Anna Bhagya Money: ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬರದೇ ಇರುವವರಿಗೆ ಸಿಹಿಸುದ್ದಿ, ತಕ್ಷಣ ಈ ಕೆಲಸ ಮಾಡಿ.
ಈ ಕೆಲಸ ಮಾಡಿದರೆ ತಕ್ಷಣ ಜಮಾ ಆಗಲಿದೆ ಅನ್ನ ಭಾಗ್ಯದ ಹಣ.
Anna Bhagya Yojana Money Credit Rules: ರಾಜ್ಯದಲ್ಲಿ BPL ಪಡಿತರ ಚೀಟಿದಾರರಿಗೆ Anna Bhagya ಯೋಜನೆಯಡಿ 5 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಗೆ ಸರಿದೂಗುವ ಹಣ ನೀಡಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಲಾಗಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಮಾಸಿಕ ತಲಾ 170 ರೂಪಾಯಿ ನೀಡಲಾಗುತ್ತದೆ.
ಜುಲೈ ತಿಂಗಳಿಂದಲೇ ಪಡಿತದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಜುಲೈನಿಂದಲೇ ಅರ್ಹ ಫಲಾನುಭವಿಗಳ ಖಾತೆಗೆ ಸರ್ಕಾರ ಹಣ ಜಮಾ ಮಾಡಿದೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಇನ್ನೂ ಬರದೇ ಇರುವವರಿಗೆ ಸಿಹಿಸುದ್ದಿ
ಇನ್ನು ಐದು ಕೆಜಿ ಅಕ್ಕಿಯ ಬದಲಾಗಿ ನೀಡುತ್ತಿರುವ ಹಣ ಸಾಕಷ್ಟು ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಹೀಗಾಗಿ ಯೋಜನೆಯ ಲಾಭ ಪಡೆಯಲು ಅರ್ಹ ಫಲಾನುಭವಿಗಳು ಕಾಯುತ್ತಿದ್ದಾರೆ. ಸದ್ಯ ಅನ್ನಭಾಗ್ಯ ಯೋಜನೆಯ ಅಕ್ಕಿ ಇನ್ನೂ ಬರದೇ ಇರುವವರಿಗೆ ಆಹಾರ ಸಚಿವ ಮುನಿಯಪ್ಪ ಅವರು ಸಿಹಿಸುದ್ದಿ ನೀಡಿದ್ದಾರೆ. ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಈ ಕೆಲಸ ಮಾಡುವುದು ಅಗತ್ಯವಾಗಿದೆ.
ಈ ಕೆಲಸ ಮಾಡಿದರೆ ತಕ್ಷಣ ಜಮಾ ಆಗಲಿದೆ ಅನ್ನ ಭಾಗ್ಯದ ಹಣ
ಇನ್ನು ಬಿಪಿಎಲ್ ಪಡಿತರ ಚೀಟಿಯಲ್ಲಿ (BPL Ration Card) ಯಾವುದೇ ತಪ್ಪಾದ ಮಾಹಿತಿ ಇದ್ದರು ಯೋಜನೆಯ ಹಣ ಜಮಾ ಆಗುವುದಿಲ್ಲ. ಇನ್ನು ಪಡಿತರ ಚೀಟಿಯ ಮುಖ್ಯ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕಾಗುತ್ತದೆ.
ಅನ್ನಭಾಗ್ಯದ ಹಣ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಜಮಾ ಆಗಲು ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ (Aadhar Link) ಕಡ್ಡಾಯಗೊಳಿಸಲಾಗಿದೆ. ಆಧಾರ್ ಲಿಂಕ್ ಬ್ಯಾಂಕ್ ಖಾತೆ ವಿವರ ಅನ್ನಭಾಗ್ಯ ಯೋಜನೆಯಡಿ ಹಣ ಪಡೆಯಲು ಮುಖ್ಯವಾಗಿದೆ. ಪ್ರಸ್ತುತ ಸಾಕಷ್ಟು ಜನರ ಅಕೌಂಟ್ ಗೆ ಆಧಾರ್ ಲಿಂಕ್ ಆಗದೆ ಇರುವ ಕಾರಣ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ. ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಅಕೌಂಟ್ ಲಿಂಕ್ ಆಗದೆ ಇದ್ದರೆ ಈ ಕೂಡಲೇ ಲಿಂಕ್ ಮಾಡುವುದು ಉತ್ತಮ.