BPL Card Benefits: BPL ಕಾರ್ಡ್ ಇದ್ದರೂ ಇನ್ಮುಂದೆ ನಿಮಗೆ ಸಿಗಲ್ಲ ಸರ್ಕಾರದ ಯಾವುದೇ ಯೋಜನೆಯ ಹಣ, ಹೊಸ ರೂಲ್ಸ್ ಜಾರಿ
BPL ಕಾರ್ಡ್ ಇದ್ದರೂ ಇನ್ಮುಂದೆ ನಿಮಗೆ ಸಿಗಲ್ಲ ಸರ್ಕಾರದ ಯಾವುದೇ ಯೋಜನೆಯ ಹಣ
BPL Ration Card Latest Update: ಸದ್ಯ ರಾಜ್ಯದಲ್ಲಿ Ration Card ಗೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಏಕೆಂದರೆ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂಡ ಸಮಯದಿಂದ Ration card ನ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ BPL Ration Card ಹೊಂದಿರುವವರಿಗೆ ಸರ್ಕಾರ ಪರಿಚಯಿಸಿರುವ ಎಲ್ಲ ಯೋಜನೆಗಳ ಲಾಭ ದೊರೆಯುತ್ತಿದೆ ಎನ್ನಬಹುದು.
ಈ ಕಾರಣಕ್ಕೆ ಇತ್ತೀಚಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ BPL ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ ಇನ್ನೊಂದು ಆದೇಶ ಹೊರಡಿಸಿದ್ದು ಇಂತಹ ಜನರು BPL ಕಾರ್ಡ್ ಇದ್ದರೂ ಕೂಡ ಯಾವುದೇ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ
ಗ್ಯಾರಂಟಿ ಯೋಜನೆಗಳ ಹಣ ಏಕೆ ಜಮಾ ಆಗುತ್ತಿಲ್ಲ..?
ಸದ್ಯ ರಾಜ್ಯದಲ್ಲಿ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆಯು ಅಅನಷ್ಠಾನಗೊಂಡಿದ್ದರೂ ಕೂಡ ಯೋಜನೆಯ ಸಂಪೂರ್ಣ ಲಾಭ ಅರ್ಹರಿಗೆ ತಲುಪುತ್ತಿಲ್ಲ. ಸಾಕಷ್ಟು ತಾಂತ್ರಿಕ ದೋಷದ ಕಾರಣ ಎರಡು ಯೋಜನೆಗಳ ಹಣ ಅರ್ಹರ ಖಾತೆಗೆ ಜಮಾ ಆಗುತ್ತಿಲ್ಲ ಎನ್ನಬಹುದು. ಇನ್ನು ಯೋಜನೆಗೆ ಸಂಬಂಧಪಟ್ಟ ಎಲ್ಲ ದೋಷಗಳನ್ನು ಸರ್ಪಡಿಸಿಕೊಂಡಿದ್ದರೂ ಕೂಡ ಕೆಲ ಅರ್ಹರ ಖಾತೆಗೆ ಯೋಜನೆಗಳ ಹಣ ಜಮಾ ಆಗುತ್ತಿಲ್ಲ ಎನ್ನುವ ಬಗೆ ಮಾಹಿತಿ ಹೊರಬಿದ್ದಿದೆ. ಹಣ ಏಕೆ ಜಮಾ ಆಗುತ್ತಿಲ್ಲ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಉತ್ತರ ತಿಳಿಯೋಣ.
BPL ಕಾರ್ಡ್ ಇದ್ದರೂ ಇನ್ಮುಂದೆ ನಿಮಗೆ ಸಿಗಲ್ಲ ಸರ್ಕಾರದ ಯಾವುದೇ ಯೋಜನೆಯ ಹಣ
ಯೋಜನೆಯಾಗಳ ಲಾಭ ಪಡೆಯಲು ಮುಖ್ಯವಾಗಿ ಬ್ಯಾಂಕ್ ಖಾತೆಗೆ ಆದೃ ಲಿಂಕ್ ಆಗುವುದು ಮುಖ್ಯವಾಗಿದೆ. ನಿಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಮಾತ್ರ ಯಾವುದೇ ಸಮಸ್ಯೆ ಇಲ್ಲದೆ ಯೋಜನೆಗಳ ಹಣ ಜಮಾ ಆಗುತ್ತದೆ. ಈ ಸಮಸ್ಯೆಗಳನ್ನು ಅರಿತು ಜನರು ಇದನ್ನು ಪರಿಹರಿಸಿಕೊಂಡಿದ್ದಾರೆ. ಆದರೂ ಕೂಡ ಹಣ ಜಮಾ ಆಗದಿರಲು ಒಂದು ಕಾರಣವಿದೆ. ಕಳೆದ ಆರು ತಿಂಗಳಿನಿಂದ ಯಾರು ಉಚಿತ ಪಡಿತರನ್ನು ಪಡೆಯುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದು ಪಡಿಸಲು ನಿರ್ಧರಿಸಿದೆ.
ಈಗಾಗಲೇ ರಾಜ್ಯದಲ್ಲಿ 3.26 ಲಕ್ಷ ಪಡಿತರ ಚೀಟಿಗಳು ರದ್ದಾಗಿವೆ. ಇನ್ನು ಕೂಡ ರೇಷನ್ ಕಾರ್ಡ್ ಹೊಂದಿರುವ ಸಾಕಷ್ಟು ಜನರು ಕಳೆದ ಆರು ತಿಂಗಳಿನಲ್ಲಿ ಪಡಿತರ ಪಡೆದಿಲ್ಲ.ಅಂತವರ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸುವಲ್ಲಿ ಸರ್ಕಾರ ತೊಡಗಿಕೊಂಡಿದೆ. ನೀವು BPL ಹೊಂದಿದ್ದು, ಆರು ತಿಂಗಳಿನಿಂದ ಪಂಡಿತರನ್ನು ಪಡೆದಿಲ್ಲ ಎಂದಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ. ರೇಷನ್ ಕಾರ್ಡ್ ರದ್ದಾದರೆ ಯೋಜನೆಯ ಹಣ ಖಾತೆಗೆ ಜಮಾ ಆಗಲು ಸಾಧ್ಯವಿಲ್ಲ.
ಯೋಜನೆಯ ಲಾಭ ಪಡೆಯಲು ಇಂದೇ ಈ ಕೆಲಸ ಮಾಡಿ
ಈಗಾಗಲೇ ಸರ್ಕಾರ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಪಡಿತ್ರನ್ನು ಪಡೆಯಲು ಅರ್ಹರಾಗಿರುತ್ತಾರೆ. ಈಗಿರುವ ಯಾರು ಪಡಿತರನ್ನು ತಿಂಗಳವಾರು ಪಡೆಯುತ್ತಿಲ್ಲವೋ ಅಂತವರು BPL ಪಡಿತರನ್ನು ಪಡೆಯಲು ಅರ್ಹರಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಆರು ತಿಂಗಳಿನಿಂದ ಪಡಿತರನ್ನು ಪಡೆಯದರವರನ್ನು ಅರ್ಹರ ಲಿಸ್ಟ್ ನಿಂದ ತೆಗೆದು ಹಾಕಿದ್ದು, ಅಂತವರಿಗೆ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನು ನೀವು ಪ್ರತಿ ತಿಂಗಳು ರೇಷನ್ ಅನ್ನು ಪಡೆಯುತ್ತಿಲ್ಲ ಎಂದರೆ ತಕ್ಷಣ ಪಡಿತರನ್ನು ಪಡೆದವು ಯೋಜನೆಯ ಲಾಭದಿಂದ ವಂಚಿತರಾಗುವುದನ್ನು ತಪ್ಪಿಸಿಕೊಳ್ಳಿ.