Ads By Google

Indraja Shankar: ಮದ್ವೆಯಾದ ಒಂದೇ ತಿಂಗಳಿಗೆ ಬಿಗಿಲ್ ಪಾಂಡಿಯಮ್ಮ ಡೈವೋರ್ಸ್, ಗಳಗಳನೆ ಕಣ್ಣೀರಿಟ್ಟ ಪಾಂಡಿಯಮ್ಮ.

Indraja Shankar Divorce

Image Credit: Original Source

Ads By Google

Indraja Shankar Divorce: ಸಿನಿಮಾ ಸೆಲೆಬ್ರೆಟಿಗಳ ಮದುವೆಯ ವಿಚಾರ ಹೇಗೆ ವೈರಲ್ ಆಗುತ್ತದೆಯೋ ಅದೇ ರೀತಿ ಅವರ ಡಿವೋರ್ಸ್ ವಿಚಾರ ಕೂಡ ವೈರಲ್ ಆಗುತ್ತಲೇ ಇರುತ್ತದೆ. ದಂಪತಿಗಳ ನಡುವೆ ಎಲ್ಲವು ಸರಿ ಇದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆ ಜೋಡಿ ವಿಚ್ಛೇದನ ಪಡೆಯುವ ಬಗ್ಗೆ ಆಗಾಗ ಸುದ್ದಿ ವೈರಲ್ ಆಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟ ದಳಪತಿ ವಿಜಯ್ ನಟನೆಯ ಬಿಗಿಲ್ ಚಿತ್ರದಲ್ಲಿ ನಟಿಸಿದ ಪಾಂಡಿಯಮ್ಮ ಪಾತ್ರದಾರಿಯಾದ ಇಂದ್ರಜಾ ಶಂಕರ್ ಅವರ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ.

2024 ರ ಮಾರ್ಚ್ 24 ರಂದು ಇಂದ್ರಜಾ ತಮ್ಮ ಬಹುಕಾಲದ ಗೆಳೆಯನ ಕೈಹಿಡಿದಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಎಲ್ಲರಿಗು ತಾವು ಮದುವೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇನ್ನು ಇಂದ್ರಜಾ ಅವರ ಮದುವೆಯಾಗಿ ಒಂದು ತಿಂಗಳು ಕಳೆಯುವುದಕ್ಕೂ ಮುನ್ನ ಈ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿಯಾಗಿದೆ. ಅಷ್ಟಕು ಈ ಜೋಡಿ ವಿಚ್ಛೇದನ ಪಡೆಯುತ್ತಿರುವುದು ನಿಜವೇ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Image Credit: Filmibeat

ಮದ್ವೆಯಾದ ಒಂದೇ ತಿಂಗಳಿಗೆ ಬಿಗಿಲ್ ಪಾಂಡಿಯಮ್ಮ ಡೈವೋರ್ಸ್
ಪಾಂಡಿಯಮ್ಮ ಮದುವೆ ಸಂಭ್ರಮದ ವಿಡಿಯೋ ವೈರಲ್ ಆಗಿದ್ದು ವಿವಾದಕ್ಕೆ ಗುರಿಯಾಗಿದೆ. ವಿಡಿಯೋ ನೋಡಿದ ಅನೇಕರು ಒಂದು ಕ್ಷಣ ಬೆಚ್ಚಿಬಿದ್ದರು. ರೋಬೋ ಶಂಕರ್ ಪತ್ನಿ ಪ್ರಿಯಾಂಕಾ ಶಂಕರ್ ಅಳಿಯನ ತುಟಿಗೆ ಮುತ್ತಿಟ್ಟಿದ್ದಾರೆ. ಮದುವೆಯ ಆರತಕ್ಷತೆಯ ದಿನದಂದು ಸೆರೆಹಿಡಿದ ವಿಡಿಯೋ ಇದು. ಅಳಿಯನ ಜೊತೆ ಡ್ಯಾನ್ಸ್ ಮಾಡಿರುವ ಪ್ರಿಯಾಂಕಾ ಶಂಕರ್, ಅಳಿಯನ ತುಟಿಗೆ ಮುತ್ತು ಕೊಟ್ಟಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಯಾವ ಸಂಸೃಕ್ತಿಯಲ್ಲಿ ನಾವು ಬದುಕುತ್ತಿದ್ದೇವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇಂದ್ರಜಾ ತನ್ನ ತಂದೆಗೆ ಮುತ್ತು ಕೊಡುವ ದೃಶ್ಯವೂ ಟೀಕೆಗೆ ಒಳಗಾಗಿತ್ತು. ಅಂದಿನಿಂದ ಇಂದ್ರಜಾ-ಕಾರ್ತಿಕ್ ದಂಪತಿ ನಿರಂತರವಾಗಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಇಂದ್ರಜಾ ಕಾರ್ತಿಕ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳು ಧನಾತ್ಮಕ ಕಾಮೆಂಟ್‌ ಗಳಿಗಿಂತ ಹೆಚ್ಚು ನಕಾರಾತ್ಮಕ ಕಾಮೆಂಟ್‌ ಗಳನ್ನು ಸ್ವೀಕರಿಸುತ್ತಿವೆ.

Image Credit: News 18

ಗಳಗಳನೆ ಕಣ್ಣೀರಿಟ್ಟ ಪಾಂಡಿಯಮ್ಮ
ಅದರಲ್ಲೂ ಮದುವೆಯಾದ ಒಂದೇ ತಿಂಗಳಲ್ಲೇ ಇಬ್ಬರು ಬೇರೆಯಾಗುತ್ತಾರೆ ಎಂದು ಕಮೆಂಟ್ ಗಳು ಕೇಳಿ ಬರುತ್ತಿದೆ. ಇದರಿಂದ ಇಂದ್ರಜಾ ಕೂಡ ಬೇಸರಗೊಂಡಿದ್ದಾರೆ. ಮದುವೆಯ ನಂತರ ಇಂದ್ರಜಾ ಮತ್ತು ಕಾರ್ತಿಕ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಬಗ್ಗೆಯೂ ಲೇವಡಿ ಮಾಡಿದ್ದ ನೆಟ್ಟಿಗರು ಸ್ವಲ್ಪ ದಿನ ಕಾಯಿರಿ, ಈಗ ಒಟ್ಟಿಗೆ ಇರುವ ಇವರಿಬ್ಬರನ್ನು ಪ್ರತ್ಯೇಕವಾಗಿ ಸಂದರ್ಶನ ಮಾಡುತ್ತೀರಿ.

ಇನ್ನು ಕೆಲವೇ ತಿಂಗಳಲ್ಲಿ ವಿಚ್ಛೇದನ ಪಡೆಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಇಂದ್ರಜಾ, ಇಂತಹ ಕಾಮೆಂಟ್‌ ಗಳಿಂದ ತುಂಬಾ ನೋವಾಗಿದೆ. ಒಬ್ಬರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದೇಕೆ..? ನಮಗೂ ಮನಸ್ಸಿಲ್ಲವೇ..? ಎಂದು ಹೇಳುತ್ತಾ ಸಂದರ್ಶನದಲ್ಲಿ ಇಂದ್ರಜಾ ಕಣ್ಣೀರಿಟ್ಟರು.

Image Credit: Asianetnews
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in