Image Source: India Today
Prabhas Marriage: ಬಾಹುಬಲಿ ನಟ ಪ್ರಭಾಸ್ (Prabhas) ಅವರ ಮದುವೆಯ ವಿಚಾರಗಳು ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದರು. ಇದೀಗ ಪ್ರಭಾಸ ಅವರ ಮದುವೆಯ ಬಗ್ಗೆ ಹೊಸ ಮಾಹಿತಿ ಲಭಿಸಿದೆ.
ಮದುವೆಯ ಯೋಜನೆಯ ಬಗ್ಗೆ ಮಾತನಾಡಿದ ಪ್ರಭಾಸ್
ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅನ್ ಸ್ಟಾಪಬಲ್ ವಿಥ್ ಏನ್ ಬಿಕೆ ಚಾಟ್ ಶೋ (Unstoppable With NBK Chat Show) ನಲ್ಲಿ ಬಾಲಯ್ಯ ಅವರು ಪ್ರಭಾಸ್ ಅವರ ಮದುವೆಯ ಪ್ಲಾನ್ ಗಳ ಬಗ್ಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾಸ್ ಅವರು ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಅದು ಯಾವಾಗ ಸಂಭವಿಸುತ್ತದೆ ಎಂಬುದರ ಯಾವುದೇ ಖಚಿತ ಐಡಿಯಾ ಇಲ್ಲ ಎಂದು ಅವರು ಹೇಳಿದ್ದಾರೆ. ಮದುವೆಗಾಗಿ ತಮ್ಮ ಕುಟುಂಬದಿಂದ ಬರುವ ಒತ್ತಡವನ್ನು ನಿಭಾಯಿಸುವ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.
ಮದುವೆಯ ಯೋಗ ಇನ್ನು ಬಂದಿಲ್ಲ
ಬಾಲಕೃಷ್ಣ (Balakrishna) ಅವರು ಕೇಳಿದ ಪ್ರಶ್ನೆಗೆ ಪ್ರಭಾಸ್ ಉತ್ತರಿಸಿದ್ದಾರೆ. ಖಂಡಿತವಾಗಿ ನಾನು ಮದುವೆಯಾಗುತ್ತೇನೆ. ಆದರೆ ಯಾವಾಗ ಮದುವೆಯಾಗುತ್ತೇನೆ ಎಂದು ನನಗೆ ಗೊತ್ತಿಲ್ಲ. ಮದುವೆಯ ಬಗ್ಗೆ ಇನ್ನು ಐಡಿಯಾ ಮಾಡಿಲ್ಲ. ಆದರೆ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ. ನನ್ನ ಮದುವೆಯ ಯೋಗ ಇನ್ನು ಬಂದಿಲ್ಲ ಎಂದಿದ್ದಾರೆ.
ಸಲ್ಮಾನ್ ಖಾನ್ (Salman Khan) ನಂತರ ಮದುವೆಯಾಗುತ್ತೇನೆ
ಇನ್ನು ಬಾಹುಬಲಿ ನಟ ಪ್ರಭಾಸ್ ಅವರ ಮದುವೆ ವಿಚಾರವಾಗಿ ಕಾರ್ಯಕ್ರಮ ಒಂದರಲ್ಲಿ ಪ್ರಶ್ನೆ ಮಾಡಲಾಗಿತ್ತು. ಈ ಪ್ರಶ್ನೆಗೆ ಪ್ರಭಾಸ್ ಉತ್ತರಿಸಿದ್ದರು. ನಟ ಸಲ್ಮಾನ್ ಖಾನ್ ಮದುವೆಯಾದ ನಂತರ ನಾನು ಮದುವೆಯಾಗುತ್ತೇನೆ ಎಂದು ಪ್ರಭಾಸ ಉತ್ತರಿಸಿದ್ದರು. ಈ ವಿಷಯ ಸೋಶಿಯಲ್ ಮಿಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಇನ್ನು ಬಾಹುಬಲಿ ನಾಯಕಿ ಅನುಷ್ಕಾ (Anushka) ಅವರ ಜೊತೆ ಪ್ರಭಾಸ ಪ್ರೀತಿಯಲ್ಲಿದ್ದರು ಎಂದು ಹೇಳಲಾಗಿತ್ತು. ಆದರೆ ಇವರಿಬ್ಬರ ನಡುವೆ ಇರುವುದು ಸ್ನೇಹ ಎಂದು ಹೇಳಿಕೊಂಡಿದ್ದಾರೆ. ನಂತರ ಕೃತಿ ಸನೋನ್ (Krathi Sanoon) ಅವರ ಜೊತೆ ಪ್ರಭಾಸ್ ಡೇಟ್ ಮಾಡುತ್ತಿದ್ದಾರೆ ಇಬ್ಬರು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ನಂತರ ಕೃತಿ ಸನೋನ್ ಅವರು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದರು.
Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…