Aniruddha Jatkar: ಜೊತೆ ಜೊತೆಯಲಿ ಸೀರಿಯಲ್ ಮೇಲೆ ಬೇಸರ ಹೊರಹಾಕಿದ ಅನಿರುದ್ದ್, ಆ ವ್ಯಕ್ತಿ ನನ್ನ ಮುಖ ನೋಡುತ್ತಿಲ್ಲ.
ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯದ ಬಗ್ಗೆ ನಟ ಅನಿರುದ್ಧ್ ಬೇಸರವನ್ನ ಹೊರಹಾಕಿದ್ದಾರೆ.
Actor Aniruddha Jatkar About Jote Joteyali Serial Climax: ಅನಿರುದ್ದ್ ಜಟ್ಕರ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ. ಹಲವು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟ ಅನಿರುದ್ದ್ ಅವರು ಸದ್ಯ ಈಗ ಕೆಲವು ವಿಷಯಗಳ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿ ಇದ್ದಾರೆ.
ಚಿತ್ರರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ನಟ ಅನಿರುದ್ದ್ ಅವರು ಸಾಮಾಜಿಕ ಕಾರ್ಯಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದಿಂದ ಕೆಲವು ಸಮಯ ದೊರವಿದ್ದ ನಟ ಅನಿರುದ್ದ್ ಅವರು ನಂತರ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಬಂದರು.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ದ್
ಹೌದು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಅಮೋಘವಾಗಿ ನಟನೆಯನ್ನ ಮಾಡಿದ ನಟ ಅನಿರುದ್ದ್ ಅವರು ನಂತರ ಕೆಲವು ಕಾರಣಗಳಿಂದ ಧಾರಾವಾಹಿಯಿಂದ ಹೊರಗೆ ಬಂದರು.
ಧಾರವಾಹಿ ತಂಡದ ಜೊತೆ ಮನಸ್ತಾಪ ಮಾಡಿಕೊಂಡ ನಟ ಅನಿರುದ್ದ್ ಅವರು ಧಾರಾವಾಹಿಯಿಂದ ಹೊರಬಂದರು ಮತ್ತು ನಂತರ ಕೆಲವು ನಿರ್ಮಾಪಕರು ಅವರನ್ನ ಧಾರಾವಾಹಿಯಿಂದ ಮತ್ತು ಕಿರುತೆರೆಯಿಂದ ಬ್ಯಾನ್ ಕೂಡ ಮಾಡಲು ತೀರ್ಮಾನ ಮಾಡಿದರು.
ಜೊತೆ ಜೊತೆಯಲಿ ತಂಡದ ಮೇಲೆ ಬೇಸರ ಹೊರಹಾಕಿದ ಅನಿರುದ್ದ್
ಹೌದು ಸದ್ಯ ಮಾಧ್ಯಮದವರ ಜೊತೆ ಮಾತನಾಡಿದ ನಟ ಅನಿರುದ್ದ್ ಅವರು ಜೊತೆ ಜೊತೆಯಲಿ ಧಾರವಾಹಿ ತಂಡದ ಮೇಲೆ ಬೇಸರವನ್ನ ಹೊರಹಾಕಿದ್ದಾರೆ.
ಮಾಧ್ಯಮದ ಮುಂದೆ ಮಾತನಾಡಿದ ನಟ ಅನಿರುದ್ದ್ ಅವರು, ನಾನು ಧಾರಾವಾಹಿಯಲ್ಲಿ ಬಹಳ ಚನ್ನಾಗಿ ನಟಿಸುತ್ತಿದೆ, ಸ್ಕ್ರಿಪ್ಟ್ ಸ್ವಲ್ಪ ಚನ್ನಾಗಿ ಕೊಡಿ ಎಂದು ಕೇಳಿದ್ದಕ್ಕೆ ನನಗೆ ಈ ಶಿಕ್ಷೆ ಕೊಟ್ಟರು ಮತ್ತು ನನ್ನನ್ನು ಧಾರಾವಾಹಿಯಿಂದ ತೆಗೆದರು, ಆದರೆ ಈಗ ಧಾರಾವಾಹಿಗೆ ಸರಿಯಾದ ಅಂತ್ಯ ಸಿಗಲಿಲ್ಲ ಮತ್ತು ಕೆಲವು ಜನರು ನನ್ನ ಮನೆ ಮುಂದೆ ಬಂದು ಕಣ್ಣೀರು ಹಾಕಿದ್ದಾರೆ ಎಂದು ನಟ ಅನಿರುದ್ದ್ ಅವರು ಹೇಳಿದ್ದಾರೆ.
ಅನ್ನ ಕಿತ್ತುಕೊಳ್ಳೋ ಪ್ರಯತ್ನ ಮಾಡಿದ್ದು ಎಷ್ಟು ಸರಿ
ಅಂದು ಕಿರುತೆರೆಯಿಂದ ನನ್ನನ್ನ ಬ್ಯಾನ್ ಮಾಡಲು ಹೋಗಿ ನನ್ನ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದರು, ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿದ್ದೂ ಎಷ್ಟು ಸರಿ. ಈ ವಿಷಯವಾಗಿ ನಾನು ಬಹಳ ನೋವು ಪಟ್ಟಿದ್ದೇನೆ. ಮಾಡಿದ್ದ ಸಣ್ಣ ತಪ್ಪಿದೆ ಸರಿಯಾದ ಶಿಕ್ಷೆ ಕೂಡ ಅನುಭವಿಸಿದ್ದೇನೆ ಮತ್ತು ಸಹಿಸಿಕೊಂಡಿದ್ದೇನೆ. ಆದರೆ ಆ ವ್ಯಕ್ತಿ ಈಗ ನನ್ನ ಮುಖ ಕೂಡ ಸರಿಯಾಗಿ ನೋಡುತ್ತಿಲ್ಲ ಎಂದು ನಟ ಅನಿರುದ್ದ್ ಅವರು ಹೇಳಿದ್ದಾರೆ.