Ads By Google

Divya Uruduga And Aravind KP: ಅರವಿಂದ್ ಬಗ್ಗೆ ಬಿಗ್ ಬಾಸ್ ಬಳಿ ಆಸೆ ಹೇಳಿಕೊಂಡ ದಿವ್ಯ ಉರುಡುಗ, ಅಸೆ ಈಡೇರಿಸಬೇಕಿದೆ ಬಿಗ್ ಬಾಸ್.

divya uruduga and aravind KP
Ads By Google

Divya Uruduga And Aravind KP: ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ (Bigg Boss) ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಸತತ 14 ವಾರಗಳನ್ನು ಬಿಗ್ ಬಾಸ್ ಪೂರ್ಣಗೊಳಿಸಿದೆ.

ಇನ್ನು ಅಮೂಲ್ಯ ಹಾಗೂ ಅರುಣ್ ಸಾಗರ್ (Amulya And Arun Sagar) ಎಲಿಮಿನೇಟ್ ಆಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಫೈನಲ್ ದಿನವನ್ನು ಘೋಷಿಸಲಾಗಿದೆ.

ಇನ್ನು ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಯಾರು ಗೆಲ್ಲುತ್ತಾರೆ ಎನ್ನುದನ್ನು ಕಾದು ನೋಡಬೇಕಿದೆ. ವಾರದ ಕತೆ ಕಿಚ್ಚನ ಜೊತೆ ಎನ್ನುವ ಟೈಟಲ್ ನೊಂದಿಗೆ ಸುದೀಪ್ ಎಲ್ಲರ ಮನೆಯಲ್ಲೂ ಬರುತ್ತಾರೆ. ಈ ನಡುವೆ ಬಿಗ್ ಬಾಸ್ ಫೈನಲಿಸ್ಟ್ ಹೆಸರನ್ನು ಸುದೀಪ್ ಘೋಷಿಸಿದ್ದಾರೆ.

Image Credit: voot

ಕೊನೆಯ ಹಂತದಲ್ಲಿ ಬಿಗ್ ಬಾಸ್
ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾನ್ಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದೆ. ಹಾಗಾಗಿ ಸ್ಪರ್ಧಿಗಳಿಗೆ ವಿಶೇಷ ಅವಕಾಶವೊಂದನ್ನ ಬಿಗ್ ಬಾಸ್ ನೀಡಿದ್ದಾರೆ.

ಸ್ಪರ್ಧಿಗಳ ಒಂದು ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 9 ರ ಫಿನಾಲೆಗೆ ನಾಲ್ಕು ದಿನ ಬಾಕಿಯಿದೆ. ಈ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಪೂರೈಸದೆ ಉಳಿದ ಆಸೆಯನ್ನು ಪೂರೈಸುವ ಭರವಸೆಯನ್ನು ಬಿಗ್ ಬಾಸ್ ನೀಡಿದ್ದಾರೆ.

Image Credit: voot

ಅವುಗಳ ಪೈಕಿ ಸಾಧ್ಯವಿರುವ ಒಂದು ಆಸೆಯನ್ನು ಬಿಗ್ ಬಾಸ್ ಪೂರೈಸುತ್ತಾರೆ. ಒಬ್ಬಬ್ಬರಾಗಿ ತಮ್ಮ ಆಸೆಗಳನ್ನು ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಿವ್ಯಾ ಇಟ್ಟಿರುವ ಬೇಡಿಕೆ ವೀಕ್ಷಕರಿಗೆ ಖುಷಿ ಕೊಟ್ಟಿದೆ.

ಬಿಗ್ ಬಾಸ್ ಮನೆಯಲ್ಲಿ ದಿವ್ಯ ಉರುಡುಗ ಅವರ ವಿಶೇಷ ಕೋರಿಕೆ
ದಿವ್ಯಾ ಉರುಡುಗ (Divya Uruduga) ಬಿಗ್ ಬಾಸ್ ಹತ್ತಿರ ಮನೆಯೊಳಗೇ ಜಾತ್ರೆ ನಡೆಯಬೇಕು. ಸುದೀಪ್ ಸರ್ ಮನೆಯೊಳಗೆ ಬಂದು ಅಡುಗೆ ಮಾಡಿ, ಅವರೊಂದಿಗೆ ಊಟ ಮಾಡಬೇಕು.

Image Credit: voot

ಹಾಗೆಯೇ ಬಿಗ್ ಬಾಸ್ 8 ರ ದಿವ್ಯಾ ಸಹಸ್ಪರ್ಧಿ ಅರವಿಂದ್ ಕೆ. ಪಿ (Aravind KP) ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನು ಎಸೆದಿದ್ದಾರೆ. ಈ ಎಲ್ಲದರ ಪೈಕಿ ಬಿಗ್ ಬಾಸ್ ಯಾರ ಆಸೆಯನ್ನು ಪೂರೈಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field