Bara Parihara: ಬೆಳೆ ಪರಿಹಾರ ಪಡೆಯುವ ರೈತರಿಗೆ ಬಿಗ್ ಅಪ್ಡೇಟ್, ಯಾವುದಕ್ಕೆ ಎಷ್ಟು ಹಣ ಸಿಗಲಿದೆ ಎಂದು ಪಟ್ಟಿ ಬಿಡುಗಡೆ
ಯಾವ ರೈತರಿಗೆ ಎಷ್ಟು ಬರ ಪರಿಹಾರದ ಹಣ ಸಿಗಲಿದೆ, ಇಲ್ಲಿದೆ ಬಿಗ್ ಅಪ್ಡೇಟ್
Crop Compensation Latest Update 2024: ಮಳೆಯ ಕೊರತೆಯಿಂದ ರೈತರು ಬೆಳೆ ಹಾನಿ ಸಮಸ್ಯೆಯನ್ನು ಎದುರಿಸಿದ್ದಾರೆ. ಸರಿಯಾದ ಸಮಯದಲ್ಲಿ ಮಳೆ ಬಾರದ ರೈತರ ಬೆಳೆ ಎಲ್ಲವು ನಾಶವಾಗಿದ್ದು, ರೈತರು ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗಿತ್ತು.
ಬರ ಪರಿಸ್ಥಿತಿಯಿಂದ ಇನ್ನು ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ಕೂಡ ಘೋಷಿಸಿದೆ. ಸದ್ಯ ರಾಜ್ಯ ಸರ್ಕಾರ ರೈತರಿಗೆ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ರೈತರ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಲಿದೆ. ಸದ್ಯ ರಾಜ್ಯ ಸರ್ಕಾರ ಯಾವುದಕ್ಕೆ ಎಷ್ಟು ಹಣ ಸಿಗಲಿದೆ ಎಂದು ಪಟ್ಟಿ ಬಿಡುಗಡೆ ಮಾಡಿದೆ.
![Crop Compensation Latest Update](https://nadunudi.in/wp-content/uploads/2024/05/Crop-Compensation-Latest-Update.png)
ಬೆಳೆ ಪರಿಹಾರ ಪಡೆಯುವ ರೈತರಿಗೆ ಬಿಗ್ ಅಪ್ಡೇಟ್
2023 ರಲ್ಲಿ ಮುಂಗಾರು ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅಥವಾ SDRF/NDRF ಮಾರ್ಗಸೂಚಿಗಳ ಪ್ರಕಾರ ಬೆಳೆ ಹಾನಿ ಪರಿಹಾರವಾಗಿ ಪ್ರತಿ ರೈತರಿಗೆ ಗರಿಷ್ಠ 2000 ರೂ. ವರೆಗೆ ರೈತರಿಗೆ ಪಾವತಿಸಲು ಸರ್ಕಾರ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಹೆಚ್ಚುವರಿ ಮೊತ್ತಕ್ಕೆ ಅರ್ಹರಾಗಿರುವ ರೈತರಿಗೆ ಹೆಚ್ಚುವರಿ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಲಾಗುವುದು.
ಬರ ಪರಿಸ್ಥಿತಿಯಿಂದ ಶೇ.33 ಕ್ಕಿಂತ ಹೆಚ್ಚಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಗರಿಷ್ಠ 02 ಹೆಕ್ಟೇರ್ ಗೆ ಸೀಮಿತಗೊಳಿಸಿದರೆ, ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್ ಗೆ 8,500 ರೂ., ನೀರಾವರಿ ಬೆಳೆಗೆ ಹೆಕ್ಟೇರ್ ಗೆ 17,000 ರೂ. ಮತ್ತು ಬಹುವಾರ್ಷಿಕ ಬೆಳೆಗೆ ಹೆಕ್ಟೇರ್ ಗೆ 22,500 ರೂ. ನಿಗದಿಪಡಿಸಲಾಗಿದೆ. NDRF ಮಾರ್ಗಸೂಚಿಗಳ ಪ್ರಕಾರ, ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಯೊಂದಿಗೆ ಬೆಳೆ ನಷ್ಟ ಪರಿಹಾರವನ್ನು ನಿಗದಿಪಡಿಸಲಾಗಿದೆ. ಯಾವ ಬೆಲೆ ನಷ್ಟಕ್ಕೆ ಎಷ್ಟು ಪರಿಹಾರ ಮೊತ್ತ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
![Crop Compensation Amount](https://nadunudi.in/wp-content/uploads/2024/05/Crop-Compensation-Amount-2.png)
ಯಾವುದಕ್ಕೆ ಎಷ್ಟು ಹಣ ಸಿಗಲಿದೆ ಎಂದು ಪಟ್ಟಿ ಬಿಡುಗಡೆ
•ಮಳೆಯಾಶ್ರಿತ ಬೆಳೆಗೆ ಪರಿಹಾರ ಮೊತ್ತ 8,500 ರೂ.
•ನೀರಾವರಿ ಪ್ರದೇಶದ ಬೆಳೆಗೆ ಪರಿಹಾರ ಮೊತ್ತ 17,000 ರೂ.
•ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ ಪರಿಹಾರ ಮೊತ್ತ 22,500 ರೂ.
![bele parihara money credit](https://nadunudi.in/wp-content/uploads/2024/05/bele-parihara-money-credit.png)