Image Credit: Original Source
BPL Ration Card Benefits: ದೇಶದಲ್ಲಿ ಬಡ ಹಾಗು ಮಧ್ಯಮ ವರ್ಗದ ಜನರಿಗಾಗಿ ರಾಜ್ಯ ಹಾಗು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದ ಬಜೆಟ್ ನಲ್ಲಿ ಬಡ ಜನರಿಗಾಗಿ ಸೌಲಭ್ಯ ನೀಡಲು ಸರಕಾರ ಅನುಮೋದನೆ ಮಾಡಿದೆ. ಇಂತಹ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಪಡಿತರ ಚೀಟಿ ಬಹಳ ಮುಖ್ಯ ಆಗಿದೆ.
ಪಡಿತರ ಚೀಟಿ ಇಲ್ಲದವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಹಾಗೆಯೇ ದೇಶದ ಜನರ ಆರೋಗ್ಯ ಬಹಳ ಮುಖ್ಯ ಆಗಿದ್ದು, ಆರೋಗ್ಯ ಸಮಸ್ಯೆಗಳ ಬಗೆಹರಿಕೆಗಾಗಿ ಸರ್ಕಾರ ಕೆಲವು ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸಿದೆ.
ಆರೋಗ್ಯ ವಿಮಾ ಬಗ್ಗೆ ಮಾಹಿತಿ
ಪ್ರತಿಯೊಬ್ಬರಿಗೂ ಆರೋಗ್ಯ ವಿಮಾ ಮುಖ್ಯ ಆಗಿದ್ದು, ಅನಾರೋಗ್ಯ ಸಂದರ್ಭದಲ್ಲಿ ಈ ವಿಮೆಗಳು ಸಹಾಯ ಆಗಲಿದೆ. ಹಾಸ್ಪಿಟಲ್ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ವಿಮೆಗಳು ಬಹಳ ಸಹಾಯಕ ಆಗುತ್ತದೆ. ಈ ಆರೋಗ್ಯ ವಿಮೆಯಲ್ಲಿ ಆಯುಷ್ಮಾನ್ ಯೋಜನೆ ಒಂದಾಗಿದ್ದು, ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಬಹುದು. ಹಾಗಾಗಿ ಪ್ರತಿಯೊಬ್ಬರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಿ .
ಆಯುಷ್ಮಾನ್ ಕಾರ್ಡ್ ನಿಂದ ಆಗುವ ಪ್ರಯೋಜನಗಳು
ಆಯುಷ್ಮಾನ್ ಕಾರ್ಡ್ ಇದು ಆರೋಗ್ಯ ವಿಮಾ ಕಾರ್ಡ್ ಆಗಿದ್ದು, ಅನಾರೋಗ್ಯ ಸಮಯದಲ್ಲಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗಾಗಿ ಪ್ರವೇಶ ಪಡೆದು ಅಡ್ಮಿಟ್ ಆದರೆ ಈ ಕಾರ್ಡ್ ಮೂಲಕ ಉಚಿತ ಚಿಕಿತ್ಯೆ ಪಡೆಯಬಹುದಾಗಿದೆ. ಹಾಸ್ಪಿಟಲ್ ಗೆ ಹೋಗುವ ಮೂರೂ ದಿನದ ಮೊದಲು ಹಾಗು ನಂತರದ 15 ದಿನಗಳ ವರೆಗಿನ ಸಂಪೂರ್ಣ ಖರ್ಚು ವೆಚ್ಚಗಳನ್ನು ಈ ಮೂಲಕ ಸಂಪೂರ್ಣವಾಗಿ ಭರಿಸಬಹುದು. ಒಂದು ಕುಟುಂಬಕ್ಕೆ ಐದು ಲಕ್ಷ ತನಕ ಉಚಿತ ಚಿಕಿತ್ಯೆ ಪಡೆಯಬಹುದಾಗಿದೆ.
ಆಯುಷ್ಮಾನ್ ಕಾರ್ಡ್ ಪಡೆಯಲು ಬೇಕಾಗಿರುವ ದಾಖಲೆಗಳು
ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಹಾಕಲು ಕುಟುಂಬದ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಸ್ಥಳದ ಪುರಾವೆ, ಬ್ಯಾಂಕ್ ಖಾತೆಯ ವಿವರ ಕಡ್ಡಾಯ ಆಗಿರುತ್ತದೆ.
ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳುವ ಬಗ್ಗೆ ವಿವರ
BPL ಕಾರ್ಡ್ ಹೊಂದಿರುವವರು ಸರಕಾರದ ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಹಾಕಬಹುದಾಗಿದೆ. ನಿಮ್ಮಲಿ BPL ಕಾರ್ಡ್ ಇದ್ದರೇ https://bis.pmjay.gov.in/ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಹತ್ತಿರದ ಗ್ರಾಮ್ ಒನ್ ಪ್ರಧಾನ ಮಂತ್ರಿ ಜನಾರೋಗ್ಯ ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇದೆ. ಬಡ ಜನರ ಆರೋಗ್ಯಕ್ಕಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರ ಗಳು ಜಂಟಿಯಾಗಿ ಆರಂಭಿಸಿದ ಯೋಜನೆ ಇದಾಗಿದೆ. ಆಯುಷ್ಮಾನ್ ಕಾರ್ಡ್ ಗಾಗಿ ರಾಜ್ಯ ಸರ್ಕಾರ 66 % ಹಾಗು ಕೇಂದ್ರ ಸರ್ಕಾರ 34 % ನಷ್ಟು ಅನುದಾನ ನೀಡುತ್ತಿದೆ.
Maruti Ertiga 7 Seater Car: ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಗ್ರಾಹಕರು ಹೆಚ್ಚಿನ…
Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…
Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…
Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…
Maternity Leave For Govt Employees: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ…
Guarantee Scheme Latest Update: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ರಾಜ್ಯ್ದ ಜನತೆ ಸರ್ಕಾರದ ಉಚಿತ ಗ್ಯಾರಂಟಿ…