Sandalwood Queen Ramya: ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ (Ramya) ಅವರು ವೀಕೆಂಡ್ ವಿಥ್ ರಮೇಶ್ ಸೀಸನ್ 5 (Weekend With Ramesh Season 5)ಗೆ ಆಗಮಿಸಿ ತಮ್ಮ ಲೈಫ್ ಜರ್ನಿಯ ಬಗ್ಗೆ ಮನಮುಕ್ತವಾಗಿ ಹೇಳಿಕೊಂಡರು.
ಇನ್ನು ನಟಿ ರಮ್ಯಾ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅಪ್ಪನನ್ನು ನೆನೆದು ಕಣ್ಣೀರು ಹಾಕಿದ್ದರು. ನನ್ನ ತಂದೆ ಸಾವನ್ನಪ್ಪಿದ ಬಳಿಕ ನಾನು ಬದುಕೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ಅಪ್ಪನನ್ನು ಕಳೆದುಕೊಂಡ ಮೇಲೆ ಸಾಯುವ ನಿರ್ಧಾರ ಮಾಡಿದ ನಟಿ ರಮ್ಯಾ
ವೀಕೆಂಡ್ ವಿತ್ ರಮೇಶ್ ಸೀಸನ್ 5 ನ ಮೊದಲ ಎಪಿಸೋಡ್ ನಲ್ಲಿ ರಮ್ಯಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೆಯವರು ನನ್ನ ತಂದೆ, ಮೂರನೆಯವರು ರಾಹುಲ್ ಗಾಂಧಿ ಎಂದು ಹೇಳಿದರು.
ನಾನು ಸುಳ್ಳು ಹೇಳಲ್ಲ, ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನೇ ಕೊನೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ, ಆಗ ನನಗೆ ರಾಹುಲ್ ಗಾಂಧಿ ಅವರು ತುಂಬಾ ಸಹಾಯ ಮಾಡಿದರು. ಸಾವು ಅಂದರೇನು, ಬದುಕು ಎಂದರೇನು, ನಾನು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಮೂರನೇ ಪ್ರಭಾವಶಾಲಿ ವ್ಯಕ್ತಿ ಎಂದು ನಟಿ ರಮ್ಯಾ ಹೇಳಿಕೊಂಡರು.
ತಮ್ಮ ಕಷ್ಟದ ಜೀವನದ ಬಗ್ಗೆ ಹೇಳಿಕೊಂಡ ನಟಿ ರಮ್ಯಾ
ತಂದೆ ಸಾವಿನ ನಂತರ ನಟಿ ರಮ್ಯಾ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.
ನಟಿ ರಮ್ಯಾ ಅವರು ತಂದೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದಿದ್ದರು, ಅವರ ಸಾವು ನಟಿಗೆ ದೊಡ್ಡ ಆಘಾತವಾಗಿತ್ತು. ಈ ದುಃಖದಿಂದ ಹೊರಬರಲು ರಮ್ಯಾ ಅವರಿಗೆ ಕಷ್ಟವಾಗಿತ್ತಂತೆ. ಇದು ನನ್ನ ಜೀವನದ ಅತಿ ಕಷ್ಟದ ದಿನಗಳು ಎಂದು ನಟಿ ರಮ್ಯಾ ಹೇಳಿದ್ದಾರೆ.