Kiccha Sudeep Took Class To Amulya Gowda: ಕನ್ನಡ ಕಿರುತೆರೆಯ ಬಿಗ್ ಶೋ ಎಂದರೆ ಬಿಗ್ ಬಾಸ್ (Bigg Boss). ಇದೀಗ ಬಿಗ್ ಬಾಸ್ ಸತತ 12 ವಾರಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.
ಬಿಗ್ ಬಾಸ್ ಫಿನಾಲೆಗೆ ಕೇವಲ 2 ವಾರಗಳಷ್ಟೇ ಬಾಕಿ ಇದೆ. ವೀಕ್ಷಕರು ಬಿಗ್ ಬಾಸ್ ಸೀಸನ್ 9 (Bigg Boss Sision 9) ರಲ್ಲಿ ಯಾರು ವಿನ್ ಆಗುತ್ತಾರೆ ಎಂಬುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಬಿಗ್ ಶೋ ಅನ್ನು ಕಿಚ್ಚ ಸುದೀಪ್ (Kiccha Sudeep) ನಿರೂಪಣೆ ಮಾಡುತ್ತಿದ್ದಾರೆ.
ಆರ್ಯವರ್ಧನ್ ಗುರೂಜಿಗೆ (Aryavardhan Guruji) ಕಳಪೆ ಕೊಟ್ಟ ಅಮೂಲ್ಯ
ಬಿಗ್ ಬಾಸ್ ಮನೆಯ ವಾರದ ಪಂಚಾಯತಿಯಲ್ಲಿ ಕಳಪೆ ವಿಚಾರಕ್ಕೆ ಸಂವಾದ ನಡೆದಿದೆ. ಕಳಪೆ ಕೊಡುವ ವಿಚಾರವಾಗಿ ಅಮೂಲ್ಯ (Amulya) ನಡೆದುಕೊಂಡ ರೀತಿಗೆ ಕಿಚ್ಚ ಸುದೀಪ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಕಳಪೆ ಹಣೆಪಟ್ಟಿ ಕೊಡುವ ವಿಚಾರವಾಗಿ ನಿಮಗೆ ಜಡ್ಜ್ ಮಾಡೋಕೆ ಬಂದಿಲ್ಲ ಎಂದು ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿ ವರದಂತೆ ಈ ವರವು ಉತ್ತಮ ಮತ್ತು ಕಳಪೆ ಕೊಡುವ ಪದ್ಧತಿ ಇದ್ದಿತ್ತು.
ಅದರಂತೆ ಮನೆಮಂದಿ ಎಲ್ಲರೂ ಈ ಕುರಿತು ವೋಟ್ ಮಾಡಬೇಕು. ಆಗ ಅಮೂಲ್ಯ ಗೌಡ (Amulya Gowda) ನನ್ನನ್ನು ಕಳಪೆಗೆ ಪರಿಗಣಿಸಲು ಸಾಧ್ಯವಿಲ್ಲ ಹಾಗಾಗಿ ನಾನು ಆರ್ಯವರ್ಧನ್ ಗುರೂಜಿಗೆ ಕಳಪೆ ಕೊಡುತ್ತೇನೆ. ಆದರೆ ಅವರು ಕಳಪೆ ಅಲ್ಲ ಎಂದು ಮಾತನಾಡಿದರು. ಈ ವಿಚಾರವಾಗಿ ಸುದೀಪ್ ವೀಕೆಂಡ್ ನಲ್ಲಿ ಮಾತನಾಡಿದರು.
ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಮಾತು
ಕಳಪೆ ಮತ್ತು ಉತ್ತಮ ಎಂದು ಹೇಗೆ ಪರಿಗಣಿಸುತ್ತೇವೆ. ಬಿಗ್ ಬಾಸ್ ಏನಾದರೂ ಕಳಪೆಗೆ ರೂಲ್ಸ್ ಹೇಳಿದ್ದಾರೆ ಎಂದು ಸುದೀಪ್ ಕೇಳಿದ್ದಾರೆ. ಅಮೂಲ್ಯ ಅವರ ನಡೆಯ ಬಗ್ಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ಈ ವಾರ ಚೆನ್ನಾಗಿ ಆಡಿದ್ದರು.
ಒಬ್ಬರಿಗೆ ಕಳಪೆ ಕೊಡುವುದು ಕಷ್ಟವಾಗಿತ್ತು. ಹಾಗೆ ನೋಡಿದ್ರೆ ನಾನು ಈ ವಾರ ಕೆಲ ಆಟದಲ್ಲಿ ಸೋತಿದ್ದೆ ಎಂದು ಅಮೂಲ್ಯ ಮಾತನಾಡಿದ್ದಾರೆ. ಬಳಿಕ ಸುದೀಪ್ ನಿಮಗೆ ಕಳಪೆ ಕೊಡುವ ವಿಚಾರದಲ್ಲಿ ಜಡ್ಜ್ ಮಾಡೋಕೆ ಬರಲಿಲ್ಲ ಎಂದು ಹೇಳಿ ಕಿಚ್ಚ ಕೊಂಚ ಖಾರವಾಗಿಯೇ ಅಮೂಲ್ಯಗೆ ಮಾತನಾಡಿದರು.