Bhagyalakshmi Bond: ಹಿಂದಿನ ಕರ್ನಾಟಕ ಸರ್ಕಾರ (Karnataka State Government) ರಾಜ್ಯದ ಹೆಣ್ಣುಮಕ್ಕಳ ಪ್ರಗತಿ ಮತ್ತು ಹೆಣ್ಣು ಮಕ್ಕಳ ಸಬಲೀಕರಣ ಉದ್ದೇಶದಿಂದ ಹಲವು ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿತ್ತು. ಇನ್ನು BJP ಸರ್ಕಾರ (BJP Government) ಜಾರಿಗೆ ಅತೀ ದೊಡ್ಡ ಯೋಜನೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Scheme) ಕೂಡ ಒಂದಾಗಿದೆ. ಸದ್ಯ ಭಾಗ್ಯಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಮಹಿಳೆಯರಿಗೆ ಈಗ ದೊಡ್ಡ ಗುಡ್ ನ್ಯೂಸ್ ಬಂದಿದೆ. ಹೌದು ಈಗ ಹೆಣ್ಣುಮಕಳ ಖಾತೆಗೆ ನೇರವಾಗಿ ಒಂದು ಲಕ್ಷ ರೂಪಾಯಿ ಹಾಕಲು ಸರ್ಕಾರ ಮುಂದಾಗಿದೆ.
ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್
ಕರ್ನಾಟಕದಲ್ಲಿ ಮಾಜಿ ಮುಖ್ಯಯಾಗಿದ್ದ ಯೆಡಿಯೂರಪ್ಪ (B.S Yediyurappa) ಅವರು ತಮ್ಮ ಅಧಿಕಾರ ಅವಧಿಯಲ್ಲಿ ಈ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದರು. ಇನ್ನು ಯೆಡಿಯೂರಪ್ಪ ಅವರ ಭಾಗ್ಯಲಕ್ಷ್ಮಿ ಯೋಜನೆ ಆರಂಭವಾಗಿ ವರ್ಷಗಳು ತುಂಬಿದೆ. ಸದ್ಯ ಈಗ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಹೌದು ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಈಗ ಸರ್ಕಾರ ನೇರವಾಗಿ ಒಂದು ಲಕ್ಷ ರೂ ಹಾಕಲು ತೀರ್ಮಾನವನ್ನು ಮಾಡಿದೆ.ಹೌದು 2006 ಮತ್ತು 2007 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ನೋಂದಣಿ ಮಾಡಲಾಗಿತ್ತು. ಅದೇ ರೀತಿಯಲ್ಲಿ ಸರ್ಕಾರೀ ನಿಯಮಗಳ ಪ್ರಕಾರ 18 ವರ್ಷ ಪೂರ್ಣಗೊಳಿಸಿದ ಫಲಾನುಭವಿಗಳ ಖಾತೆಗೆ LIC ಯಿಂದ ಪರಿಕತ್ವ ಮಂಜೂರು ಮಾಡಲಾಗಿದೆ.
ಯಾರು ಯಾರಿಗೆ ಸಿಗಲಿದೆ ಭಾಗ್ಯಲಕ್ಷ್ಮಿ ಯೋಜನೆ 1 ಲಕ್ಷ ರೂ
ಭಾಗ್ಯಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಸುಮಾರು 34.50 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ರಾಜ್ಯದ ಹೆಣ್ಣುಗಳ ವಿದ್ಯಾಭ್ಯಾಸ ಮತ್ತು ಅವರ ಮದುವೆಗೆ ಸಂಬಂಧಿಸಿದಂತೆ ನೆರವಾಗುವ ಉದ್ದೇಶದಿಂದ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಭಾಗ್ಯಲಕ್ಷ್ಮಿ ಯೋಜನೆ ಆರಂಭದ ಸಮಯದಲ್ಲಿ ಸುಮಾರು 34.50 ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಸದ್ಯ 2006 ಮತ್ತು 2007 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ (Bhagyalakshmi Scheme Bond) ಮಾಡಿದ ಹೆಣ್ಣು ಮಗುವಿನ ಬಾಂಡ್ ಈಗ ಪರಿಕತ್ವ ಪಡೆದುಕೊಂಡಿದೆ.
ಪರಿಕತ್ವ ಹೊಂದಿದ ಬಾಂಡ್ ತಗೆದುಕೊಂಡು ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಬಾಂಡ್ ಸಲ್ಲಿಸಿದರೆ ಆ ಹೆಣ್ಣು ಮಗುವಿನ ಖಾತೆಗೆ ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೇರವಾಗಿ ಒಂದು ಲಕ್ಷ ರೂಪಾಯಿಯನ್ನು ಜಮಾ ಮಾಡಲಾಗುತ್ತದೆ. ಬಾಂಡ್ ಪರಿಕತ್ವ ಹೊಂದಿದ ಹೆಣ್ಣು ಮಗುವಿಗೆ ಈಗ ಹಣ ಬಿಡುಗಡೆ ಆಗಿದ್ದು ಬಾಂಡ್ ಅನ್ನು ಅಂಗನವಾಡಿ ಕೇಂದ್ರಕ್ಕೆ ನೀಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿದೆ.