Chandrayaan-3: ಚಂದ್ರಯಾನ್ 3 ಬಗ್ಗೆ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮಿಗಳು, ನಿಜವಾಗುತ್ತ ಕೊಡಿ ಶ್ರೀಗಳ ಭವಿಷ್ಯ.
ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಚಂದ್ರಯಾನ 3 ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
Kodi Mutt Swamy About Chandrayaan 3: ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ (Shivayogi Shivananda Rajendra) ಸ್ವಾಮೀಜಿಯವರು ಇತ್ತೀಚಿಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಶ್ರಾವಣ ಮಾಸ ಆರಂಭದಲ್ಲೇ ಶ್ರೀಗಳು ಕೆಲವು ಅಪಾಯದ ಸೂಚನೆಯನ್ನು ನೀಡಿದ್ದಾರೆ. ಭೂಕಂಪ, ಸುನಾಮಿಯ ಬಗ್ಗೆ ಎಚ್ಚರ ವಹಿಸುವಂತೆ ಶ್ರೀಗಳು ಮಾಹಿತಿ ನೀಡಿದ್ದರು.
ಇನ್ನು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ, ಲೋಕಸಭಾ ಚುನಾವಣೆ, ಪ್ರಕೃತಿ ವಿಕೋಪ,ರಾಜ್ಯ ರಾಜಕಾರಣ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಚಂದ್ರಯಾನ 3 ಬಗ್ಗೆ ಶ್ರೀಗಳು ಒಂಧಿಷ್ಟು ಭವಿಷ್ಯವಾಣಿ ನೀಡಿದ್ದಾರೆ.
ಚಂದ್ರಯಾನ 3 (Chandrayana 3)
ಭಾರತದ ಮೂರನೇ ಬಾರಿಗೆ ಚಂದ್ರನ ಅನ್ವೇಷಣಾ ಕಾರ್ಯಾಚರಣೆಯಾದ ಚಂದ್ರಯಾನ 3 ಉಡಾವಣೆ ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಯಶಸ್ವಿಯಾಗಿ ನೆರವೇರಿದೆ. ಭಾರತದಲ್ಲಿ ಚಂದ್ರಯಾನ 3 (Chandrayana 3) ಯಶಸ್ಸು ಕಾಣುತ್ತಿದೆ. ಚಂದ್ರಯಾನ 3 ಜನಸಾಮಾನ್ಯರಿಗೆ ತಿಳಿದಿರದ ಅನೇಕ ರಹಸ್ಯವನ್ನು ಬಹಿರಂಗಪಡಿಸಲಿದೆ.
ಚಂದ್ರಯಾನ 3 ಈಗಾಗಲೇ ಯಶಸ್ಸು ಕಂಡಿದ್ದು ಈ ಕಾರಣಕ್ಕೆ ಚಂದ್ರನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಸ್ರೋದ ಚಂದ್ರಯಾನ ಭಾರತಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ. ಚಂದ್ರಯಾನ 33 .84 ಲಕ್ಷ ಕಿಲೋಮೀಟರ್ ದೂರದ ಪ್ರಯಾಣವನ್ನು ಆರಂಭಿಸಿದ್ದು, ಇದು ಚಂದ್ರನನ್ನು ತಲುಪಲು ಸುಮಾರು 42 ದಿನಗಳನ್ನು ತೆಗೆದುಕೊಳ್ಳುತ್ತದೆ. lvm -3 ರಾಕೆಟ್ ಇದನ್ನು 179 ಕಿ ಮೀ ಎತ್ತರದಲ್ಲಿ ಬಿಟ್ಟಿದೆ.
ಇಂದು ಸಂಜೆಯೊಳಗೆ ಚಂದ್ರಯಾನ ಚಂದ್ರನನ್ನು ತಲುಪುವ ಬಗ್ಗೆ ಇಸ್ರೋ ನಿರೀಕ್ಷೆ ಮಾಡಿದೆ. ಇಡೀ ದೇಶವೇ ಈ ಕ್ಷಣಕ್ಕಾಗಿ ಕಾಯುತ್ತಿದೆ. ಈ ವೇಳೆ ಭವಿಷ್ಯವಾಣಿಯಿಂದಲೇ ಸಾಕಷ್ಟು ಖ್ಯಾತಿ ಪಡೆದಿರುವ ಕೊಡಿ ಮಠದ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಚಂದ್ರಯಾನ 3 ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಶ್ರೀಗಳ ಭವಿಷ್ಯವಾಣಿ ಎಲ್ಲರಲ್ಲೂ ಖುಷಿ ಮೂಡಿಸಿದೆ.
ಚಂದ್ರಯಾನ 3 ಬಗ್ಗೆ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಈಗಾಗಲೇ ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ ಚಂದ್ರನ ಬಗ್ಗೆ ಸಾಕಷ್ಟು ರಹಸ್ಯವನ್ನು ಕಲೆಹಾಕಿದೆ. ಚಂದ್ರಯಾನ 3 ಸೆರೆಹಿಡಿದ ಚಂದ್ರನ ಮೊದಲ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಈಗಾಗಲೇ ಬಹಿರಂಗಪಡಿಸಿದೆ.
ಇನ್ನು ಚಂದ್ರಯಾನ 3 ಬಗ್ಗೆ ಶ್ರೀಗಳು ಮಾಹಿತಿ ನೀಡಿದ್ದಾರೆ. ‘ಚಂದ್ರಯಾನ 3 ಯಶಸ್ವಿಯಾಗಿ ನೆರವೇರಲಿದೆ. ಇಸ್ರೋದ ಸಂಶೋಧನೆ ಉತ್ತಮ ಫಲಿತಾಂಶ ನೀಡಲಿದೆ. ಚಂದ್ರಯಾನ 3 ಸುಗಮವಾಗಿ ಯಾವುದೇ ತೊಂದರೆ ಇಲ್ಲದೆ ನೆರವೇರುತ್ತದೆ’ ಎಂದು ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ.