Ganesha Chaturthi Rules: ಸೆಪ್ಟೆಂಬರ್ ನಲ್ಲಿ ಎಲ್ಲರು ಗಣೇಶನ ಹಬ್ಬದ (Ganesh Festival) ಆಚರಣೆಗಾಗಿ ಕಾಯುತ್ತಿರುತ್ತಾರೆ. ಗಣೇಶನ ಹಬ್ಬವು ನಾಡಿನಾದ್ಯಂತ ಬಹಳ ವಿಜ್ರಂಭಣೆಯಾಗಿ ನಡೆಯುತ್ತದೆ. ಗಣೇಶನ ಹಬ್ಬದ ಆಚರಣೆಗಾಗಿ ಎಲ್ಲರು ಕಾಯುತ್ತಿದ್ದಾರೆ. ಎಲ್ಲೆಡೆ ಗಣೇಶನ ಮೂರ್ತಿ ರಾರಾಜಿಸುತ್ತದೆ.
ಗಣೇಶನ ಹಬ್ಬದಂಡವು ಗಣೇಶನಿಗೆ ವಿಶೇಷವಾಗಿ ಅಲಂಕರಿಸಿ ಪೂಜಾ ಕಾರ್ಯಗಳು ಮುಗಿದ ಬಳಿಕ ಗಣೇಶನ ವಿಸರ್ಜನೆ ಮಾಡುವುದು ಹಬ್ಬದ ನಿಯಮ. ಇನ್ನು ಎಲ್ಲೇ ವಿವಿಧ ರೂಪದಲ್ಲಿ ಗಣೇಶನ ವಿಗ್ರಹಗಳು ಸಿದ್ದಗೊಂಡಿದೆ. ಒಂದೊಂದು ಸ್ಥಳದಲ್ಲಿ ವಿವಿಧ ಬಣ್ಣದ, ವಿವಿಧ ಆಕಾರದ ಗಣೇಶ ವಿಗ್ರಹಗಳು ಜನರಿಗೆ ದರ್ಶನ ನಡುತ್ತದೆ.
ಗಣೇಶನ ಹಬ್ಬದ ಅದ್ದೂರಿ ಆರಂಭಕ್ಕೆ ಹೊಸ ಸಮಾರ್ಗಸೂಚಿ ಬಿಡುಗಡೆ
ಇನ್ನು ಬೆಂಗಳೂರಿನಲ್ಲಂತೂ ಗಣೇಶನ ಹಬ್ಬ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಇದೀಗ ಬಿಬಿಎಂಪಿ ಗಣೇಶನ ಆಚರಣೆ ಮಾಡುವವರಿಗೆ ಹೊಸ ಮರಗಸೂಚಿ ಹೊರಡಿಸಿದೆ. ಹಬ್ಬದ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಗಣೇಶ ಚತುರ್ಥಿ ಮಾಡುವ ಮುನ್ನ ಬಿಬಿಎಂಪಿ ವಿಧಿಸಿರುವ ನಿಯಮದ ಬಗ್ಗೆ ತಿಳಿಯುವ ಉತ್ತಮ. ಇನ್ನು ನಿಯಮವನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸಲು ಇಲಾಖೆ ನಿರ್ಧರಿಸಿದೆ.
ಗಣೇಶ ಚತುರ್ಥಿ ಆಚರಣೆಗೂ ಮುನ್ನ ಈ ನಿಯಮ ತಿಳಿದುಕೊಳ್ಳಿ
*ಗಣೇಶನ ಹಬ್ಬವನ್ನು ಆಚರಿಸುವ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಬ್ಯಾನರ್ ಮತ್ತು ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ.
*ಸ್ಯಾಂಕಿ ಕೆರೆ, ಹಲಸೂರು ಕೆರೆ, ಯುಡಿಯೂರು ಕರೆ, ಹೆಬ್ಬಾಳ ಕೆರೆ ಮತ್ತಿತರ ಕಡೆಗಳಲ್ಲಿ ಗಣೇಶನ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
*ಸಣ್ಣ ವಿಗ್ರಹಗಳ ವಿಸರ್ಜನೆಗೆ ಪ್ರತಿ ವರ್ಷದಂತೆ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
*ವಿಸರ್ಜನೆಯ ಸಮಯದಲ್ಲಿ ವಿಲೇವಾರಿಯಾಗುವ ಪೂಜಾ ಸಮಗಾರಿಗಳು ಮತ್ತು ಇತರ ಕಚ್ಚಾ ವಸ್ತುಗಳನ್ನು ಸಾಂಗ್ರಹಿಸಲು ಮತ್ತು ಸ್ಥಳಾಂತರಿಸಾಲು ಸಿಬ್ಬಂದಿಗಳನ್ನ ನೇಮಿಸಬೇಕು.
*ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತಾ ಪೊಲೀಸ್ ರನ್ನು ನೇಮಿಸಬೇಕು.
*ಮೆರವಣಿಗೆಯ ವೇಳೆ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು.
*ವಿಗ್ರಹ ವಿಸರ್ಜನಕ್ಕಿಗೆ ಆಯ್ಕೆಯಾದ ಕೆರೆಗಳು ಮತ್ತು ಕೃತಕ ಕೊಳಗಳು ಸುತ್ತಲೂ ಸರಿಯಾಯದ ಬ್ಯಾರಿಕೇಡಿಂಗ್ ಇರಿಸಬೇಕಾಗುತ್ತದೆ.
*ವಿಗ್ರಹ ವಿಸರ್ಜನಾ ಸ್ಥಳಗಳಲ್ಲಿ ಜೀವರಕ್ಷಕ ಮತ್ತು ಅಗತ್ಯ ಸಿಬ್ಬಂದಿಯನ್ನು ನೀಎಮಿಸಬೇಕು ಹಾಗೆಯೆ ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪಗಳನ್ನು ಅಳವಡಿಸಬೇಕು.
*ರಾಸಾಯನಿಕ ಬಣ್ಣಗಳನ್ನು ಬಳಸುವುದು ಮತ್ತು ಥರ್ಮಾಕೋಲ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ವಿಗ್ರಹಗಳನ್ನು ಸಿದ್ಧಪಡಿಸುವುದನ್ನು ನಿಷೇದಿಸಲಾಗಿದೆ.