Kodi Mutt Swamiji: ದೇಶದಲ್ಲಿ ಕೊರೋನಾ ಭೀತಿಯಿಂದ ಹಲವಾರು ಜನರು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್ (Corona Virus) ಜನರ ಪ್ರಾಣವನ್ನು ಕಿತ್ತುಕೊಳ್ಳುವ ಕೆಟ್ಟ ವೈರಸ್. ಸತತ ಎರಡು ವರ್ಷಗಳ ವರೆಗೆ ಕೊರೋನಾ ವಿಶ್ವದಾದ್ಯಂತ ಜನರ ಪ್ರಾಣ ಹಿಂಡಿತ್ತು.
ಚೀನಾದಲ್ಲಿ ಉಟ್ಟಿಕೊಂಡ ಕೊರೋನಾ ವೈರಸ್ ಭಾರತಕ್ಕೂ ಹರಡಿ ಭಾರತದ ಜನರ ಭಯಕ್ಕೆ ಕಾರಣವಾಯಿತು. ಕೊರೋನಾ ಮೊದಲನೇ ಅಲೆಯಲ್ಲಿ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಕೊರೋನಾ ನಲಕನೇ ಅಲೆಗೆ ಹೆದರುವ ಅವಶ್ಯಕತೆ ಇಲ್ಲ
ಇದೀಗ ಭಾರತದಲ್ಲಿ ಮತ್ತೆ ಕೊರೋನಾ ಸೋಂಕಿನ ಆತಂಕ ಎದುರಾಗಿದ್ದು, ಕೊರೋನಾ ಬಗ್ಗೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ಕೊರೋನಾ ನಾಲ್ಕನೇ ಅಲೆ ಯಾವುದೇ ಪರಿಣಾಮಕಾರಿ ಅಲ್ಲ ಅಂತೆ. ಕೊರೋನಾ ಬರುತ್ತದೆ, ಬಂದು ಹೋಗುತ್ತದೆ ಎಂದುಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shree Shivananda Shivayogi Rajendra) ಹೇಳಿದ್ದಾರೆ.
ಕೊರೋನಾ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ
ಮಾಧ್ಯಮದೊಂದಿಗೆ ಮಾತನಾಡಿದ ಕೋಡಿಮಠದ ಸ್ವಾಮಿಗಳು, ಓಲೆ ಹತ್ತಿ ಉರಿದರೆ ಅಡುಗೆ ಆಗುತ್ತದೆ, ಭೂಮಿ ಹತ್ತಿ ಉರಿದರೆ ಏನಾಗುತ್ತೆ, ಅಂತಹ ಪ್ರಸಂಗ ಮುಂದೆ ನಡೆಯುತ್ತದೆ. ಮುಂದೆ ಅದರ ಬಗ್ಗೆ ಭವಿಷ್ಯ ನುಡಿಯುತ್ತೇನೆ.
ಕೊರೋನಾ ನಾಲ್ಕನೇ ಅಲೆ ಹೆಚ್ಚು ಭಾದಿಸುವುದಿಲ್ಲ. ಜನರು ಅದರ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ ಕೊರೋನಾ ಬರುತ್ತೆ ಹೋಗುತ್ತೆ, ಸಾವು ನೋವು ಸಂಭವಿಸಲ್ಲ. ಅಪಾಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಕೊರೋನಾ ಮೊದಲನೇ ಅಲೆಯಲ್ಲಿ ಹೆಚ್ಚು ಅಪಾಯಕಾರಿ ಇದ್ದಿತ್ತು. ಪ್ರತಿಯೊಬ್ಬರಿಗೂ ಮಾಸ್ಕ್ ಸ್ಯಾನಿಟೈಸರ್ ಬಳಸುವ ಅಗತ್ಯ ಬಂದಿತ್ತು. ಮಾಸ್ಕ್ ಹಾಕದಿದ್ದವರಿಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಎರಡನೇ ಅಲೆ ಮೊದಲ ಹಂತಕ್ಕಿಂತ ಹೆಚ್ಚು ಅಪಾಯವಾಗಿರಲಿಲ್ಲ.
ಕೊರೋನಾ ಮೂರನೇ ಅಲೆಯಲ್ಲಿ ಜನರು ಹೆದರದೆ ಆರಾಮಾಗಿ ಇದ್ದರು. ಆದರೆ ಈಗ ನಾಲ್ಕನೇ ಅಲೆಗೆ ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ.