Bank News: ರಾತ್ರೋರಾತ್ರಿ ಇನ್ನೆರಡು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ RBI , ಬ್ಯಾಂಕಿನ ಮುಂದೆ ಅಳುತ್ತಿರುವ ಜನರು.
ಇನ್ನೆರಡು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಎರಡು ಬ್ಯಾಂಕ್ ಗಳಿಗೆ ಆದೇಶ ಹೊರಡಿಸಿದ RBI .
Bank Licence Cancellation Update: ಆರ್ ಬಿಐ ನಿಯಮಗಳನ್ನು ನಿರ್ಲಕ್ಷಿಸಿದ ಬ್ಯಾಂಕ್ ನ ವಿರುದ್ಧ ಆರ್ ಬಿಐ (RBI) ಕ್ರಮ ಕೈಗೊಳ್ಳುತ್ತಿದೆ. ಇದೀಗ ಆರ್ ಬಿಐ ನಿಯಮ ಉಲ್ಲಂಘನೆಯ ಕಾರಣ ಮತ್ತೊಂದು ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ಈಗಾಗಲೇ ಆರ್ ಬಿಐ ಸಾಕಷ್ಟು ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದುಪಡಿಸಿದ್ದು ಅದರಲ್ಲಿ ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್ ಗಳು ಕೂಡ ಇವೆ.
ಪ್ರತಿಯೊಬ್ಬ ಠೇವಣಿದಾರರು ತನ್ನ ಠೇವಣಿಗಳನ್ನು 5 ಲಕ್ಷ ರೂ. ಮಿತಿಯವರೆಗೆ ಸ್ವೀಕರಿಸಲು ಆರ್ಹನಾಗಿರುತ್ತಾನೆ. ಈ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ. ದೇಶದಲ್ಲಿರುವ ಕೆಲವು ಸಹಕಾರಿ ಬ್ಯಾಂಕ್ ಗಳಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇಗಾಗಲೇ ನಾಲ್ಕೈದು ಬ್ಯಾಂಕ್ ಗಳ ಪರವಾನಗಿಯನ್ನು ಆರ್ ಬಿಐ ರದ್ದುಗೊಳಿಸಿದೆ.
ರಾತ್ರೋರಾತ್ರಿ ಇನ್ನೆರಡು ಬ್ಯಾಂಕಿನ ಲೈಸೆನ್ಸ್ ರದ್ದು ಮಾಡಿದ ಆರ್ ಬಿಐ
ಕಳೆದ ಎರಡು ವಾರದಲ್ಲಿ ಬರೋಬ್ಬರಿ ಐದು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಮಾಡಿತ್ತು. ಇದೀಗ ಮತ್ತೊಂದು ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿದೆ. ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Malkapur Urban Co-operative Bank Ltd) ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ (Shushruti Souharda C0- operative Bank Ltd) ನಿಯಮಿತ ಬ್ಯಾಂಕಿಂಗ್ ಪರವಾನಗಿಗಳನ್ನು ರದ್ದುಗೊಳಿಸಿರುವ ಬಗ್ಗೆ RBI ಮಾಹಿತಿ ನೀಡಿದೆ.
ಈ ಬ್ಯಾಂಕುಗಳ ಗ್ರಾಹಕರಿಗೆ ಆದೇಶ ನೀಡಿದ ಆರ್ ಬಿಐ
ಈ ಎರಡು ಸಹಕಾರಿ ಬ್ಯಾಂಕ್ ಗಳು ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ. ಇದೀಗ ಜುಲೈ 5 2023 ರಂದು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಎರಡು ಬ್ಯಾಂಕ್ ಗಳಿಗೆ ಮಾಹಿತಿ ನೀಡಿದೆ.ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಎರಡು ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು ಆರ್ ಬಿಐ ಆದೇಶ ಹೊರಡಿಸಿದೆ.
ಈ ತಿಂಗಳಿನಲ್ಲಿ ಐದು ಬ್ಯಾಂಕ್ ಗಳ ಪರವಾನಗಿ ರದ್ದುಗೊಳಿಸಿದ RBI
ಆರ್ ಬಿಐ ಈಗಾಗಲೇ ನಾಲ್ಕು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. RBI ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್, ಕರ್ನಾಟಕದ ತುಮುಕೂರಿನಲ್ಲಿರುವ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಸತಾರದಲ್ಲಿರುವ ಹರಿಹರೇಶ್ವರ ಬ್ಯಾಂಕ್ ವಿರುದ್ಧ ಆರ್ ಬಿಐ ಕಠಿಣ ಕ್ರಮ ಕೈಗೊಂಡಿದೆ. ಇದೀಗ ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಈ ಸಾಲಿಗೆ ಸೇರಿಕೊಂಡಿದೆ.