Ads By Google

Darshan Arrest: ದರ್ಶನ್ ಅಪರಾಧಿಯೆಂದು ಸಾಭೀತಾದರೆ ಎಷ್ಟು ವರ್ಷ ಜೈಲು ಗೊತ್ತಾ…? ಇಲ್ಲಿದೆ ಕಾನೂನು ನಿಯಮ

Ads By Google

Actor Darshan Latest Update: ಸ್ಯಾಂಡಲ್ ವುಡ್ ನಲ್ಲಿ ವಿಚ್ಛೇದನದ ಸುದ್ದಿಗಳು ಹೈಲೈಟ್ ಆಗುತ್ತಿದ್ದಂತೆ ಇದೀಗ ಕನ್ನಡಿಗರಿಗೆ ಶಾಕ್ ನೀಡುವುನತಃ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ಇದೀಗ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಲಾಗಿದೆ. ಇನ್ನು ಕೊಲೆ ಆರೋಪ ಸಾಬೀತಾದರೆ ದರ್ಶನ್ ಜೈಲು ಪಾಲಾಗುವುದಂತೂ ಖಂಡಿತ. ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ…? ಎನ್ನುವ ಬಗ್ಗೆ ಕಾನೂನಿನ ನಿಯಮ ಏನಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: NDTV

ಕೊಲೆ ಆರೋಪದಲ್ಲಿ ದರ್ಶನ್ ಅರೆಸ್ಟ್
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ರೇಣುಕಾ ಸ್ವಾಮಿಯನ್ನು ಹತ್ಯೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ನಟ ದರ್ಶನ್ ಸೂಚನೆ ಮೇರೆಗೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಸಂಚಲನ ಮೂಡಿಸಿದೆ. ನಟ ದರ್ಶನ್ ಅವರನ್ನು ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಪವಿತ್ರಾ ಗೌಡ ದರ್ಶನ್ ಜೊತೆ ಕ್ಲೋಸ್ ಆಗಿದ್ದಾರೆ. ದರ್ಶನ್ ಜೊತೆ ಇರೋ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದರು. ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ನಾಲ್ವರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆ ವೇಳೆ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ರೇಣುಕಾ ಸ್ವಾಮಿ ಕೊಲೆ ನಡೆದಿದೆ ಎನ್ನುವ ಬಗ್ಗೆ ವರದಿಯಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.

Image Credit: The Hindu

ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ…?
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ಅನ್ನು ಲಾರ್ಡ್ ಮೆಕಾಲೆ 1860 ರಲ್ಲಿ ಜಾರಿಗೊಳಿಸಿದರು. ಅಂದಿನಿಂದ ಈ ಕಾನೂನನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. ಇದು ಕೊಲೆಯ ಅಪರಾಧ ಮತ್ತು ಕೊಲೆಗೆ ಶಿಕ್ಷೆಯನ್ನು ವ್ಯಾಖ್ಯಾನಿಸುತ್ತದೆ. ಸರಳವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಯ ಸಾವಿಗೆ ಕಾರಣವಾದರೆ, ಅವನ ಮೇಲೆ IPC ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಆರೋಪ ಹೊರಿಸಬಹುದಾಗಿದೆ. ಸಾವನ್ನು ಉಂಟುಮಾಡುವ ಉದ್ದೇಶವು ಪೂರ್ವಯೋಜಿತವಾಗಿರಬೇಕಾಗಿಲ್ಲ.

ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆಗೆ ಶಿಕ್ಷೆಯು ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಾಗಿದೆ. ಪ್ರತಿಯೊಂದು ಪ್ರಕರಣದ ಸತ್ಯ ಮತ್ತು ಸಂದರ್ಭಗಳ ಆಧಾರದ ಮೇಲೆ ಶಿಕ್ಷೆಯನ್ನು ನಿರ್ಧರಿಸುವ ವಿವೇಚನೆಯನ್ನು ನ್ಯಾಯಾಲಯ ಹೊಂದಿದೆ. ಅಸಾಧಾರಣ ಕ್ರೌರ್ಯ ಅಥವಾ ಕ್ರೌರ್ಯದೊಂದಿಗೆ ಕೊಲೆ ಪ್ರಕರಣಗಳಲ್ಲಿ, ನ್ಯಾಯಾಲಯವು ಮರಣದಂಡನೆಯನ್ನು ನೀಡಬಹುದು. ಇದು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗುತ್ತದೆ. ಹೆಚ್ಚುವರಿಯಾಗಿ, ನೀವು ದಂಡಗಳು, ಸಮುದಾಯ ಸೇವೆ ಮತ್ತು ಗಡೀಪಾರು ಮುಂತಾದ ಇತರ ಶಿಕ್ಷೆಗಳನ್ನು ವಿಧಿಸಬಹುದು.

Image Credit: Oneindia
Ads By Google
Pushpalatha Poojari

Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: actor darshan Actor Darshan Latest Update challenghing star darshan arrest challenging star darshan Darshan Arrest darshan arrest reason pavithra gowda and darshan reason for darshan arrest

Recent Stories

  • Blog
  • Business
  • Information
  • Main News
  • money
  • Technology

Tata Car Discount: ಇದೆ ನೋಡಿ ಬಡವರ ರೇಂಜ್ ರೋವರ್ ಕಾರ್, ಕಡಿಮೆ ಬೆಲೆಗೆ ಖರೀದಿ ಮಾಡಬಹುದು

Tata Safari And Tata Harrier Discount Details: ಭಾರತೀಯ ಮಾರುಕಟ್ಟೆಯಲ್ಲಿ ಹತ್ತು ಹಲವು ಟಾಪ್ ಬೆಸ್ಟ್ ಬ್ರಾಂಡ್ ನ…

2024-07-04
  • Headline
  • Information
  • Main News
  • money
  • Press
  • Regional

Yuva Nidhi 2024: ಯುವ ನಿಧಿ ಹಣ ಬೇಕಾದರೆ ಎಲ್ಲರೂ ಈ ಕೆಲಸ ಮಾಡಬೇಕು, ಬಂತು ಹೊಸ ನಿಯಮ

Yuva Nidhi Latest Update: ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಯ ವೇಳೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿರುವ ಬಗ್ಗೆ…

2024-07-04
  • Business
  • Information
  • Main News
  • money

Loan Updates: ಬ್ಯಾಂಕ್ ಸಾಲ ಮಾಡುತ್ತೀರಾ…? ಎಚ್ಚರ… ಈ ರೀತಿ ಸಾಲ ಮಾಡಿದರೆ ಮನೆ ಮಾರಿಕೊಳ್ಳಬೇಕಾಗುತ್ತದೆ.

Good Loan v/s Bad Loan: ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಎದುರಾದಾಗ ಪ್ರತಿಯೊಬ್ಬರೂ ಕೂಡ ಸಾಲದ ಮೊರೆ ಹೋಗುತ್ತಾರೆ. ದೇಶದ…

2024-07-04
  • Information
  • Main News
  • money
  • Money Investment
  • Regional

Atal Pension: ಕೇವಲ 7 ರೂ. ಹೂಡಿಕೆಯಲ್ಲಿ ಸಿಗಲಿದೆ 5000 ರೂ. ಪಿಂಚಣಿ, ಇಂದೇ ಹೂಡಿಕೆ ಆರಂಭಿಸಿ.

Atal Pension Yojana Investment Details: ನಿವೃತ್ತಿಯ ನಂತರ ಜೀವನ ಆರ್ಥಿಕ ವಿಷಯವಾಗಿ ಸ್ವಲ್ಪ ಕಷ್ಟವಾಗುವುದು ಸಹಜ. ನಿವೃತ್ತಿಯ ನಂತರ…

2024-07-04
  • Blog
  • Business
  • Information
  • Main News
  • money
  • Technology

Ather Rizta EV: ಹೊಸ ಅಥೇರ್ Rizta ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ಮೈಲೇಜ್ ಎಷ್ಟು, ಬೆಸ್ಟ್ ಫ್ಯಾಮಿಲಿ ಸ್ಕೂಟರ್.

Ather Rizta Electric Scooter Price And Feature: ಭಾರತೀಯ ಆಟೋ ವಲಯದಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ. ಸದ್ಯ…

2024-07-04
  • Education
  • Information
  • Main News
  • Press

Board Exam Update: 5, 8, ಮತ್ತು 9ನೇ ತರಗತಿಯ ಮಕ್ಕಳಿಗೆ ಗುಡ್ ನ್ಯೂಸ್, ಪರೀಕ್ಷಾ ನಿಯಮದಲ್ಲಿ ದೊಡ್ಡ ಬದಲಾವಣೆ

Board Exam Cancelled For 5, 8, And 9th Students: 2024 -25 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು…

2024-07-04