Image Credit: Original Source
Crop Compensation Amount Status Check: ಪ್ರಸ್ತುತ ರಾಜ್ಯದಲ್ಲಿ ಬೆಳೆ ಪರಿಹಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜ್ಯದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಇದರಿಂದಾಗಿ ರೈತರು ಖುಷಿಯಲ್ಲಿದ್ದಾರೆ ಎನ್ನಬಹುದು. 2023-24ರ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಗಾಗಿ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ರೈತರಿಗೆ ಪರಿಹಾರವನ್ನು ನೀಡಲಾಗುತ್ತಿದೆ.
ಈಗಾಗಲೇ ಮೊದಲ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಠ ರೂ. 2000 ವರೆಗೆ ಅರ್ಹವಾಗಿ ಪಾವತಿಸಿದ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಪರಿಗಣಿಸಿ, ಉಳಿದ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಅರ್ಹರಿಗೆ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ರೈತರು ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲ್ಲವೇ ಎನ್ನುವುದನ್ನು ಪರಿಶೀಲಿಸ್ಕೊಳ್ಳಿ.
ಬೆಳೆ ಪರಿಹಾರ ಮೊತ್ತ ಪಡೆಯಲು ತಕ್ಷಣ ಈ ಕೆಲಸಗಳನ್ನು ಮುಗಿಸಿ
ಇನ್ನು ಸರ್ಕಾರದಿಂದ ಬೆಳೆ ಪರಿಹಾರ ಮೊತ್ತ ಬಿಡುಗಡೆ ಆಗಿದ್ದರು ಕೂಡ ಕೆಲ ರೈತರ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ನಿಮ್ಮ ಹೆಸರು ಆಧಾರ್ ಮತ್ತು ಫ್ರೂಟ್ಸ್ ಐಡಿಯೊಂದಿಗೆ ಹೊಂದಿಕೆಯಾಗದಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಬ್ಯಾಂಕ್ ನ IFSC ಕೋಡ್ ತಪ್ಪಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವ ಕಾರಣ ಹಾಗೂ ಇತರೆ ಕಾರಣಗಳಿಂದ ಪರಿಹಾರವನ್ನು ಜಮಾ ಮಾಡಲಾಗುವುದಿಲ್ಲ.
ಖಾತೆಗೆ ಹಣ ಜಮಾ ಆಗಿದೆಯಾ ಎಂದು ಈ ರೀತಿ ಪರಿಶೀಲಿಸಿಕೊಳ್ಳಿ
ರೈತರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. FRUITS ಸಾಫ್ಟ್ ವೇರ್ ನಲ್ಲಿ ಹೆಸರನ್ನು ನವೀಕರಿಸಬೇಕು. ರೈತರು ಬ್ಯಾಂಕ್ ಗೆ ಹೋಗಿ ಎನ್ಪಿಸಿಐ ಮಾಡಬೇಕು. ಖಾತೆಯನ್ನು ನಿರ್ಬಂಧಿಸಿದರೆ ಅಥವಾ ಮುಚ್ಚಿದ್ದರೆ, ಅದನ್ನು ಮರು-ತೆರೆಯಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ IFSC, N.P.C.I ಅನ್ನು ನವೀಕರಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗವುತ್ತದೆ. ರೈತರು https://parihara.karnataka.gov.in/service92/ ಈ ವೆಬ್ ಸೈಟ್ ನಲ್ಲಿ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.
Sumalatha Ambareesh About Darshan: ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ…
Fujiyama Classic Electric Scooter: ದೇಶದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ (Electric Vehicle) ಬಿಡುಗಡೆ ಹೆಚ್ಚಾಗಿ ಕಂಡುಬಂದಿದೆ. ಗ್ರಾಹಕರಿಗೆ ಬೇಕಾದ…
Income Tax Notice Update: ದೇಶದಲ್ಲಿ ತೆರಿಗೆ ನಿಯಮಗಳು ಎಷ್ಟು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದಿದೆ. ಆದಾಯ ಇಲಾಖೆಯು…
Vinay Rajkumar Marriage Photo Viral: ಸದ್ಯ ದೊಡ್ಮನೆಯ ಕುಡಿಯಾಗಿರುವ ಯುವ ರಾಜಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲರಿಗು ತಿಳಿದಿರಬಹುದು.…
Renault Kwid Price And Feature: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ವಿಭಿನ್ನ ರೂಪಾಂತರ ಕಾರ್ ಗಳು ಲಭ್ಯವಿದೆ. ದೇಶದ ಜನಪ್ರಿಯ…
Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ.…