Image Credit: Original Source
Gruha Lakshmi New Rule: ರಾಜ್ಯದ ಜನತೆ ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣವನ್ನು ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ರಾಜ್ಯದ ಎಲ್ಲ ಅರ್ಹರ ಫಲಾನುಭವಿಗಳಿಗೆ ಮಾಸಿಕವಾಗಿ 2000 ಹಣವನ್ನು ಬಿಡುಗಡೆ ಮಾಡುತ್ತಿದೆ. ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆ ಸದ್ಯ 11 ಕಂತುಗಳ ಹಣ ಅರ್ಹರ ಖಾತೆಗೆ ತಲುಪಿದೆ ಎನ್ನಬಹುದು.
ಸದ್ಯ ಜುಲೈ ನಲ್ಲಿ 12 ನೇ ಕಂತಿನ ಹಣ ಜಮಾ ಆಗಲಿದೆ. ಮಾಸಿಕ ಕಂತುಗಳನ್ನು ಜಮಾ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ 12 ನೇ ಕಂತಿನ ಹಣದ ಬಿಡುಗಡೆಗೂ ಮುನ್ನ ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೊಸ ನಿಯಮದ ಪ್ರಕಾರ 12 ನೇ ಕಂತಿನ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗುವುದಿಲ್ಲ.
ದಿಡೀರ್ ಗೃಹಲಕ್ಷ್ಮಿ ಯೋಜನೆಯ ಹೊಸ ರೂಲ್ಸ್
ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಖಾತೆಗೆ 2000 ರೂ. ಹಣ ಜಮಾ ಆಗುತ್ತಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಸಂಪೂರ್ಣ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆಯು ಇನ್ನು ಅನೇಕರಿಗೆ ತಲುಪುವುದು ಬಾಕಿ ಇದೆ. ಒಂದು ಕಂತಿನ ಹಣ ಜಮಾ ಆದರೆ ಇನ್ನೊಂದು ಕಂತಿನ ಹಣ ಫಲಾನುಭವಿಗಳಿಗೆ ಜಮಾ ಆಗುತ್ತಿಲ್ಲ. ಇದಕ್ಕೆ ಕಾರಣ ಏನು ಅನ್ನುವ ಬಗ್ಗೆ ಸರ್ಕಾರ ಈಗಲೂ ಉತ್ತರ ಹುಡುಕುತ್ತಿದೆ.
ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸಮಯದಲ್ಲಿಯೇ ಸರ್ಕಾರ ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಮಾನದಂಡವನ್ನು ಪರಿಚಯಿಸಿತ್ತು. ಸದ್ಯ ಸರ್ಕಾರದ ನಿಯಮವನ್ನು ಮೀರಿ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅನರ್ಹರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಸರ್ಕಾರಕ್ಕೆ ತಿಳಿದು ಬಂದಿದೆ.
ಇನ್ಮುಂದೆ ಈ ಮಹಿಳೆಯರಿಗೆ ಹಣ ಸಿಗೋದೇ ಇಲ್ಲ
ಸದ್ಯ ರಾಜ್ಯ ಸರ್ಕಾರ GST ಹಾಗೂ TAX ಪಾವತಿದಾರರನ್ನು ಗುರುತಿಸಿದೆ. ಆದಾಯ ತೆರಿಗೆ ಪಾವತಿದಾರರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಎನ್ನುವ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಅದಾಗ್ಯೂ, ಆದಾಯ ತೆರಿಗೆ ಪಾವತಿದಾರರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಈ ನಿಟ್ಟಿನಲ್ಲಿ ಇಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಹೌದು, ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಯಾವ ಫಲಾನುಭವಿಗಳು GST ಹಾಗೂ TAX ಪಾವತಿಸುತ್ತಿದ್ದರೋ ಅಂತವರನ್ನು ಫಲಾನುಭವಿ ಪಟ್ಟಿಯಿಂದ ತೆಗೆದು ಹಾಕಿದೆ. ಇನ್ನುಮುಂದೆ ಆದಾಯ ತೆರಿಗೆ ಪಾವತಿಸುವವರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
Darshan And Pavithra Gowda Meet: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ತಮ್ಮ ಗೆಳತಿಗೆ…
Annapurna Yojana For Women's: ಸದ್ಯ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದತ್ತ ತನ್ನ ಗುರಿಯನ್ನು ಇಟ್ಟುಕೊಂಡಿದೆ, ಮಹಿಳೆಯರಿಗೆ ಆಗಾಗ ಆರ್ಥಿಕ…
Flight Ticket Booking By Using WhatsApp: WhatsApp ಬಗ್ಗೆ ಯಾರಿಗೆ ತಾನೇ ತಿಳಿದಿರುವುದಿಲ್ಲ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ…
Suryakumar Yadav Catch Mistake: ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಹೊಸ ಇತಿಹಾಸ…
Milk Price Down: ಸದ್ಯ ರಾಜ್ಯದಲ್ಲಿ ಜನರು ಬೆಲೆ ಏರಿಕೆಯ ಪರಿಣಾಮಕ್ಕೆ ಕಂಗಾಲಾಗಿದ್ದಾರೆ ಎನ್ನಬಹುದು. ದಿನ ನಿತ್ಯ ಬಳಕೆಯ ಎಲ್ಲ…
PhonePe Loan Update: ಇದೀಗ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಅನೇಕ ಯುಪಿಐ ವಹಿವಾಟುಗಳು ಚಾಲ್ತಿಯಲ್ಲಿವೆ. ಯುಪಿಐ…