Darshan Health: ಪೊಲೀಸರಿಗೆ ತಲೆ ನೋವಾದ ದರ್ಶನ್ ಆರೋಗ್ಯ ಸ್ಥಿತಿ, ಅಷ್ಟಕ್ಕೂ ನಟ ದರ್ಶನ್ ಆರೋಗ್ಯಕ್ಕೆ ಏನಾಗಿದೆ…?

ಪದೇ ಪದೇ ಆಸ್ಪತ್ರೆಗೆ ಹೋಗುತ್ತಿರುವ ದರ್ಶನ್

Actor Darshan Health Issues: ಸದ್ಯ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಕೋರ್ಟ್ ನ ಆದೇಶದಂತೆ ಸದ್ಯ ದರ್ಶನ್ ಹಾಗು ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ 17 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೋಪದ ಕೈಗೆ ಬುದ್ದಿ ಕೊಟ್ಟು ತಾವು ಮಾಡಿದ ಕೆಲಸಕ್ಕೆ ದರ್ಶನ್ ಹಾಗೂ ಪವಿತ್ರ ಗೌಡ ಪಶ್ಚತ್ತಾಪ ಪಡುತ್ತಿದ್ದಾರೆ. ತಾವಿದ್ದ ಪರಿಸ್ಥಿತಿಯನ್ನು ನೆನೆಸಿಕೊಂಡು ಕಣ್ಣೀರಿಡುತ್ತಿದ್ದಾರೆ.

Actor Darshan Health Issues
Image Credit: Pinkvilla

ಪದೇ ಪದೇ ಆಸ್ಪತ್ರೆಗೆ ಹೋಗುತ್ತಿರುವ ದರ್ಶನ್
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ ನಟ ದರ್ಶನ್ ಗೆ ಪರಪ್ಪನ ಅಗ್ರಹಾರದ ಊಟ ಸೇರುತ್ತಿಲ್ಲ. ಸೆಲೆಬ್ರಿಟಿ ಜೀವನ ನೆಡೆಸುತ್ತಿದ್ದ ದರ್ಶನ್ ಗೆ ಜೈಲಿನಲ್ಲಿ ನೀಡುವ ಅನ್ನ, ತರಕಾರಿ ಸಾರು ಸೇರುತ್ತಿಲ್ಲ. ಇದರಿಂದ ಬೇಸರಗೊಂಡ ದರ್ಶನ್ ಗೆ ಜೂನ್‌ 28 ರಂದು ರಾತ್ರಿ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ.

ಅನ್ನ, ತರಕಾರಿ ಸಾರು ತಿಂದು ಬೇಸರಗೊಂಡಿದ್ದ ದಾಸನಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿ ನಿದ್ರೆಗೆ ಜಾರಿದ್ದಾರೆ. ಮರುದಿನ ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್ ಜೈಲಿನ ಕೊಠಡಿಯಲ್ಲೇ ವಾಕಿಂಗ್ ಮಾಡಿದ್ದಾರೆ. ಸದ್ಯ ಪದೇ ಪದೇ ಅನಾರೋಗ್ಯದ ನೆಪ ಹೇಳಿ ದರ್ಶನ್ ಆಸ್ಪತ್ರೆಗೆ ತೆರಳುತ್ತಿರುವುದು ಜೈಲಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ. ಇದರ ಮಧ್ಯೆ ಜೈಲಿನ ಕೈದಿಗಳು ನಟ ದರ್ಶನ್‌ ಅವರನ್ನು ನೋಡಲು ಹರಸಾಹಸ ಪಡುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

Actor Darshan In Jail
Image Credit: Masala

Join Nadunudi News WhatsApp Group

Join Nadunudi News WhatsApp Group