Kodi Mutt New Prediction: ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿಯುವುದರಲ್ಲಿ ಬಹಳ ಫೇಮಸ್ ಎಂದು ಹೇಳಬಹುದು. ಕರೋನ ಮಹಾಮಾರಿ ದೇಶದಲ್ಲಿ ಕಾಣಿಸಿಕೊಂಡ ಸಮಯದಲ್ಲಿ ಭವಿಷ್ಯ ನುಡಿದಿದ್ದ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಅದಾದ ನಂತರ ಅನೇಕ ರಾಜಕೀಯ ಭವಿಷ್ಯ ಮತ್ತು ಜಲಪ್ರಳಯ ಮತ್ತು ಮಳೆಯ ಬಗ್ಗೆ ಭವಿಷ್ಯ ನುಡಿಯುವುದರ ಮೂಲಕ ಬಹಳ ಫೇಮಸ್ ಆಗಿದ್ದರು. ಸದ್ಯ ಈಗ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ದೇಶದಲ್ಲಿ ಕಾಲಿಡಲಿರುವ ಇನ್ನೊಂದು ಸೋಂಕಿನ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಭೂಮಿಯ ಮೇಲೆ ಬರಲಿರುವ ಇನ್ನೊಂದು ಸೋಂಕಿನ ಬಗ್ಗೆ ಮಾತನಾಡಿರುವ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಜನರಿಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.
ಭೂಮಿಗೆ ಬರಲಿದೆ ಇನ್ನೊಂದು ಸೋಂಕು
ಹೌದು, ಕರೋನ ರೀತಿಯಲ್ಲಿಯೇ ಇನ್ನೊಂದು ಸೋಂಕು ದೇಶಕ್ಕೆ ಕಾಲಿಡಲಿದ್ದು ಇದು ಜನರ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಲಿದೆ ಎಂದು ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಆಘಾಖಾರಿ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ದಾಳಿ ಮಾಡಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ ಎಂದು ಹೇಳಿದ್ದಾರೆ.
ಈ ಸಂವತ್ಸರದಲ್ಲಿ ಪ್ರಾಕೃತಿಕವಾಗಿ ಬಹಳ ಅಪಾಯ ಇದೆ ಮತ್ತು ಕರೋನ ಸೋಂಕಿನ ರೀತಿಯಲ್ಲಿಯೇ ಇನ್ನೊಂದು ಸೋಂಕು ದೇಶದಲ್ಲಿ ಕಾಣಿಸಿಕೊಳ್ಳಲಿದ್ದು ಐದು ವರ್ಷಗಳ ಕಾಲ ಈ ಸೋಂಕು ಜನರ ಜೀವ ಹಿಂಡಲಿದೆ ಎಂದು ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಇನ್ನೊಂದು ಮದ್ದಿಲ್ಲದ ವ್ಯಾದಿ ಬರಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ ಮತ್ತು ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಬಾಗಲಕೋಟೆಯಲ್ಲಿ ಮಾತನಾಡಿದ ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹೇಳಿದ್ದಾರೆ. ದೇಶದಲ್ಲಿ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಮತ್ತು ಜನರು ಹೊಡೆದಾಡಿಕೊಂಡು ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಕೊಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.