Ads By Google

Ramya About Rakshitha: ರಮ್ಯಾ ಮತ್ತು ರಕ್ಷಿತಾ ನಡುವೆ ಹುಳಿ ಹಿಂಡಿದ್ದು ಯಾರು, ಸತ್ಯ ಬಿಚ್ಚಿಟ್ಟ ನಟಿ ರಮ್ಯಾ.

Actress Ramya said on Weekend with Ramesh that actor Mahesh Babu was the reason behind the rift between me and Rakshita.
Ads By Google

Actress Ramya In Weekend With Ramesh: ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ (Ramya) ಅವರ ಸುದ್ದಿಗಳು ಬಾರಿ ವೈರಲ್ ಆಗುತ್ತಿದೆ. ನಟಿ ರಮ್ಯಾ ಈ ವಾರದ ವೀಕೆಂಡ್ ವಿಥ್ ರಮೇಶ್ ಸೀಸನ್ 5 (Weekend With Ramesh) ಸಂಚಿಕೆಯಲ್ಲಿ ಮೊದಲ ಸಾಧಕಿಯಾಗಿ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ರಮ್ಯಾ ಅವರ ಸಿನಿ ಪಯಣದ ಬಗ್ಗೆ ವೀಕೆಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.

Image Credit: filmibeat

ಈಗಾಗಲೆ ರಮ್ಯಾ ಅವರ ಪರಿಚಯದ ಶೂಟಿಂಗ್ ಮುಗಿದಿದೆ. ಜಿ ವಾಹಿನಿ ಇದೀಗ ರಮ್ಯಾ ಅವರ ಸಾಧನೆಯ ಪರಿಚಯದ ಪ್ರೋಮೋವನ್ನು (Weekend With Ramesh Promo) ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಸಾಕಷ್ಟು ವಿಚಾರಗಳನ್ನು ವೇದಿಕೆ ಮೇಲೆ ಹಂಚಿಕೊಂಡು ಭಾವುಕರಾಗಿದ್ದಾರೆ.

ಈ ವೇಳೆ ನಟಿ ಸ್ಯಾಂಡಲ್ ವುಡ್ ನ ಇನ್ನೊಂದು ಸ್ಟಾರ್ ನಟಿಯಾದ ರಕ್ಷಿತಾ ಹಾಗೂ ರಮ್ಯಾ ಅವರ ಮದ್ಯೆ ಸ್ಪರ್ಧೆ ತಂದಿಟ್ಟವರ ಬಗ್ಗೆ ಮಾತನಾಡಿದ್ದಾರೆ.

ಮೊದಲ ಸಂಚಿಕೆಯ ಸಾಧಕಿ ಮೋಹಕತಾರೆ ರಮ್ಯಾ
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೋಹಕತಾರೆ ರಮ್ಯಾ  ವೀಕೆಂಡ್ ವಿಥ್ ರಮೇಶ್ ನ ಶೋನಲ್ಲಿ ಮೊದಲ ಸಾಧಕಿಯಾಗಲಿದ್ದಾರೆ. ರಮ್ಯಾ ಅವರ ವೃತ್ತಿ ಜೀವನ, ಬಾಲ್ಯದ ನೆನಪುಗಳು, ರಾಜಕೀಯ ನಿಲುವಿನ ಬಗ್ಗೆ ಕನ್ನಡಿಗರಿಗೆ ವೀಕೆಂಡ್ ವಿಥ್ ರಮೇಶ್ ಎಪಿಸೋಡ್ ನಲ್ಲಿ ಮಾಹಿತಿ ಸಿಗಲಿದೆ.

Image Credit: timesofindia.indiatimes

ನಟ, ನಿರೂಪಕ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ನಟಿ ರಮ್ಯಾ ತಮ್ಮ ಸಿನಿ ಪಯಣದ ಕಥೆಯನ್ನು ಹಂಚಿಕೊಳ್ಳಲಿದ್ದಾರೆ.

ರಕ್ಷಿತಾ ಹಾಗೂ ರಮ್ಯಾ ನಡುವೆ ಸ್ಪರ್ಧೆ ತಂದಿಟ್ಟವರು ಯಾರು ಎಂದು ಹೇಳಿದ ಮೋಹಕತಾರೆ
ರಕ್ಷಿತಾ (Rakshitha) ಹಾಗೂ ರಮ್ಯಾ ನಡುವೆ ಸ್ಪರ್ಧೆ ತಂದಿಟ್ಟವರ ಬಗ್ಗೆ ನಟಿ ರಮ್ಯಾ ಮಾತನಾಡಿದ್ದಾರೆ. ವೀಕೆಂಡ್ ವಿಥ್ ರಮೇಶ್ ಶೋನ ಪ್ರೊಮೊನಲ್ಲಿ ರಮ್ಯಾ ಅವರು ಹಂಚಿಕೊಂಡ ಸಾಕಷ್ಟು ವಿಚಾರಗಳು ತಿಳಿದಿವೆ. ಶೋ ನಲ್ಲಿ ರಮ್ಯಾ ಅವರ ಸ್ನೇಹಿತರು, ಬಂದುಗಳು ಹಾಗೆಯೆ ಅರಸು, ಆಕಾಶ್ ಚಿತ್ರದ ನಿರ್ದೇಶಕ ಮಹೇಶ್ ಬಾಬು ಅವರು ಕೂಡ ಬಂದಿದ್ದಾರೆ.

Image Credit: timesofindia.indiatimes

ಈ ವೇಳೆ ನಟಿ ನಿರ್ದೇಶಕ ಮಹೇಶ್ ಬಾಬು ಅವರ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಮಹೇಶ್ ಬಾಬು ಅವರ ಕಡೆ ತಿರುಗಿ ಇವರೇ ನೋಡಿ ನನ್ನ ಹಾಗೂ ರಕ್ಷಿತಾ ಮದ್ಯೆ ಕಾಂಪಿಟೇಷನ್ ತಂದಿಟ್ಟಿದವರು ಎಂದು ಹೇಳಿದ್ದಾರೆ. ಈ ವೇಳೆ ನಿರ್ದೇಶಕರು ನಗು ಬೀರಿದ್ದಾರೆ. ಇನ್ನು ನಟಿ ರಮ್ಯಾ ಅವರ ಬದುಕಿನ ಚಿತ್ರವನ್ನು ಶನಿವಾರದ ಸಂಚಿಕೆಯಲ್ಲಿ ಇನ್ನಷ್ಟು ತಿಳಿಯಬಹುದಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in