Actor Shivarajkumar: ದರ್ಶನ್ ಗೆ ಚಪ್ಪಲಿ ಎಸೆತದ ಬಗ್ಗೆ ನೋವಿನಲ್ಲಿ ಮಾತನಾಡಿದ ಶಿವಣ್ಣ, ವಿಡಿಯೋ ವೈರಲ್.

Actor Shivarajkumar: ಕನ್ನಡದ ಸ್ಟಾರ್ ನಟ ದರ್ಶನ್ ಗೆ ಚಪ್ಪಲಿ ಎಸೆದವರ ಬಗ್ಗೆ ಇದೀಗ ನಟ ಶಿವರಾಜ್ ಕುಮಾರ್ (Shivarajkumar) ಕಿಡಿಕಾರಿದ್ದಾರೆ. ನಟ ದರ್ಶನ್ ಪರವಾಗಿ ಹಲವಾರು ನಟ ನಟಿಯರು ನಿಂತಿದ್ದಾರೆ. ಅದಲ್ಲದೆ ಚಪ್ಪಲಿ ಎಸೆದವರ ಬಗ್ಗೆ ತುಂಬಾ ಗಂಭೀರವಾಗಿ ಮಾತನಾಡಿದ್ದಾರೆ.

Shivanna spoke in pain about throwing the shoe to Darshan
Image Credit: jsnewstimes

ಡಿ. ಬಾಸ್ ಬೋಂಬೆ ಬೊಂಬೆ ಹಾಡು ರಿಲೀಸ್ ಕಾರ್ಯಕ್ರಮ
ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂಭ ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆಯಿತು. ಡಿ ಬಾಸ್ ಅಭಿಮಾನಿಗಳು ಅಪ್ಪು (Appu) ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು.

ಈ ಕಾರ್ಯಕ್ರಮದ ಆಯೋಜನೆ ಅದಾಗಲೇ ದರ್ಶನ್ ಹಾಗು ಪುನೀತ್ (Puneeth) ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿತ್ತು. ಹೊಸ ಪೇಟೆಗೆ ಬಂದ ನಟ ದರ್ಶನ್ ಅವರು ಪುನೀತ್ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಪರಿಸ್ಥಿತಿ ಕೊಂಚ ತಣ್ಣಗಾಗಿತ್ತು. ಕ್ರಾಂತಿ ಚಿತ್ರದ ಎರಡನೇ ಸಾಂಗ್ ಬೋಂಬೆ ಬೋಂಬೆ ಹಾಡು ರಿಲೀಸ್ ಕಾರ್ಯಕ್ರಮ ಸರಾಗವಾಗಿ ಆರಂಭವಾಯಿತು.

ಇದೀಗ ಹಾಡು ಬಿಡುಗಡೆಯಾಗುವ ಮುನ್ನ ಕ್ರಾಂತಿ ಸಾಂಗ್ ರಿಲೀಸ್ ಕಾರ್ಯಕ್ರಮದ ವೇದಿಕೆ ಮೇಲೆ ಪನೀತ್ ಸಿನಿಮಾ ಸಾಂಗ್ ಹಾಕಿಸಿ ಕುಣಿದ ಅಪ್ಪು ಅಭಿಮಾನಿಗಳೇ ಈ ಕೆಲಸ ಮಾಡಿದ್ದಾರೆ ಎಂದು ನಟ ದರ್ಶನ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನೂ ಹಾಕುತ್ತಿದ್ದಾರೆ.

Join Nadunudi News WhatsApp Group

Actor Shiva Rajkumar spoke about throwing a shoe at Darshan
Image Credit: ottplay

ಇದರ ಬೆನ್ನಲ್ಲೇ ರಾಜ್ ಕುಟುಂಬದ ಅಭಿಮಾನಿಗಳು ಈ ರೀತಿ ಮಾಡಲ್ಲ, ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದು ಶಿವರಾಜ್ ಕುಮಾರ್, ರಾಘಣ್ಣ ಮತ್ತು ಅಪ್ಪು ಫ್ಯಾನ್ಸ್ ವಾದಿಸುತ್ತಿದ್ದಾರೆ. ಈ ಕುರಿತಾಗಿ ಶಿವರಾಜ್ ಕುಮಾರ್ ಅವರ ಬಳಿ ಕೆಲ ಅಭಿಮಾನಿಗಳು ದಯಾಬಿಟ್ಟು ಇದರ ಕುರಿತು ಮಾತನಾಡಿ ಎಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ನಟ ಶಿವರಾಜ್ ಕುಮಾರ್ ಅವರ ಮಾತುಕತೆ
ನಿನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತೆ ಇರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರು ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ ದ್ವೇಷ ಅಗೌರವನ್ನಲ್ಲ ಎಂದು ಶಿವಣ್ಣ ಹೇಳಿದ್ದಾರೆ.

Actor Shiva Rajkumar spoke about throwing a shoe at actor Darshan during the promotion of Kranti

Join Nadunudi News WhatsApp Group