Ration Card Rules: ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಹೊಸ ನಿರ್ಧಾರ
ಅನ್ನಭಾಗ್ಯ ಯೋಜನೆಯ ಸವಲತ್ತು ಪಡೆದು ಕೊಳ್ಳು ವವರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ
ಕಾಂಗ್ರೆಸ್(Congress) ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಬಹಳಷ್ಟು ಸುದ್ದಿಯಲ್ಲಿದ್ದು, ಜನರು ಈ ಯೋಜನೆಯ ಸೌಲಭ್ಯ ಗಳನ್ನು ಬಳಸಿಕೊಳ್ತಾಇದ್ದಾರೆ, ಅದರಲ್ಲಿಯುಅನ್ನಭಾಗ್ಯ ಯೋಜನೆಯ ಮೂಲಕ ಅಕ್ಕಿಜೊತೆಗೆ ಖಾತೆಗೆ ಹಣ ಕೂಡಜಮೆ ಯಾಗ್ತ ಇದೆ, ಮುಖ್ಯ ವಾಗಿ ರೇಷನ್ ಕಾರ್ಡ್(Ration Card) ಇದ್ದರೆ ಮಾತ್ರವೇ ಈ ಯೋಜನೆಯ ಸವಲತ್ತುಜನರಿಗೆ ದೊರೆಯುತ್ತದೆ, ಅದೇ ರೀತಿ ಅನ್ನಭಾಗ್ಯ ಯೋಜನೆಯ ಸವಲತ್ತು ಪಡೆದು ಕೊಳ್ಳು ವವರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ
ಹಣ ಜಮೆ
ಇದೀಗ ಅಕ್ಕಿ ಬದಲು ಹಣ ಕೂಡ ರಾಜ್ಯ ಸರಕಾರ ನೀಡ್ತಾ ಇದೆ, ಈತಿಂಗಳ ಹಣ ಖಾತೆಗೆ ಇನ್ನೂ ಕುಡ ಜಮೆ ಯಾಗಿಲ್ಲ,ಕೆಲವರ ಖಾತೆಗೆ ಅಷ್ಟೆ ಜಮೆ ಯಾಗಿದೆ , ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ವಿತರಿಸದೇ ತಲಾ ಐದು ಕೆಜಿ ಅಕ್ಕಿ ಯನ್ನು ಜನರಿಗೆ ವಿತರಣೆ ಮಾಡ್ತಾ ಇದೆ, ಉಳಿದ ಐದು ಕೆಜಿ ಅಕ್ಕಿಗೆ170 ರೂ.ಗಳನ್ನು ಗ್ರಾಹಕರ ಖಾತೆಗೆ ಹಾಕ್ತ ಇದ್ದು ಇದೀಗ ಮತ್ತಷ್ಟು ನಿಯಮ ಬದಲಾವಣೆ ಮಾಡಲಾಗಿದೆ ಎನ್ನುವ ಸುದ್ದಿ ವೈರಲ್ ಆಗ್ತಾ ಇದೆ
ಪೌಷ್ಟಿಕ ಆಹಾರ ವಿತರಣೆ
ಇನ್ನು ಮುಂದೆ ರಾಜ್ಯ ಸರ್ಕಾರ ಪಡಿತರದ ಹಣ ನೀಡುವುದಿಲ್ಲ, ಇದರ ಬದಲಾಗಿ ಪೌಷ್ಟಿಕ ಆಹಾರ ವಿತರಣೆ ಮಾಡು ದಾಗಿ ಚರ್ಚೆ ನಡೆದಿದೆ, ಪಡಿತರ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ನೀಡುವ ಬದಲುಪೂರಕ ಪೌಷ್ಟಿಕ ಆಹಾರ ನೀಡುವಂತೆ ಮನವಿ ಮಾಡಿದ್ದಾರೆ. 5 ಕೆಜಿ ಅಕ್ಕಿಯ ಬದಲಾಗಿ ರಾಗಿ ಅಥವಾ ಜೋಳ, ಎಣ್ಣೆ ವಿತರಿಸುವ ಬಗ್ಗೆ ಮಾಹಿತಿ ತಿಳಿದು ಬಂದಿದೆ
ಅರ್ಹರಿಗೆ ಲಭ್ಯ
ಈಗಾಗಲೆ ಪಡಿತರ ಸೌಲಭ್ಯ ದ ಅಕ್ಕಿ ಮತ್ತು ಹಣ ಬಿಪಿಎಲ್ , ಅಂತ್ಯೊದಯ ಕಾರ್ಡ್ ಬಳಕೆ ದಾರರಿಗೆ ಸಿಗ್ತಾ ಇದ್ದು, ಆರ್ಹ ರಿಗೆ ಲಭ್ಯವಾಗಿದೆ, ಮುಂದೆ ಆಹಾರ ವಿತರಣೆ ಕುರಿತಂತೆ ಕೂಡ ಚರ್ಚೆ ನಡೆದಿದ್ದು ಮುಂದಿನ ದಿನಗಳಲ್ಲಿ ದೊರೆಯಲಿದೆ ಎನ್ನಲಾಗಿದೆ, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣದ ಬದಲಾಗಿ ಹೊಸ ಸೌಲಭ್ಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ.