Image Credit: Original Source
Aadhar Link For Ration Card: ನೀವು ಪಡಿತರ ಚೀಟಿ ಅಥವಾ ಆಹಾರ ಸಬ್ಸಿಡಿ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಇನ್ನೂ ಲಿಂಕ್ ಮಾಡಿಲ್ಲದಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ಪಡಿತರ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವ ಗಡುವನ್ನು ಸರ್ಕಾರ ವಿಸ್ತರಿಸಿದೆ.
ಆಹಾರ ಸಬ್ಸಿಡಿ ಖಾತೆಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪಡಿತರ ಚೀಟಿಗಳೊಂದಿಗೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.
ಸೆಪ್ಟೆಂಬರ್ ತನಕ ಗಡುವು ವಿಸ್ತರಣೆ
ಆಧಾರ್ ಅನ್ನು ಪರಿಶೀಲಿಸಲು ಅಥವಾ ಲಿಂಕ್ ಮಾಡಲು ಹೊಸ ಗಡುವು ಜೂನ್ 30, 2024 ರ ಬದಲಿಗೆ ಸೆಪ್ಟೆಂಬರ್ 30 ಆಗಿದೆ. ಈ ಗಡುವನ್ನು ಸರ್ಕಾರ ಈ ಹಿಂದೆ ಹಲವು ಬಾರಿ ವಿಸ್ತರಿಸಿದೆ. ಪಡಿತರ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ. ಫೆಬ್ರವರಿ 2017 ರಲ್ಲಿ ಪಿಡಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು.
ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡದಿದ್ದರೆ ಜುಲೈ 1 ರಿಂದ ಫಲಾನುಭವಿಗಳಿಗೆ ಅಗ್ಗದ ಪಡಿತರ ಮತ್ತು ಉಚಿತ ಪಡಿತರ ಪ್ರಯೋಜನ ಸಿಗುವುದಿಲ್ಲ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗುತ್ತಿದೆ. ಆದರೆ ಈಗ ಸರ್ಕಾರವು ಕೊನೆಯ ದಿನಾಂಕವನ್ನು ಮೂರು ತಿಂಗಳು ವಿಸ್ತರಿಸಿದೆ, ಅಂದರೆ ಸೆಪ್ಟೆಂಬರ್ 30 ರ ವರೆಗೆ ಅರ್ಹ ಫಲಾನುಭವಿಗಳು ಪಡಿತರ ಪ್ರಯೋಜನವನ್ನು ಪಡೆಯುತ್ತಾರೆ.
ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ…? ಇಲ್ಲಿದೆ ನೋಡಿ ವಿಧಾನ
•ಗ್ರಾಹಕರು ಮೊದಲು ತನ್ನ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
•ಬ್ಯಾಂಕಿಂಗ್ ನ ಪೋರ್ಟಲ್ ತೆರೆದ ನಂತರ Login ಆಗಿ ನಂತ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
•ಅಲ್ಲಿ ಕೇಳಲಾಗುವ ಎಲ್ಲ ವೈಯಕ್ತಿಕ ಮಾಹಿತಿಯಾದ, ಹೆಸರು, ವಿಳಾಸ, ಹುಟ್ಟಿದ ದಿನಾಂಕ ಎಲ್ಲ ಮಾಹಿತಿಯನ್ನು ನಮೂದಿಸಿ.
•ಆಧಾರ್, ಪಾನ್ ಹಾಗೆ ಇತರ್ ಅಗತ್ಯ ಮಾಹಿತಿಯ ಪ್ರತಿಯನ್ನು ಎರಡು ಬದಿ ಸ್ಕಾನ್ ಮಾಡಿ ಅಪ್ಲೋಡ್ ಮಾಡಿ.
•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ Submit ಆಯ್ಕೆಯನ್ನು ಆರಿಸಿ. ನಂತರ ನಿಮಗೆ ಸೇವಾ ವಿನಂತಿಯನ್ನು ನೀಡಲಾಗುತ್ತದೆ.
•ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನವೀಕರಣ ಮಾಹಿತಿಯನ್ನು ಗ್ರಾಹಕರ ಮೇಲ್ ಅಥವಾ ಮೊಬೈಲ್ ಸಂದೇಶದ ಮೂಲಕ ರವಾನೆ ಮಾಡಲಾಗುತ್ತದೆ.
7th Pay New Update: ಸದ್ಯ ರಾಜ್ಯ ಸರ್ಕಾರೀ ನೌಕರರು ಬಹುದಿನಗಳಿಂದ 7 ನೇ ವೇತನ ಜಾರಿಯ ಬಗ್ಗೆ ಸರ್ಕಾರದ…
Maruti Ertiga 7 Seater Car: ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಗ್ರಾಹಕರು ಹೆಚ್ಚಿನ…
Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…
Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…
Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…
Maternity Leave For Govt Employees: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ…