Bigg Boss Aryavardhan Guruji: ಕನ್ನಡದ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಸೀಸನ್ 9 (Bigg Boss Kannada Season 9) ಹಲವು ವಾರಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಇನ್ನೇನು 2 ವಾರ ಅಷ್ಟೇ ಉಳಿದಿದೆ ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ. ಯಾರು ವಿನ್ ಆಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿ ಇದೆ. ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು.
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹೋಟೆಲ್ ಆರಂಭ
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty), ಆರ್ಯವರ್ಧನ್ ಗುರೂಜಿ (Aryavardhan Gurooji), ರೂಪೇಶ್ ರಾಜಣ್ಣ (Roopesh Rajanna) ಒಟ್ಟಿಗೆ ಕುಳಿತುಕೊಂಡು ಮಾತನಾಡುತ್ತಾರೆ. ಅದನ್ನೇ ಹೋಟೆಲ್ ಎನ್ನುತ್ತಿದ್ದರು. ಅದನ್ನು ವೇದ ಎಂದು ಕ್ಲೋಸ್ ಮಾಡಿದ್ದ ಗುರೂಜಿ ಈಗ ಮತ್ತೆ ಶುರು ಮಾಡಿದ್ದಾರೆ.
ನಮ್ಮ ಹೋಟೆಲ್ ಮುಚ್ಚಬೇಕು ಎಂದುಕೊಂಡಿದ್ವಿ ಆದರೆ ಅಭಿಮಾನಿಗಳ ಕೋರಿಕೆ ಮೇರೆಗೆ ಮತ್ತೆ ಹೋಟೆಲ್ ಶುರು ಮಾಡುತ್ತಿದ್ದೇವೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. ನಮ್ಮ ಕೆಲಸಗಾರರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಒಳ್ಳೆಯ ಕೆಲಸಗಾರರು. ಇದೆ ರೀತಿ ನಾವು ದೋಸೆಯನ್ನು ತಿರುವಿ ಹಾಕುತ್ತ ಇರುತ್ತೇವೆ ಎಂದು ಗುರೂಜಿ ಹೇಳಿದ್ದಾರೆ.
ಆರ್ಯವರ್ಧನ್ ಒಬ್ಬರ ಬಳಿ ಬಂದು ಮಾತನಾಡುತ್ತಾರೆ. ಅದನ್ನು ಹಾಗೆ ಉಲ್ಟಾ ಮಾಡಿ ಬಿಡುತ್ತಾರೆ. ನಾನು ಈ ರೀತಿ ಹೇಳಿಲ್ಲ ಎಂದು. ಅದನ್ನೇ ದೋಸೆ ತಿರುವಿ ಹಾಕುವುದು ಎಂದು ನಟ ಸುದೀಪ್ ಹೆಸರಿಟ್ಟಿದ್ದಾರೆ.
ದೋಸೆ ತಿರುವಿ ಹಾಕೋ ಕೆಲಸ ಮುಂದುವರೆಯುತ್ತೆ ಎಂದು ಗುರೂಜಿ ಹೇಳಿದಾಗ, ಅಮೂಲ್ಯ ಗೌಡ ಇದನ್ನೆಲ್ಲ ನೀವು ಎಲ್ಲಿಂದ ಕಲಿತಿರಿ ಎಂದು ಕೇಳುತ್ತಾರೆ. ಇದನ್ನೆಲ್ಲ ನಾವು ಸ್ರಷ್ಟಿಯಿಂದಲೇ ಕಲಿತದ್ದು ಎಂದು ಗುರೂಜಿ ಹೇಳುತ್ತಾರೆ.
ಅದನ್ನು ಕೇಳಿಸಿಕೊಂಡು ಮನೆಯವರೆಲ್ಲಾ ಬಿದ್ದು ಬಿದ್ದು ನಕ್ತಾರೆ.ಒಂದೊಂದು ತಿರುವಲ್ಲೂ ಕೂಡ ಹೋಟೆಲ್ ಗಳು ಇವೆ. ನಮ್ಮ ರೀತಿಯೇ ದೋಸೆ ಹಾಕ್ತಾರೆ. ದೋಸೆ ತಿಂದು ಬಿಟ್ಟು, ತಟ್ಟೆ ತೊಳೆದು ನಮ್ಮ ತಲೆ ಮೇಲೆ ಸುರಿದು ಹೋಗಿ ಬಿಟ್ರೆ, ಇದರಂಥಾ ಅವಮಾನ ಮತ್ತೊಂದಿಲ್ಲ ಎಂದು ಗುರೂಜಿ ಹೇಳ್ತಾರೆ. ಗುರೂಜಿ ಹೋಟೆಲ್ ಶುರುವಾಗಿದ್ದಕ್ಕೆ ಮನೆಯವರೆಲ್ಲಾ ಖುಷಿಯಿಂದ ಕುಣಿದ್ರೂ, ಇದ್ದ ಮುನಿಸು ಮರೆತು, ನಕ್ತಾ ನಕ್ತಾ ಇದ್ರು.