Image Source: India Today
Jio Free OTT Recharge Plan: ದೇಶದಲ್ಲಿ Jio ಟೆಲಿಕಾಂ 44 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಡಿಮೆ ಬೆಲೆಯ ಯೋಜನೆಗಳಿಂದಾಗಿ ಜಿಯೋ ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಜಿಯೋ ತನ್ನ ಬಳಕೆದಾರರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ.
ಉಚಿತ OTT ಚಂದಾದಾರಿಕೆ, ಡೇಟಾ ವೋಚರ್ ಗಳು, ಮನರಂಜನಾ ಯೋಜನೆಗಳು, ವಾರ್ಷಿಕ ಯೋಜನೆಗಳು, ಡೇಟಾ ಬೂಸ್ಟರ್ ಸೇರಿದಂತೆ ದೈನಂದಿನ ಮಿತಿಯಿಲ್ಲದೆ ಹಲವು ಯೋಜನೆಗಳನ್ನು ಪರಿಚಯಿಸಿದೆ. ಇದೀಗ ನಾವು ಈ ಲೇಖನದಲ್ಲಿ ಒಂದೇ ರೀಚಾರ್ಜ್ ನಲ್ಲಿ ಉಚಿತ ಕರೆ, ಡೇಟಾ, ಉಚಿತ OTT ಚಂದಾದಾರಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಬಹುದಾದ ಯೋಜನೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ.
Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲಾನ್
ನೀವು ಎಲ್ಲ ರೀತಿಯ ಯೋಜನೆಯ ಲಾಭ ಪಡೆಯಲು ರೂ. 1198 ರೂ. ರಿಚಾರ್ಜ್ ಮಾಡಿಸಿಕೊಳ್ಳಬೇಕು. ಈ ಯೋಜನೆಯಲ್ಲಿ ಕಂಪನಿಯು ತನ್ನ ಬಳಕೆದಾರರಿಗೆ 84 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ನೀವು ಯಾವುದೇ ನೆಟ್ ವರ್ಕ್ ನಲ್ಲಿ 84 ದಿನಗಳವರೆಗೆ ಉಚಿತ ಕರೆ ಮಾಡಬಹುದು.
ಈ ಯೋಜನೆಯಲ್ಲಿ, ನೀವು ಸುಮಾರು 3 ತಿಂಗಳ ಕಾಲ ರೀಚಾರ್ಜ್ ಮಾಡುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು. ಜಿಯೋ 84 ದಿನಗಳವರೆಗೆ ಒಟ್ಟು 168GB ಡೇಟಾವನ್ನು ನೀಡುತ್ತದೆ. ಈ ರೀತಿಯಾಗಿ, ಈ ಯೋಜನೆಯಲ್ಲಿ ನೀವು ಪ್ರತಿದಿನ ಸುಮಾರು 2GB ಡೇಟಾವನ್ನು ಬಳಸಬಹುದು. ಇತರ ಯೋಜನೆಗಳಂತೆ, ಈ ರೀಚಾರ್ಜ್ ಯೋಜನೆಯಲ್ಲಿ ಡೇಟಾ ಜೊತೆಗೆ ಉಚಿತ SMS ಸಹ ನೀಡಲಾಗುತ್ತದೆ. ಇದರಲ್ಲಿ ನೀವು ಪ್ರತಿದಿನ 100 ಉಚಿತ SMS ಅನ್ನು ಪಡೆಯುತ್ತೀರಿ.
ಈಗ ಸಂಪೂರ್ಣ IPL ಉಚಿತವಾಗಿ ನೋಡಿ
ರಿಲಯನ್ಸ್ ಜಿಯೋದ ಈ ರೂ. 1198 ಯೋಜನೆಯನ್ನು ನೀವು OTT ಬಂಡಲ್ ಎಂದು ಕರೆಯಬಹುದು. ಏಕೆಂದರೆ ಈ ಯೋಜನೆಯಲ್ಲಿ ನೀವು ಕೇವಲ ಒಂದು ಅಥವಾ ಎರಡು ಅಲ್ಲ ಸಂಪೂರ್ಣ 14 OTT ಅಪ್ಲಿಕೇಶನ್ ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಈ ಯೋಜನೆಯಲ್ಲಿ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನ ಚಂದಾದಾರಿಕೆಯು 90 ದಿನಗಳವರೆಗೆ ಮತ್ತು ಪ್ರೈಮ್ ವಿಡಿಯೋ 84 ದಿನಗಳವರೆಗೆ ಲಭ್ಯವಿದೆ. ಇದರೊಂದಿಗೆ ಜಿಯೋ ಸಿನಿಮಾ ಸೌಲಭ್ಯವನ್ನು 84 ದಿನಗಳವರೆಗೆ ಒದಗಿಸಲಾಗಿದೆ. ಈ ಯೋಜನೆಯಲ್ಲಿ ಹೆಚ್ಚಿನ ಸೌಲಭ್ಯ ಸಿಗುವುದರಿಂದ ಇಂದೇ ಯೋಜನೆಯ ರಿಚಾರ್ಜ್ ಮಾಡಿಸಿಕೊಂಡು ಹೆಚ್ಚಿನ ಪ್ರಯೋಜವನ್ನು ಪಡೆಯಿರಿ.
Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…