Image Credit: Original Source
Jio Unlimited Plan Details: ದೇಶದ ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಕಂಪನಿಯಾದ Jio ಸದ್ಯ ತನ್ನ ಎಲ್ಲ ಪ್ರೀಪೈಡ್ ಯೋಜನೆಗಳ ದರವನ್ನು ಹೆಚ್ಚಿಸಿದೆ. ಜಿಯೋ ರಿಚಾರ್ಜ್ ದರಗಳು ಹೆಚ್ಚಿಸಿದ ಕಾರಣ ಬಳಕೆದಾರರು ಚಿಂತೆಯಲ್ಲಿದ್ದಾರೆ. ಅದಾಗ್ಯೂ, ಜಿಯೋ ತನ್ನ ರಿಚಾರ್ಜ್ ದರಗಳನ್ನು ಹೆಚ್ಚಿಸುವುದರ ಜೊತೆಗೆ ತನ್ನ ಗ್ರಾಹಕರಿಗೆ Unlimited Plan ಗಳನ್ನೂ ನೀಡುತ್ತಿದೆ.
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳಲ್ಲಿ ಬಳಕೆದಾರರು ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದು. ಜಿಯೋ ಸದ್ಯ ಜುಲೈ 3 ರಿಂದ ಜಾರಿಗೆ ಬರುವಂತೆ ಕೆಲವು Unlimited Plan ಗಳನ್ನೂ ಘೋಷಿಸಲಿದೆ. ಹೊಸ ಯೋಜನೆಯ ಬಗ್ಗೆ ವಿವರವನ್ನು ತಿಳಿಯಲು ಬಳಕೆದಾರರು ಈ ಲೇಖನವನ್ನು ಓದಬಹುದು.
ಜೂಲೈ 3 ರಿಂದ ಎಲ್ಲಾ Jio ಗ್ರಾಹಕರಿಗೆ ಗುಡ್ ನ್ಯೂಸ್
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಜುಲೈ 3 ರಿಂದ ಜಾರಿಗೆ ಬರುವಂತೆ ಹಲವಾರು ಹೊಸ ಅನಿಯಮಿತ ಯೋಜನೆಗಳನ್ನು ಘೋಷಿಸಿದೆ. ಹೊಸ ಯೋಜನೆಗಳ ಮೂಲಕ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ಅದರ 5G ಸಂಪರ್ಕವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು 85% ತಲುಪಿದೆ.
ತಿಂಗಳಿಗೆ ರೂ.189 ಪ್ಲಾನ್ ನಲ್ಲಿ ದಿನಕ್ಕೆ 2GB ಯಿಂದ ದಿನಕ್ಕೆ 2.5GB ವಾರ್ಷಿಕ ರೂ.3,599 ನಲ್ಲಿ ಸಿಗಲಿದೆ. ಇದು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ 5G ಡೇಟಾ ಯೋಜನೆಗಳನ್ನು ಒಳಗೊಂಡಿದೆ. ಅನಿಯಮಿತ 5G ಡೇಟಾ ಸೇವೆಯು ದಿನಕ್ಕೆ 2GB ಅಥವಾ ಹೆಚ್ಚಿನದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ.
ಹೊಸ ಯೋಜನೆ ಆರಂಭ
ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯವನ್ನು ವಿಸ್ತರಿಸಿದೆ. ಜಿಯೋ ಇದೀಗ ಜಿಯೋ ಸೇಫ್ ಮತ್ತು ಜಿಯೋ ಟ್ರಾನ್ಸ್ಲೇಟ್ ಎಂಬ ಎರಡು ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳಿಗೆ ರೂ. 199 ಬೆಲೆಯದ್ದಾಗಿದೆ ಮತ್ತು ಸುರಕ್ಷಿತ ಕರೆ, ಸಂದೇಶ ಮತ್ತು ಫೈಲ್ ವರ್ಗಾವಣೆ ಸೇವೆಗಳನ್ನು ನೀಡುತ್ತದೆ. ತಿಂಗಳಿಗೆ ರೂ. 99 ದರದಲ್ಲಿ, ಕೃತಕ ಬುದ್ಧಿಮತ್ತೆಯಿಂದ ನಡೆಸಲ್ಪಡುವ Jio ಟ್ರಾನ್ಸ್ಲೇಟ್ ಅಪ್ಲಿಕೇಶನ್, ಧ್ವನಿ, ಕರೆ, ಸಂದೇಶ, ಪಠ್ಯ ಮತ್ತು ಚಿತ್ರಗಳನ್ನು ಅನುವಾದಿಸಬಹುದು. ಈ ಎರಡೂ ಆಪ್ ಗಳು ಜಿಯೋ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿರುತ್ತದೆ. ಈ ಹೊಸ ಯೋಜನೆಯ ಮೂಲಕ ಬಳಕೆದಾರರು ಇನ್ನಷ್ಟು ಪ್ರಯೋಜನವನ್ನು ಪಡೆಯಬಹುದು.
Team India Stuck In The Storm: ಸದ್ಯ T20 World Cup 2024 ರಲ್ಲಿ ಭಾರತ ತಂಡ ದಕ್ಷಿಣ…
Free Gas Cylinder Apply Latest Update: ದೇಶದಲ್ಲಿ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಗಳ ಬೆಲೆಗೆ ಬ್ರೇಕ್ ಹಾಕಲು ಕೇಂದ್ರ…
Gruha Lakshmi New Rule: ರಾಜ್ಯದ ಜನತೆ ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣವನ್ನು ಪಡೆಯುತ್ತಿದ್ದಾರೆ. ರಾಜ್ಯ…
7th Pay Latest News: ರಾಜ್ಯ ಸರ್ಕಾರೀ ನೌಕರರು ಹಲವು ಸಮಯದಿಂದ 7 ನೇ ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಸರ್ಕಾರ…
Crop Compensation Installments: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ನೀಡುತ್ತಿದೆ .…
Shawarma Ban In Karnataka: ಸದ್ಯ ರಾಜ್ಯ ಸರ್ಕಾರ ಜನಸಾಮನ್ಯರಿಗಾಗಿ ಅನೇಕ ಸೌಲಭ್ಯವನ್ನು ನೀಡುವುದರ ಜೊತೆಗೆ ಜನರ ಜೀವಕ್ಕೆ ಹಾನಿಯಾಗುವಂತಹ…