Kirik Keerthi And Om Prakash Controvorsy: ಕಿರಿಕ್ ಕೀರ್ತಿ (Kirik Keerthi) ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ವ್ಯಕ್ತವಾಗುವ ಕಾಮೆಂಟ್ ಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಮೊದಲು ಅವರು ಏನೆ ಕಮೆಂಟ್ ಬಂದರು ಸಹ ತಲೆ ಕೆಡಿಸಿಕೊಳ್ಳದೆ ಪ್ರತಿಕ್ರಿಯೆ ನೀಡದೆ ಇರುತ್ತಿದ್ದ ವ್ಯಕ್ತಿ. ಆದರೆ ಇತ್ತೀಚಿಗೆ ತಮ್ಮ ವಿರುದ್ಧ ಏನೆ ಆದರೂ ಕೆಟ್ಟದಾಗಿ ಏನೆ ಕಮೆಂಟ್ ಮಾಡಿದರು ಸಹ ಕಿರಿಕ್ ಕೀರ್ತಿ ಅವರು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.
ಸಾಯುವ ಹಂತದವರೆಗೂ ಹೋಗಿ ನಂತರ ಬದುಕಬೇಕು ಎಂದು ನನ್ನ ನಿರ್ಧಾರ ಬದಲಿಸಿಕೊಳ್ಳಬೇಕು ಎಂದುಕೊಂಡು ಒಳ್ಳೆಯ ವೈಬ್ ನೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದ ಕಿರಿಕ್ ಕೀರ್ತಿ ಕುಟುಂಬದ ವಿಚಾರದ ಕುರಿತು ಕೇಳಿಬಂದಿದ್ದ ಸುದ್ದಿ ಕುರಿತು ಕಿಡಿಕಾರಿದ್ದರು.
ಕಿರಿಕ್ ಕೀರ್ತಿ ನಡವಳಿಕೆ ಸರಿಯಿಲ್ಲ ನಾನ್ ಸೆನ್ಸ್ ಎಂದ ಓಂ ಪ್ರಕಾಶ್
ನಟಿ ಸಂಜನಾ ಚಿದಾನಂದ್ ನಾಯಕಿಯಾಗಿ ಆಯ್ಕೆಯಾಗಿದ್ದ ಚಿತ್ರದ ಫೋಟೋಶೂಟ್ ಸಹ ನಡೆದಿತ್ತು. ಆದರೆ ಸದ್ದು ಮಾಡುತ್ತಾ ಆರಂಭವಾಗಿದ್ದ ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಲೇ ಇಲ್ಲ ಹಾಗು ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ನಿಂತು ಹೋಗಲು ಕಾರಣವೇನು ಎಂಬುದು ಸಹ ಆಚೆ ಬಂದಿರಲಿಲ್ಲ.
ಈ ವಿಷಯದ ಕುರಿತು ಇದೀಗ ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾ ನಿಲ್ಲಿಸಲು ಕಾರಣ ಕಿರಿಕ್ ಕೀರ್ತಿ ನಡೆವಳಿಕೆ, ಆತನೊಬ್ಬ ನಾನ್ ಸೆನ್ಸ್ ಎಂದು ಹೇಳಿಕೆ ನೀಡಿದ್ದಾರೆ.
ಓಂ ಪ್ರಕಾಶ್ ಮಾತಿಗೆ ನೆಟ್ಟಿಗರಲ್ಲಿ ಗೊಂದಲ ಮೂಡಿಸುವಂತೆ ಮಾತನಾಡಿದ ಕೀರ್ತಿ
ಇನ್ನು ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕಿರಿಕ್ ಕೀರ್ತಿ ಅವರು ಓಂ ಪ್ರಕಾಶ್ ಮಾತಿಗೆ ತಿರುಗೇಟು ನೀಡಿದ್ದಾರೆ. ಗೌರವಾನ್ವಿತ ಓಂ ಪ್ರಕಾಶ್ ರಾವ್ ಸರ್ ಅವರೇ ಸಿನಿಮಾ ಯಾಕೆ ನಿಂತು ಹೋಯಿತು, ನಾನು ಯಾಕೆ ಸಿನಿಮಾದಿಂದ ಹೊರ ಬಂದೆ ಎಂದು ಕಿರಿಕ್ ಕೀರ್ತಿ ಹೇಳಿದ್ದಾರೆ.
ಮೊದಲ ನಟಿ ಸಿನಿಮಾದಿಂದ ಯಾಕೆ ಹೊರಗಡೆ ಹೋದಳು, ಫೋಟೋಶೂಟ್ ದಿನ ಏನು ನಡೆಯಿತು, ಅಲ್ಲಿಂದ ಮೊದಲ ನಟಿ ಯಾಕೆ ಬಿಟ್ಟು ಹೋದಳು, ಮೈಸೂರಲ್ಲಿ ಸ್ಕ್ರಿಪ್ಟ್ ಬರೆಯಲು ರೂಮ್ ಹಾಕಿದ ಮೇಲೆ ಎರಡನೇ ನಟಿಯೂ ಯಾಕೆ ಬಿಟ್ಟು ಹೋದಳು, ಆಮೇಲೆ ನಾನು ನಿಮಗೆ ಏನು ಹೇಳಿ ಬಂದೆ ಇದನ್ನೆಲ್ಲಾ ಚರ್ಚಿಸಲು ಒಮ್ಮೆ ಕುಳಿತುಕೊಳ್ಳೋಣ ಎಂದು ಸಾಲು ಸಾಲು ಪ್ರಶ್ನೆಗಳನ್ನು ಇಟ್ಟು ನೆಟ್ಟಿಗರಲ್ಲಿ ಭಾರೀ ಕುತೂಹಲ ಹಾಗೂ ಗೊಂದಲ ಮೂಡಿಸಿದ್ದಾರೆ.
Aadhar Download Online Process: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ವಿಶೇಷವಾದ ದಾಖಲೆಯಾಗಿದೆ. ನೀವು ಯಾವುದೇ ಸರ್ಕಾರಿ ಸೇವೆಯನ್ನು…
Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…
PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…
Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…
Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…
July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…