತ್ತು ನಾಗರೀಕ ಸಚಿವರಾದ ಕೆ ಹೆಚ್ ಮುನಿಯಪ್ಪ ಅವರು BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಒಂದೇ ಬಾರಿಗೆ ಎರಡು ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ನೀಡಲು ಎರಡು ತಿಂಗಳ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕಳೆದ ತಿಂಗಳು ಸಾಕಷ್ಟು ಕಾರ್ಡುದಾರರು ಫೆಬ್ರುವರಿ ತಿಂಗಳ ಅಕ್ಕಿಯನ್ನು ಪಡೆದುಕೊಂಡಿಲ್ಲ. ಈ ಕಾರಣಕ್ಕೆ ರಾಜ್ಯದ ಆಹಾರ ಸಚಿವರು ಇನ್ನೊಂದು ಘೋಷಣೆ ಮಾಡಿದ್ದು ಮಾರ್ಚ್ ತಿಂಗಳಲ್ಲಿ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರು ಒಂದೇ ಬಾರಿಗೆ 10 KG ಅಕ್ಕಿ ಪಡೆದುಕೊಳ್ಳಲಿದ್ದಾರೆ.

ಫೆಬ್ರವರಿ ತಿಂಗಳ ಹಣದ ಬದಲಾಗಿ ಅಕ್ಕಿ
ಕಳೆದ ತಿಂಗಳು ಕೆಲವು ಅನಿವಾರ್ಯ ಕಾರಣಗಳಿಂದ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಅಕ್ಕಿ ಹಣ ಜಮಾ ಮಾಡಲು ಸಾದ್ಯವಿರಲಿಲ್ಲ. ಈ ಕಾರಣಕ್ಕೆ ಈಗ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಮಾಡಿದ್ದು ತಿಂಗಳಲ್ಲಿ ಫೆಬ್ರವರಿ ತಿಂಗಳ ಅಕ್ಕಿ ಹಣದ ಬದಲಾಗಿ ಮಾರ್ಚ್ ತಿಂಗಳಲ್ಲಿ 10 ಕೆಜಿ ಅಕ್ಕಿ ನೀಡಲು ತೀರ್ಮಾನವನ್ನ ತಗೆದುಕೊಳ್ಳಲಾಗಿದೆ.
ಪಡಿತರ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ
ರಾಜ್ಯ ಸರ್ಕಾರ ಈಗ ಮತ್ತೆ ಪಡಿತರ ಕಾರ್ಡ್ ಇದ್ದುಪಡಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ ಕಾರ್ಡ್ ತಿದ್ದುಪಡಿ ಮಾಡಬಹುದು.
ಏನೆಲ್ಲಾ ತಿದ್ದುಪಡಿ ಮಾಡಬಹುದು :
* ಕುಟುಂಬದ ಮುಖ್ಯಸ್ಥರ ಬದಲಾವಣೆ
* ಪಡಿತರ ಚೀಟಿಯಲ್ಲಿ ಇರುವ ವಿಳಾಸ ಬದಲಾವಣೆ ಮಾಡಬಹುದು
* ಪಡಿತರ ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಬಹುದು
* ಕುಟುಂಬದ ಹೊಸ ಸದ್ಯಸರ ಹೆಸರು ಕೂಡ ಸೇರ್ಪಡೆ ಮಾಡಬಹುದು
* KYC ಅಪ್ಡೇಟ್ ಮಾಡಲು ಮತ್ತೆ ಅವಕಾಶ ಕಪಿಸಿಕೊಡಲಾಗಿದೆ
* ಪಡಿತರ ಚೀಟಿಯಲ್ಲಿ ಇರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಲು ಮತ್ತೆ ಅವಕಾಶ
* ಹೀಗೆ ಇತರೆ ಬದಲವೇನೇ ಅವಕಾಶ ಕಲ್ಪಿಸಿಕೊಡಲಾಗಿದೆ
ಅಕ್ಕಿ ಬದಲು ಖಾತೆಗೆ ಬರಲಿದೆ ಹಣ
ಫೆಬ್ರವರಿ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಅಕ್ಕಿ ಹಣ ಜಮಾ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ, ಈ ಕಾರಣಕ್ಕೆ ಈಗ ಮಾರ್ಚ್ ತಿಂಗಳಲ್ಲಿ ಹಣದ ಬದಲಾಗಿ ಫೆಬ್ರವರಿ ತಿಂಗಳ 5 KG BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ನೀಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ತಿಂಗಳ ಅಂತ್ಯದ ಒಳಗಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.