Image Credit: Original Source
Ananth Ambani Marriage Latest Update: ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ (Mukesh ambani) ಪುತ್ರನ ಮದುವೆಯ ದಿನಾಂಕ ಹತ್ತಿರವಾಗುತ್ತಿದೆ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಅಂಬಾನಿ ತಮ್ಮ ಪುತ್ರದ ಮದುವೆಯನ್ನು ನೆರವೆರಿಸಲಿದ್ದಾರೆ. ಇನ್ನು July 12 ರಂದು Ananth Ambani ಹಾಗೂ Radhika Merchant ಅವರ ವಿವಾಹ ನೆರವರೆಯಲಿದೆ. ಅಂಬಾನಿ ಕುಟುಂಬವು ಮದುವೆಯ ಸಿದ್ದತೆಯಲ್ಲಿ ತೊಡಗಿಕೊಂಡಿದೆ.
ಸದ್ಯ ಅನಂತ್ ಅಂಬಾನಿ ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆ Ananth Ambani ಹಾಗೂ Radhika Merchant ಅವರ ವಿವಾಹದ ಬಗ್ಗೆ ಒಂದೊಂದು ಸುದ್ದಿ ಹೈಲೈಟ್ ಆಗುತ್ತಿದೆ. ಅನಂತ್ ಅಂಬಾನಿ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆದ ಬೆನ್ನಲ್ಲೇ ಅನಂತ್ ಅಂಬಾನಿ ಮದುವೆಗೆ ಬರುವವರಿಗೆ ನೀಡಲಾಗುವ ಗಿಫ್ಟ್ ಬಗ್ಗೆ ಸದ್ಯ ಚರ್ಚೆ ಶುರುವಾಗಿದೆ. ಅನಂತ್ ಮತ್ತು ರಾಧಿಕಾ ಮದುವೆಗೆ ಬರುವವರಿಗೆ ಈ ಎಲ್ಲ ದುಬಾರಿ ಗಿಫ್ಟ್ ಕೊಡಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ.
ಭರ್ಜರಿಯಾಗಿ ನಡೆಯುತ್ತಿದೆ ಅಂಬಾನಿ ಮಗನ ಮದುವೆಯ ತಯಾರಿ
ಇನ್ನು ಅನಂತ್ ಅಂಬಾನಿ ಮದುವೆಯ ಪೂರ್ವ ಕಾರ್ಯಕ್ರಮಗಳೇ ಬಾರಿ ಸದ್ದು ಮಾಡಿತ್ತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮೊದಲ ವಿವಾಹ ಪೂರ್ವ ಆಚರಣೆಯನ್ನು ಮಾರ್ಚ್ ನಲ್ಲಿ ಜಾಮ್ ನಗರದಲ್ಲಿ ನಡೆಸಲಾಯಿತು. ನಂತರ ಮೇ ಕೊನೆಯಲ್ಲಿ, ಯುರೋಪ್ ನಲ್ಲಿ ಎರಡನೇ ಪೂರ್ವ ವಿವಾಹದ ಆಚರಣೆ ನಡೆಯಿತು.
ಸದ್ಯ ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ನಡೆಯಲಿದೆ. ಅವರ ಮದುವೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಜುಲೈ 13 ರಂದು ಆಶೀರ್ವಾದ ಸಮಾರಂಭ ಮತ್ತು ಜುಲೈ 14 ರಂದು ಸ್ವಾಗತ ಸಮಾರಂಭವನ್ನು ನಿಗದಿಪಡಿಸಲಾಗಿದೆ. ಸದ್ಯ ನಾವೀಗ ಅಂಬಾನಿ ಮಗನ ಮದುವೆಗೆ ಹೋಗುವವರಿಗೆ ಏನೆಲ್ಲಾ ಗಿಫ್ಟ್ ಕೊಡಲಾಗುತ್ತೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಅಂಬಾನಿ ಮಗನ ಮದುವೆಗೆ ಹೋಗುವವರಿಗೆ ಏನೆಲ್ಲಾ ಗಿಫ್ಟ್ ಕೊಡಲಾಗುತ್ತೆ ಗೊತ್ತಾ…?
ಜುಲೈ 12 ರಂದು ನಡೆಯಲಿರುವ ವಿವಾಹ ಸಮಾರಂಭಕ್ಕೆ ಗಣ್ಯರನ್ನು ಆಹ್ವಾನಿಸಲು ಅಂಬಾನಿ ಕುಟುಂಬ ವಿಶೇಷ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿದೆ. ಒಂದು ಬಾಕ್ಸ್ ನಲ್ಲೂ ಸಣ್ಣ ದೇವರ ಗುಡಿ ಹಾಗೂ ಹಿಂದೂ ದೇವರ ವಿಗ್ರಹಗಳಿರುವ ಚೌಕಟ್ಟನ್ನು ಜೊತೆಗೆ ವಿಶೇಷವಾಗಿ ತಯಾರಿಸಿರುವ ನಾಲ್ಕೈದು ಪುಟಗಳಿರುವ ಆಮಂತ್ರಣ ಪತ್ರಿಕೆಯನ್ನು ಸಿದ್ದಪಡಿಸಲಾಗಿದೆ. ಆಮಂತ್ರಣ ಪತ್ರಿಕೆಯು ಕೆಂಪು ಪೆಟ್ಟಿಗೆಯಲ್ಲಿದೆ. ಈ ಪೆಟ್ಟಿಗೆಯ ಬಾಗಿಲು ತೆರೆಯುತ್ತಿದ್ದಂತೆ, ಮುಂಭಾಗದಲ್ಲಿ ಬೆಳ್ಳಿಯ ದೇವಾಲಯವು ಗೋಚರಿಸುತ್ತದೆ.
ಈ ದೇವಾಲಯವು ತೆಲಂಗಾಣದ ಕರೀಂನಗರದಿಂದ ಬೆಳ್ಳಿಯ ಫಿಲಿಗ್ರೀಯ ಮೇರುಕೃತಿಯಾಗಿದೆ. ಈ ದೇವಾಲಯವನ್ನು ಹೊರಗೆ ತೆಗೆದಾಗ ಕೆಳಗಿರುವ ಪೆಟ್ಟಿಗೆ ತೆರೆದುಕೊಳ್ಳುತ್ತದೆ. ಇದು ಮದುವೆ ಕಾರ್ಡ್ ಗಳು ಮತ್ತು ಅತಿಥಿಗಳಿಗೆ ಉಡುಗೊರೆಗಳನ್ನು ಒಳಗೊಂಡಿದೆ. ಮದುವೆಯ ಕಾರ್ಡ್ ಒಂದು ಪುಸ್ತಕದಂತೆ ಮತ್ತು ಕೈಯಿಂದ ಬರೆದ ಕೆಲವು ಟಿಪ್ಪಣಿಗಳನ್ನು ಹೊಂದಿರುತ್ತದೆ. ಇದಲ್ಲದೇ ಪ್ರತ್ಯೇಕ ಬೆಳ್ಳಿ ಪೆಟ್ಟಿಗೆ ಇದೆ. ಅದರೊಳಗೆ ಒಂದು ಬಟ್ಟೆಯ ಮೇಲೆ A ಮತ್ತು R ಎಂದು ಬರೆಯಲಾಗಿದೆ. 5 ದೇವರ ವಿಗ್ರಹಗಳು, ಕೈಯಿಂದ ಮಾಡಿದ ಚುನರಿ ಮತ್ತು ಸಿಹಿತಿಂಡಿಗಳನ್ನು ಬೆಳ್ಳಿ ಪೆಟ್ಟಿಗೆಯಲ್ಲಿ ಇಡಲಾಗಿದೆ. ಈ ಮದುವೆಯ ಆಮಂತ್ರಣವನ್ನು ಭಾರತೀಯ ಸಂಪ್ರದಾಯದ ಪ್ರಕಾರ ಅಲಂಕರಿಸಲಾಗಿದೆ.
Darshan Case Latest Update: ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಜುಲೈ…
Karnataka Rain Alert: ಸದ್ಯ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ.…
Sumalatha Ambareesh Posted About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು ರೇಣುಕಾಸ್ವಾಮಿ ಆರೋಪದಡಿ ಜೈಲು…
Pavitra Gowda New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಾಣದಲ್ಲಿ ಎ1 ಆರೋಪಿಯಾಗಿ ಪವಿತ್ರ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ.…
Govt Employees 7th Pay Latest Update: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು…
Karnataka CM Change: ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ…