Prem Letter: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರಬರೆದ ನಟ ಪ್ರೇಮ್, ಅಷ್ಟಕ್ಕೂ ಪತ್ರದಲ್ಲಿ ಬರೆದಿದ್ದು ಏನು…?
ಪ್ರಧಾನಿ ಅವರಿಗೆ Prem ಬರೆದ ಪತ್ರ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
Actor Prem Letter To PM Modi: ಸದ್ಯ ಕರ್ನಾಟಕದಲ್ಲಿ ಕಾವೇರಿ ನೀರಿನ ಹೋರಾಟದ (Cauvery Protest) ಕಿಚ್ಚಿ ಇನ್ನು ಕಡಿಮೆ ಆಗಿಲ್ಲ. ದಿನದಿಂದ ದಿನಕ್ಕೆ ಕಾವೇರಿ ನೀರಿನ ಹೋರಾಟ ಹೆಚ್ಚು ಚರ್ಚೆಯನ್ನು ಹುಟ್ಟುಹಾಕಿದೆ. ರಾಜ್ಯದಾದ್ಯಂತ ಕಾವೇರಿ ನೀರಿಗಾಗಿ ಹೋರಾಟ ನಡೆಸಲಾಗುತ್ತಿದೆ.
ತಮಿಳುನಾಡಿನ ವಿರುದ್ಧ ಕರ್ನಾಟಕ ಕಿಡಿಕಾರುತ್ತಿದೆ. ಇನ್ನು ತಮಿಳುನಾಡಿದೆ ನೀರು ಬಿಡುತ್ತಿರುವ ಸರ್ಕಾರವನ್ನು ಖಂಡಿಸಿ ಈಗಾಗಲೇ ರಾಜ್ಯದ ರೈತರು, ಕನ್ನಡ ಪರ ಸಂಘಟನೆಕಾರರು ಬಂಧ್ ಗೆ ಕರೆ ನೀಡಿದ್ದರು.
ಕಾವೇರಿ ಹೋರಾಟಕ್ಕೆ ಸೆಲೆಬ್ರೆಟಿಗಳ ಸಾಥ್
Septembar 26 ರಂದು ಬೆಂಗಳೂರು ಹಾಗೆಯೇ Septembar 29 ರಂದು ಅಖಂಡ ಕರ್ನಾಟಕಾವನ್ನೇ ಬಂದ್ ಮಾಡಲಾಗಿತ್ತು. ಕಾವೇರಿ ನೀರಿಗಾಗಿ ರೈತರು, ಸಂಘಟನೆಕಾರಾ ಜೊತೆ ಸ್ಯಾಂಡಲ್ ವುಡ್ ನಟ ನಟಿಯರು ಕೂಡ ಸಾಥ್ ನೀಡಿದ್ದರು.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ರಾಜ್ಯದ ಕೋಟ್ಯಾಂತರ ಜನರು ದ್ವನಿಯೆತ್ತಿದ್ದರು. ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನೆನಪಿರಲಿ ಪ್ರೇಮ್ ಅವರು ಪ್ರಧಾನಿ ಪತ್ರ ಬರೆಯುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪ್ರಧಾನಿ ಅವರಿಗೆ Prem ಬರೆದ ಪತ್ರ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
View this post on Instagram
ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರಬರೆದ ನಟ ಪ್ರೇಮ್
ರಾಜ್ಯದಲ್ಲಿ ಕಾವೇರಿ ವಿವಾದ ಇನ್ನು ಕೂಡ ನಡೆಯುತ್ತಲೇ ಇದೆ. ರಾಜ್ಯದ ರೈತರು, ಕನ್ನಡ ಪರ ಹೋರಾಟಗಾರರು ಹಗಲು ರಾತ್ರಿ ಎನ್ನದೆ ಹೊರಟದ್ಲಲಿ ತೊಡಗಿದ್ದಾರೆ. ಹಿರಿಯ ಚಳುವಳಿಗಾರ ವಾಟಾಳ್ ನಾಗರಾಜ್ ಅವರು ಕಾವೇರಿ ಹೋರಾಟಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ.
ಇವರೆಲ್ಲರ ಜೊತೆಗೆ ಶಿವರಾಜ್ ಕುಮಾರ್ (Shiva Rajkumar) ಸೇರಿದಂತೆ ಕನ್ನಡದ ಸಾಕಷ್ಟು ಸೆಲೆಬ್ರೆಟಿಗಳು ಕಾವೇರಿ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಸದ್ಯ ನೆನಪಿರಲಿ ಪ್ರೇಮ್ ಅವರು ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಕಾವೇರಿ ಹೋರಾಟಗಾರರಿಗೆ ಬೆಂಬಲ ನೀಡಿದ್ದಾರೆ.
ಅಷ್ಟಕ್ಕೂ ಪತ್ರದಲ್ಲಿ ಪ್ರೇಮ್ ಬರೆದಿದ್ದು ಏನು…?
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಟ ಪ್ರೇಮ್ ರಕ್ತದಲ್ಲಿ ಪಾತ್ರವನ್ನು ಬರೆದು ಮೋದಿ ಅವರಿಗೆ ರಾಜ್ಯದ ಜನತೆಯ ಕಷ್ಟ ಏನೆನ್ನುವುದನ್ನು ತಿಳಿಸಿದ್ದಾರೆ. ‘Please Do Justice For Our Cauvery And Karnataka’ ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾವಾಗಾಯುತ್ತಿದೆ. ಕಾವೇರಿ ನಮ್ಮದು ಎಂದು ಪತ್ರದಲ್ಲಿ ಪ್ರೇಮ್ ಬರೆದಿದ್ದಾರೆ. ಈ ಮೂಲಕ ಪ್ರೇಮ್ ಕರ್ನಾಟಕಕ್ಕೆ ಕಾವೇರಿ ವಿಚಾರವಾಗಿ ನ್ಯಾಯ ಒದಗಿಸಿ ಎಂದು ಮೋದಿ (Narendra Modi) ಅವರ ಬಳಿ ಮನವಿ ಮಾಡಿದ್ದಾರೆ.