Image Credit: Original Source
Dinakar Thoogudeepa About Darshan: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಂದಿತರಾಗಿದ್ದಾರೆ. ದರ್ಶನ್ ಹಾಗೂ ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಸದ್ಯ ಪೊಲೀಸ್ ಬಂದನದಲ್ಲಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಈ ಮದ್ಯೆ ದರ್ಶನ್ ಬಗ್ಗೆ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿದೆ. ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರುತ್ತಿದ್ದಂತೆ ದರ್ಶನ್ ಹಿಂದಿನ ಕಥೆಗಳು ಒಂದೊಂದೇ ಬೆಳಕಿಗೆ ಬರುತ್ತಿದೆ. ಈ ಹಿಂದೆ ದರ್ಶನ್ ಮಾಡಿದ್ದತಂಹ ಕೃತ್ಯಗಳು ಬಾರಿ ವೈರಲ್ ಆಗುತ್ತಿದೆ. ಇದೀಗ ದರ್ಶನ್ ಕುಟುಂಬದಲ್ಲಿರುವ ಬಿರುಕಿನ ಬಗ್ಗೆ ಮಾಹಿತಿ ವೈರಲ್ ಆಗಿದೆ. ಈ ಬಗ್ಗೆ ದರ್ಶನ್ ಸಹೋದರ ಮಾಹಿತಿ ನೀಡಿದ್ದಾರೆ.
ತಾಯಿಗೂ ಚಿತ್ರಹಿಂಸೆ ಕೊಟ್ರಾ ನಟ ದರ್ಶನ್…!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟನಾಗಿ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದರು, ತಮ್ಮ ಸ್ವಂತ ತಮ್ಮನಿಗೆ ಸಹಕಾರ ನೀಡುತ್ತಿರಲಿಲ್ಲವಂತೆ. ತನ್ನ ತಾಯಿಯ ಮೇಲೂ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ದರ್ಶನ್ ತಾಯಿ ಮೀನಾ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಕಾರಣಕ್ಕೆ ತಾಯಿ ಮಗನ ಸಂಪರ್ಕದಲ್ಲಿಲ್ಲ ಎನ್ನಲಾಗುತ್ತಿದೆ. ದರ್ಶನ್ ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದರೂ ದರ್ಶನ್ ತಮ್ಮ ದಿನಕರ್ ಬಾಡಿಗೆ ಮನೆಯಲ್ಲೇ ವಾಸವಾಗಿರುವುದು ಗೊತ್ತೇ ಇದೆ. ಈ ಕುರಿತು ದಿನಕರ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಬಯಲಾಯಿತು ನಟ ದರ್ಶನ್ ಇನ್ನೊಂದು ಮುಖ
ಮಕ್ಕಳು ಸಿನಿಮಾಗೆ ಹೋಗುವುದು ತೂಗುದೀಪ್ ಶ್ರೀನಿವಾಸ್ ಅವರಿಗೆ ಇಷ್ಟವಿರಲಿಲ್ಲ. ಏಕೆಂದರೆ ಮಕ್ಕಳು ತಂದೆ ಕಷ್ಟಪಟ್ಟು ಸಂಪಾದಿಸಿದ ಹೆಸರು ಹಾಳು ಮಾಡುತ್ತಾರೆ ಎನ್ನುವ ಭಯ ದರ್ಶನ್ ತಂದೆಗೆ ಇತ್ತು ಎನ್ನುವುದನ್ನು ದಿನಕರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ದರ್ಶನ್ ಅರೆಸ್ಟ್ ಆದ ನಂತರ ದರ್ಶನ್ ಆಪ್ತರು ದರ್ಶನ್ ಪರ ನಿಲ್ಲುತ್ತಿಲ್ಲ ಎನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಿರುವಾಗ ರೇಣುಕಾಸ್ವಾಮಿ ಕೊಲೆ ಪ್ರಕರಣಕೆ ಸಂಬಂಧಿಸಿದಂತೆ ಪೊಲೀಸರು ಹಾಸ್ಯ ನಟ ಚಿಕ್ಕಣ್ಣ ಅವರಿಗೂ ನೋಟಿಸ್ ನೀಡಿದ್ದಾರೆ. ಸದ್ಯ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಜೋರಾಗಿದ್ದು, ಪ್ರಕರಣ ಯಾವ ಹಂತ ತಲುಪತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Rohith Sharma Ate Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…
BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…
KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…
Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…
New Ration Card Application: ಸದ್ಯ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ…
Details About World Cup Trophy: ಸ್ಪೋಟ್ಸ್ ವಿಭಾಗದಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ…