Actor Darshan Fans: ಕ್ರಾಂತಿ ಚಿತ್ರಕ್ಕಾಗಿ ಕೆಲಸ ಕಳೆದುಕೊಂಡ ಅಭಿಮಾನಿಗೆ ಪ್ರತಿಕ್ರಿಯಿಸಿದ ನಟ ದರ್ಶನ್.

Challenging Star Darshan Fans: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan)ಅವರ ಕ್ರಾಂತಿ (Kranti) ಸಿನಿಮಾ ಜನವರಿ 26 ರಂದು ತೆರೆಯ ಮೇಲೆ ಭರ್ಜರಿ ಯಶಸ್ಸು ಗಳಿಸಿದೆ. ರಿಲೀಸ್ ಆಗಿ ಒಂದು ವಾರ ಕಳೆದರು ಕೂಡ ಕ್ರಾಂತಿ ಅಬ್ಬರ ಇನ್ನು ಕಡಿಮೆಯಾಗಲಿಲ್ಲ.

ಕ್ರಾಂತಿ ಸಿನಿಮಾ ರಿಲೀಸ್ ಗೂ ಮುನ್ನ ಹೆಚ್ಚು ಸದ್ದು ಮಾಡಿತ್ತು. ಇನ್ನು ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ದರ್ಶನ್ ಅಭಿಮಾನಿಗಳು ಬಹಳ ವಿಶೇಷವಾಗಿ ಮಾಡಿದ್ದರು. ಇದೀಗ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದ ದರ್ಶನ್ ಅಭಿಮಾನಿ (Darshan Fan) ಕೆಲಸ ಕಳೆದುಕೊಂಡಿದ್ದಾರೆ.

Actor Darshan reacts to a fan who lost his job for Kranti.
Image Credit: instagram

ಕ್ರಾಂತಿ ಚಿತ್ರದ ಪ್ರಚಾರ ಮಾಡಿದ ದರ್ಶನ್ ಅಭಿಮಾನಿ
ದರ್ಶನ್ ಅವರ ಕ್ರಾಂತಿ ಚಿತ್ರವನ್ನು ಅಭಿಮಾನಿಗಳು ಬಹಳ ವಿಶೇಷವಾಗಿ ಪ್ರಚಾರ ಮಾಡಿದ್ದಾರೆ. ಬೈಕ್ ಮೇಲೆ ಕ್ರಾಂತಿ ಚಿತ್ರದ ಪೋಸ್ಟರ್ ಅಂಟಿಸಿಕೊಂಡು ಅದೆಷ್ಟೋ ಅಭಿಮಾನಿಗಳು ಕ್ರಾಂತಿ ಚಿತ್ರದ ಪ್ರಚಾರವನ್ನು ಮಾಡಿದ್ದಾರೆ. ಇದೀಗ ಪ್ರಚಾರಮಾಡಿದ ಒಬ್ಬ ಅಭಿಮಾನಿ ಅವಿನಾಶ್ (Avinash) ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

Actor Darshan reacts to a fan who lost his job for Kranti.
Image Source: India Today

ಕ್ರಾಂತಿ ಪ್ರಚಾರ ಮಾಡಲು ಹೋಗಿ ಕೆಲಸ ಕಳೆದುಕೊಂಡ ದರ್ಶನ್ ಅಭಿಮಾನಿ
ದರ್ಶನ್ ಅಭಿಮಾನಿ ಅವಿನಾಶ್ ಎನ್ನುವಾತ ಕ್ರಾಂತಿ ಚಿತ್ರದ ಪ್ರಚಾರವನ್ನು ಮಾಡಿದ್ದಾರೆ. ತಮ್ಮ ಬೈಕ್ ನಲ್ಲಿ ಕ್ರಾಂತಿ ಚಿತ್ರದ ಪೋಸ್ಟರ್ ಅಂಟಿಸಿಕೊಂಡು ಕಳೆದ 2 ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಕಾರಣದಿಂದಾಗಿ ದರ್ಶನ್ ಅಭಿಮಾನಿ ಕೆಲಸಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ.

Actor Darshan reacts to a fan who lost his job for Kranti.
Image Source: India Today

ಕೆಲಸ ಕಳೆದುಕೊಂಡು ಬೇಸರ ಹೊರಹಾಕಿದ ಅಭಿಮಾನಿ
“ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅದು ನನ್ನ ತಪ್ಪು ಎಂದೇ ಹೇಳಬಹುದು. ಏಕೆಂದರೆ ದರ್ಶನ್ ಸರ್ ಬೇಡ ಎಂದಿದ್ದಾರು. ಆದರೂ ನಾನು ಅವರ ಮಾತು ಕೇಳಲಿಲ್ಲ. ನನಗೆ ಮಾಹಿತಿ ನೀಡದೆ ಕಂಪನಿಯವರು ಕೆಲಸದಿಂದ ತೆಗೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬೇರೆ ಕಂಪನಿಯಲ್ಲಿ ಕೆಲಸ ದೊರೆಯುವುದು ಬಹಳ ಕಷ್ಟ.

Join Nadunudi News WhatsApp Group

ಮುಂದೆ ಏನು ಮಾಡಬೇಕು ತಿಳಿಯುತ್ತಿಲ್ಲ” ಎಂದು ಅವಿನಾಶ್ ಸೋಶಿಯಲ್ ಮೀಡಿಯಾದಲ್ಲಿ(Social Media) ವಿಡಿಯೋ ಮಾಡುವ ಮೂಲಕ ತಮ್ಮ ಬೇಸರ ಹೊರಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು, ದರ್ಶನ್ ಅವರಿಗೂ ತಲುಪಿದೆ.

Actor Darshan reacts to a fan who lost his job for Kranti.
Image Source: India Today

ಕೆಲಸ ಕಳೆದುಕೊಂಡ ಅಭಿಮಾನಿಯ ಕಂಡು ದರ್ಶನ್ ಪ್ರತಿಕ್ರಿಯೆ
ಗುರುವಾರ ಬೆಂಗಳೂರಿನಲ್ಲಿ ಕ್ರಾಂತಿ ಸಕ್ಸಸ್ ಮೀಟ್ ನಡೆದಿದೆ. ಅಲ್ಲಿಗೆ ದರ್ಶನ್ ಅಭಿಮಾನಿ ಅವಿನಾಶ್ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಆತನನ್ನು ನೋಡಿದ ದರ್ಶನ್ ಏನಪ್ಪಾ ಕೆಲಸ ಕಳೆದುಕೊಂಡ್ಯ? ಎಂದು ಕೈ ತೋರಿಸಿ ಮುಂದೆ ಹೋಗಿದ್ದಾರೆ.

 

Join Nadunudi News WhatsApp Group