Close Menu
Nadunudi Nadunudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadunudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadunudi Nadunudi
Home»News»Mahantesh Bilagi: ತೀರಾ ಬಡ ಕುಟುಂಬದಲ್ಲಿ ಜನಿಸಿದ ಮಹಾಂತೇಶ್ ಬಿಳಗಿ IAS ಆಗಿದ್ದು ಹೇಗೆ…? ಮಹಾಂತೇಶ್ ಜೀವನ ಚರಿತ್ರೆ
News

Mahantesh Bilagi: ತೀರಾ ಬಡ ಕುಟುಂಬದಲ್ಲಿ ಜನಿಸಿದ ಮಹಾಂತೇಶ್ ಬಿಳಗಿ IAS ಆಗಿದ್ದು ಹೇಗೆ…? ಮಹಾಂತೇಶ್ ಜೀವನ ಚರಿತ್ರೆ

Kiran PoojariBy Kiran PoojariNovember 27, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Mahantesh Bilagi Life History
Share
Facebook Twitter LinkedIn Pinterest Email
Mahantesh Bilagi Life History: ಬಡತನದಿಂದ ಬೆಳೆದು ಬಂದ ಮಹಾಂತೇಶ್ ಬೀಳಗಿ ಅವರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಹೌದು, ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತಿದ್ದ ಬಡ ರೈತನ ಮಗ IAS ಅಧಿಕಾರಿಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ನವೆಂಬರ್ 25, 2025 ರ ಸಂಜೆ 5:30 ರ ಸುಮಾರಿಗೆ ಮಹಾಂತೇಶ್ ಬೀಳಗಿ ಅಗಲಿದ್ದಾರೆ. ಬಡತನ, ತಾಯಿಯ ಶ್ರಮ, ಕಷ್ಟಗಳನ್ನ ದಾಟಿ ಸಾಧನೆ ಮಾಡಿದ ಮಹಾಂತೇಶ್ ಬೀಳಗಿ ಅವರ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಬಡತನ ಇದ್ದರು ಕೂಡ ಸಾಧನೆ ಮಾಡಬಹುದು ಎನ್ನುದಕ್ಕೆ ಇರುವ ಉತ್ತಮ ಉದಾಹರಣೆ ಆಗಿದ್ದಾರೆ. ಇದೀಗ ನಾವು ಮಹಾಂತೇಶ್ ಬೀಳಗಿ ಅವರ ಸ್ಫೂರ್ತಿದಾಯಕ ಜೀವನ ಚರಿತ್ರೆ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ರೊಟ್ಟಿ ಮಾರಿ ಬೆಳೆದ ಕುಟುಂಬ
ಮಾರ್ಚ್ 27, 1974 ರಂದು ರಾಮದುರ್ಗ ತಾಲೂಕು, ಬೆಳಗಾವಿ ಯಲ್ಲಿ ಮಹಾಂತೇಶ್ ಬೀಳಗಿ ಅವರ ಜನನವಾಗುತ್ತದೆ. ತಂದೆ ಬಸಪ್ಪ ಬಿಳಗಿ (ರೈತ), ತಾಯಿ ಲಕ್ಷ್ಮೀಬಾಯಿ. ಬಡ ಕುಟುಂಬದಲ್ಲಿ ಬೆಳೆದ ಮಹಾಂತೇಶ್ ಬೀಳಗಿ ಅವರು ತಂದೆ ಅವರನ್ನು ಬಹುಬೇಗ ಕಳೆದುಕೊಳ್ಳುತ್ತಾರೆ. ತಾಯಿ ಲಕ್ಷ್ಮೀಬಾಯಿ ಒಂಟಿಯಾಗಿ 5 ಮಕ್ಕಳನ್ನು ಸಾಕುತ್ತಾರೆ. ರೊಟ್ಟಿ ಮಾರಿ ಕುಟುಂಬವನ್ನು ನೆಡೆಸುತಿದ್ದರು. ಮಹಾಂತೇಶ್ ಮತ್ತು ಅವರ ಸಹೋದರರು ಕೂಡ ಅಂಗಡಿಯಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡರು.
(ನೆರೆಹೊರೆಯವರು – “ಅವರ ತಾಯಿ ‘ನೀನು ಓದು, ನಾನು ರೊಟ್ಟಿ ಮಾರುತ್ತೇನೆ’ ಎಂದು ಹೇಳಿ ಬೆಂಬಲಿಸಿದರು. ಈ ಕಷ್ಟಗಳು ಮಹಾಂತೇಶ್ ಅವರನ್ನು ಇನ್ನಷ್ಟು ದೃಢಗೊಳಿಸಿದವು.” ಬಸವಣ್ಣನವರ ಭಕ್ತರಾಗಿ, ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಂಡ ಅವರು, ಬಡತನವನ್ನು ಗೆದ್ದು ಇತರರಿಗೆ ಸಹಾಯ ಮಾಡುವುದು ಅವರ ಗುರಿಯಾಗಿತ್ತು.)
ಮಹಾಂತೇಶ್ ಬೀಳಗಿ ಶಿಕ್ಷಣ ಪಯಣ
ಆರಂಭದಲ್ಲಿ ಸರ್ಕಾರೀ ಶಾಲೆಯಲ್ಲಿ ಶಿಕ್ಷಣವನ್ನು ಪಡೆದ ಮಹಾಂತೇಶ್ ಬೀಳಗಿ ಅವರು ಧಾರವಾಡದಲ್ಲಿ ಇಂಗ್ಲಿಷ್ ಟ್ಯೂಷನ್ ಕಲಿಸಿ ಶಿಕ್ಷಣ ಪೂರ್ಣಗೊಳಿಸಿದ ಮಹಾಂತೇಶ್ UPSC ಪರೀಕ್ಷೆಗೆ ತಯಾರಿ ಮಾಡಿದರು. 2012 ರಲ್ಲಿ ಕರ್ನಾಟಕ ಕೇಡರ್ IAS ಆಯ್ಕೆಯಾದರು. ಇದು ಅವರ ಜೀವನದ ದೊಡ್ಡ ಗೆಲುವು. (ಗುರುಗಳು – “ಬಾಲ್ಯದಿಂದಲೇ ಓದಿಗೆ ಶ್ರದ್ಧೆಯುಳ್ಳವರು. ಸರಳ ಜೀವನದಲ್ಲಿ ದೃಢ ಸಂಕಲ್ಪ ಹೊಂದಿದವರು. ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಾ, ಕಷ್ಟಗಳು ನಿಮ್ಮನ್ನು ತಡೆಯಬಾರದು. ಶ್ರಮ ಮಾಡಿ ಕನಸುಗಳನ್ನು ನನಸು ಮಾಡಿಕೊಳ್ಳಿ” ಎಂದು ಹೇಳುತ್ತಿದ್ದರು. ಯುವಕರನ್ನು ಪ್ರೇರೇಪಿಸುತ್ತಿದ್ದರು.) ಅವರ ಶಿಕ್ಷಣ ಹಾದಿ ಬಡವರಿಗೂ IAS ಸಾಧ್ಯ ಎಂಬ ಸಂದೇಶ ನೀಡುತ್ತದೆ.
ಮಹಾಂತೇಶ್ ಬೀಳಗಿ ವೃತ್ತಿ ಜೀವನ
IAS ಆಗಿ ಆರಂಭಿಕ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ ಮಹಾಂತೇಶ್ ಬೀಳಗಿ, ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವಾಗ, ವಿದ್ಯುತ್ ಸಮಸ್ಯೆಗಳನ್ನು ಕಡಿಮೆ ಮಾಡಿ, ಗ್ರಾಮೀಣ ಪ್ರದೇಶಗಳಿಗೆ ಸುಗಮ ಸರಬರಾಜು ನೀಡುತ್ತಿದ್ದರು. ಖನಿಜ ಅಭಿವೃದ್ಧಿ ನಿಗಮದ (KSMCL) ವ್ಯವಸ್ಥಾಪಕ ನಿರ್ದೇಶಕರಾಗಿ, ಖನಿಜ ಸಂಪನ್ಮೂಲಗಳ ಅಭಿವೃದ್ಧಿಗೆ ನಾಯಕತ್ವ ನೀಡುತ್ತಿದ್ದರು. ಬೀದರ್ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿಯಲ್ಲಿ ಬದಲಾವಣೆ ತಂದರು. ಅವರ ಸೇವೆಯಲ್ಲಿ ಬಡವರಿಗೆ ಆಧ್ಯತೆ. ಜಿಲ್ಲಾ ಪಂಚಾಯಿತಿ CEO ಆಗಿ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡಿ ಧಕ್ಷತೆಯ ಗುರುತು ಮಾಡಿಕೊಂಡರು. ಅವರ ಕೆಲಸದಿಂದ ರಾಜ್ಯದ ಆರ್ಥಿಕತೆಗೆ ಕೊಡುಗೆ ಅಪಾರವಾಗಿದೆ.
ಮಹಾಂತೇಶ್ ಬೀಳಗಿ ದುರಂತದ ನೆನಪು
ನವೆಂಬರ್ 25, 2025 ರ ಸಂಜೆ, ವಿಜಯಪುರದಿಂದ ಕಲಬುರಗಿಗೆ ಕುಟುಂಬದ ಮದುವೆಗೆ ಹೋಗುತ್ತಿದ್ದಾಗ ಜೇವರ್ಗಿ ತಾಲೂಕು, ಗೌನಹಳ್ಳಿ ಕ್ರಾಸ್ ಬಳಿ (ಕಲಬುರಗಿ – ಬೀದರ್ ರಾಷ್ಟ್ರೀಯ ಹೆದ್ದಾರಿ 150E) ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರ್ ಅಪಘಾತವಾಗಿ ಮಹಾಂತೇಶ್ ಬೀಳಗಿ (51), ಅವರ ಸಹೋದರ ಶಂಕರ್ ಬೀಳಗಿ (48) ಮತ್ತು ಸಂಬಂಧಿ ಈರಣ್ಣ ಶಿರಸಂಗಿ (55) ಮರಣ ಹೊಂದುತ್ತಾರೆ. ಮಹಾಂತೇಶ್ ಬೀಳಗಿ ಅವರ ಸಾವು ರಾಜ್ಯದ ಅಧಿಕಾರ ವ್ಯವಸ್ಥೆಗೆ ದೊಡ್ಡ ನಷ್ಟ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
Belagavi IAS officer inspirational biography Karnataka News road accident
Share. Facebook Twitter Pinterest LinkedIn Tumblr Email
Previous ArticleTata Sierra: 11.49 ಲಕ್ಷಕ್ಕೆ ಬಿಡುಗಡೆಯಾದ Tata Sierra ಕಾರಿನ ವಿಶೇಷತೆ ಏನು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Next Article Tata Sierra Features: ಟಾಟಾ Sierra ಕಾರಿನ ಐಷಾರಾಮಿ ಫೀಚರ್ ಕಂಡು ಗ್ರಾಹಕರು ಫಿದಾ, ಸಂಕಷ್ಟದಲ್ಲಿ ಕ್ರೆಟಾ
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

News

15 ದಿನದಲ್ಲಿ ಸಿಗಲಿದೆ ಹೊಸ BPL ರೇಷನ್ ಕಾರ್ಡ್, BPL ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಕೊನೆಗೂ ಸಿಹಿಸುದ್ದಿ

December 26, 2025
News

Oppo Reno 15: ಐಫೋನ್ ಗೆ ನೇರ ಪೈಪೋಟಿ, ಕಡಿಮೆ ಬೆಲೆಗೆ ಆಕರ್ಷಕ ಫೀಚರ್ ಇರುವ OPPO Reno 15 ಬಿಡುಗಡೆಗೆ ಸಿದ್ದ

December 26, 2025
News

92,000 ರೂಪಾಯಿ ದಾಟಿದ ಅಡಿಗೆ ಬೆಲೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ತಿಳಿದುಕೊಳ್ಳಿ

December 26, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,776 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,543 Views

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 202514,787 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,546 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,563 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,776 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,543 Views

Second Airport: ಬೆಂಗಳೂರಿನ ಈ ಭಾಗದಲ್ಲಿ ಎರಡನೆಯ ವಿಮಾನ ನಿಲ್ದಾಣ, ಜಾಗಕ್ಕೆ ಫುಲ್ ಡಿಮ್ಯಾಂಡ್

December 15, 202514,787 Views
Our Picks

15 ದಿನದಲ್ಲಿ ಸಿಗಲಿದೆ ಹೊಸ BPL ರೇಷನ್ ಕಾರ್ಡ್, BPL ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಕೊನೆಗೂ ಸಿಹಿಸುದ್ದಿ

December 26, 2025

Oppo Reno 15: ಐಫೋನ್ ಗೆ ನೇರ ಪೈಪೋಟಿ, ಕಡಿಮೆ ಬೆಲೆಗೆ ಆಕರ್ಷಕ ಫೀಚರ್ ಇರುವ OPPO Reno 15 ಬಿಡುಗಡೆಗೆ ಸಿದ್ದ

December 26, 2025

92,000 ರೂಪಾಯಿ ದಾಟಿದ ಅಡಿಗೆ ಬೆಲೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ತಿಳಿದುಕೊಳ್ಳಿ

December 26, 2025
Nadunudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.