Image Source: India Today
Challenging Star Darshan Fans: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan)ಅವರ ಕ್ರಾಂತಿ (Kranti) ಸಿನಿಮಾ ಜನವರಿ 26 ರಂದು ತೆರೆಯ ಮೇಲೆ ಭರ್ಜರಿ ಯಶಸ್ಸು ಗಳಿಸಿದೆ. ರಿಲೀಸ್ ಆಗಿ ಒಂದು ವಾರ ಕಳೆದರು ಕೂಡ ಕ್ರಾಂತಿ ಅಬ್ಬರ ಇನ್ನು ಕಡಿಮೆಯಾಗಲಿಲ್ಲ.
ಕ್ರಾಂತಿ ಸಿನಿಮಾ ರಿಲೀಸ್ ಗೂ ಮುನ್ನ ಹೆಚ್ಚು ಸದ್ದು ಮಾಡಿತ್ತು. ಇನ್ನು ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ದರ್ಶನ್ ಅಭಿಮಾನಿಗಳು ಬಹಳ ವಿಶೇಷವಾಗಿ ಮಾಡಿದ್ದರು. ಇದೀಗ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದ ದರ್ಶನ್ ಅಭಿಮಾನಿ (Darshan Fan) ಕೆಲಸ ಕಳೆದುಕೊಂಡಿದ್ದಾರೆ.
ಕ್ರಾಂತಿ ಚಿತ್ರದ ಪ್ರಚಾರ ಮಾಡಿದ ದರ್ಶನ್ ಅಭಿಮಾನಿ
ದರ್ಶನ್ ಅವರ ಕ್ರಾಂತಿ ಚಿತ್ರವನ್ನು ಅಭಿಮಾನಿಗಳು ಬಹಳ ವಿಶೇಷವಾಗಿ ಪ್ರಚಾರ ಮಾಡಿದ್ದಾರೆ. ಬೈಕ್ ಮೇಲೆ ಕ್ರಾಂತಿ ಚಿತ್ರದ ಪೋಸ್ಟರ್ ಅಂಟಿಸಿಕೊಂಡು ಅದೆಷ್ಟೋ ಅಭಿಮಾನಿಗಳು ಕ್ರಾಂತಿ ಚಿತ್ರದ ಪ್ರಚಾರವನ್ನು ಮಾಡಿದ್ದಾರೆ. ಇದೀಗ ಪ್ರಚಾರಮಾಡಿದ ಒಬ್ಬ ಅಭಿಮಾನಿ ಅವಿನಾಶ್ (Avinash) ತಮ್ಮ ಕೆಲಸ ಕಳೆದುಕೊಂಡಿದ್ದಾರೆ.
ಕ್ರಾಂತಿ ಪ್ರಚಾರ ಮಾಡಲು ಹೋಗಿ ಕೆಲಸ ಕಳೆದುಕೊಂಡ ದರ್ಶನ್ ಅಭಿಮಾನಿ
ದರ್ಶನ್ ಅಭಿಮಾನಿ ಅವಿನಾಶ್ ಎನ್ನುವಾತ ಕ್ರಾಂತಿ ಚಿತ್ರದ ಪ್ರಚಾರವನ್ನು ಮಾಡಿದ್ದಾರೆ. ತಮ್ಮ ಬೈಕ್ ನಲ್ಲಿ ಕ್ರಾಂತಿ ಚಿತ್ರದ ಪೋಸ್ಟರ್ ಅಂಟಿಸಿಕೊಂಡು ಕಳೆದ 2 ತಿಂಗಳಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಕಾರಣದಿಂದಾಗಿ ದರ್ಶನ್ ಅಭಿಮಾನಿ ಕೆಲಸಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ.
ಕೆಲಸ ಕಳೆದುಕೊಂಡು ಬೇಸರ ಹೊರಹಾಕಿದ ಅಭಿಮಾನಿ
“ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅದು ನನ್ನ ತಪ್ಪು ಎಂದೇ ಹೇಳಬಹುದು. ಏಕೆಂದರೆ ದರ್ಶನ್ ಸರ್ ಬೇಡ ಎಂದಿದ್ದಾರು. ಆದರೂ ನಾನು ಅವರ ಮಾತು ಕೇಳಲಿಲ್ಲ. ನನಗೆ ಮಾಹಿತಿ ನೀಡದೆ ಕಂಪನಿಯವರು ಕೆಲಸದಿಂದ ತೆಗೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬೇರೆ ಕಂಪನಿಯಲ್ಲಿ ಕೆಲಸ ದೊರೆಯುವುದು ಬಹಳ ಕಷ್ಟ.
ಮುಂದೆ ಏನು ಮಾಡಬೇಕು ತಿಳಿಯುತ್ತಿಲ್ಲ” ಎಂದು ಅವಿನಾಶ್ ಸೋಶಿಯಲ್ ಮೀಡಿಯಾದಲ್ಲಿ(Social Media) ವಿಡಿಯೋ ಮಾಡುವ ಮೂಲಕ ತಮ್ಮ ಬೇಸರ ಹೊರಹಾಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು, ದರ್ಶನ್ ಅವರಿಗೂ ತಲುಪಿದೆ.
ಕೆಲಸ ಕಳೆದುಕೊಂಡ ಅಭಿಮಾನಿಯ ಕಂಡು ದರ್ಶನ್ ಪ್ರತಿಕ್ರಿಯೆ
ಗುರುವಾರ ಬೆಂಗಳೂರಿನಲ್ಲಿ ಕ್ರಾಂತಿ ಸಕ್ಸಸ್ ಮೀಟ್ ನಡೆದಿದೆ. ಅಲ್ಲಿಗೆ ದರ್ಶನ್ ಅಭಿಮಾನಿ ಅವಿನಾಶ್ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಆತನನ್ನು ನೋಡಿದ ದರ್ಶನ್ ಏನಪ್ಪಾ ಕೆಲಸ ಕಳೆದುಕೊಂಡ್ಯ? ಎಂದು ಕೈ ತೋರಿಸಿ ಮುಂದೆ ಹೋಗಿದ್ದಾರೆ.
Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…
Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…
Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…
Maternity Leave For Govt Employees: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ…
Guarantee Scheme Latest Update: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ರಾಜ್ಯ್ದ ಜನತೆ ಸರ್ಕಾರದ ಉಚಿತ ಗ್ಯಾರಂಟಿ…
HSRP Number Plate New Update: ಸದ್ಯ ದೇಶದಲ್ಲಿ HSRP Number Plate ಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್…