Ads By Google

ಕನ್ನಡ ಚಿತ್ರರಂಗದ ಇನ್ನೊಬ್ಬ ಖ್ಯಾತ ನಟಿ ಇನ್ನಿಲ್ಲ, ಶೋಕಸಾಗರದಲ್ಲಿ ಚಿತ್ರರಂಗ.

Sarvamangala no more
Ads By Google

ಕೇಳದ ಎರಡು ವರ್ಷಗಳಿಂದ ಕನ್ನಡ ಮತ್ತು ಇತರೆ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಎಂದು ಕಾಣುತ್ತದೆ. ಹೌದು ಒಬ್ಬರಾದ ಮೇಲೆ ಒಬ್ಬರು ಖ್ಯಾತ ನಟಿಯರು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಬಹುದು. ಹೌದು ಕೇಳದ ವರ್ಷ ಅನೇಕ ನಟ ನಟಿಯರು ಇಹಲೋಕವನ್ನ ತ್ಯಜಿಸಿದ್ದು ಇಡೀ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕನ್ನಡದ ಖ್ಯಾತ ನಟ ದ್ರುವ ಸರ್ಜಾ, ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್, ಬಾಲಸುಬ್ರಮಣ್ಯಂ, ಹೀಗೆ ಹಲವು ನಟ ಮತ್ತು ನಟಿಯರು ಅಕಾಲಿಕವಾಗಿ ಇಲಾಹಲೋವನ್ನ ತ್ಯಜಿಸಿದ್ದು ಅವರ ಸಾವಿನ ನೋವನ್ನ ಮರೆಯುವ ಮುನ್ನವೇ ಇನ್ನೊಬ್ಬ ಖ್ಯಾತ ನಟಿ ಈಗ ಇಹಲೋಕವನ್ನ ತ್ಯಜಿಸಿದ್ದು ಇಡೀ ಕನ್ನಡ ಚಿತ್ರರಂಗ ಇವರ ಅಗಲಿಕೆಗೆ ಕಂಬನಿಯನ್ನ ಮಿಡಿದಿದೆ ಹೇಳಬಹುದು.

ಹಾಗಾದರೆ ಈ ನಟಿಯರು ಮತ್ತು ಅವರು ಯಾವ ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹಳ ಒಳ್ಳೆಯ ನಟಿಯಾಗಿ ಮಿಂಚಿದ ನಟಿಯೊಬ್ಬರು ಇಂದು ಇಹಲೋಕವನ್ನ ತ್ಯಜಿಸಿದ್ದಾರೆ ಮತ್ತು ಅವರ ಗಂಡ ಕೂಡ ಒಬ್ಬ ಟಾಪ್ ನಟರಾಗಿದ್ದವರು ಆಗಿದ್ದಾರೆ. ಕನ್ನಡ ಚಿತ್ರರಂಗ ಇಂದು ಬಹಳ ಎತ್ತರದ ಸ್ಥಾನದಲ್ಲಿ ಇದೆ ಅಂದರೆ ಅದಕ್ಕೆ ಹಲವು ನಟ ನಟಿಯರ ಮತ್ತು ಕಲಾವಿದರ ತ್ಯಾಗ ತುಂಬಾ ಇದೆ ಎಂದು ಹೇಳಬಹುದು.

ಹಲವು ಹಿರಿಯ ನಟ ನಟಿಯರು ಮಾಡಿರುವ ಅನೇಕ ಒಳ್ಳೆಯ ಕೆಲಸದ ಮೂಲಕ ಈಗ ಕನ್ನಡ ಚಿತ್ರರಂಗ ಬಹಳ ಎತ್ತರದ ಸ್ಥಾನಕ್ಕೆ ಹೋಗುತ್ತಿದೆ ಎಂದು ಹೇಳಬಹುದು. ಕನ್ನಡ ಚಿತ್ರರಂಗವನ್ನ ಬಹಳ ಎತ್ತರಕ್ಕೆ ಬೆಳೆಸಿದವರಲ್ಲಿ ಕುಣಿಗಲ್ ನಾಗಭೂಷಣ್ ಕೂಡ ಒಬ್ಬರು ಎಂದು ಹೇಳಬಹುದು. ನಟನಾಗಿ ಮತ್ತು ಹಾಸ್ಯ ನಟನಾಗಿ ಮಿಂಚಿದ ಕುಣಿಗಲ್ ನಾಗಭೂಷಣ್ ಅವರು ಖ್ಯಾತ ಸಂಭಾಷಣೆಗಾರ ಕೂಡ ಹೌದು ಮತ್ತು ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಇವರು ಸಂಭಾಷಣೆಯನ್ನ ಬರೆದಿದ್ದರು. ಇನ್ನು ಕುಣಿಗಲ್ ನಾಗಭೂಷಣ್ ಅವರು 2013 ರಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿದರು, ಇನ್ನು 2013 ರಿಂದ ತನ್ನ ಕುಣಿಗಲ್ ನಾಗಭೂಷಣ್ ಅವರ ನೆನಪಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರ ಪತ್ನಿ ಸರ್ವಮಂಗಲಾ ಈಗ ಇಹಲೋಕವನ್ನ ತ್ಯಜಿಸಿದ್ದಾರೆ.

ನಟಿಯಾಗಿದ್ದ ಸರ್ವಮಂಗಲಾ ಅವರು “ಯಾರಿಗೂ ಹೇಳ್ಬೇಡಿ” ಚಿತ್ರದ ಯಾರು ಮರೆಯಲಾಗದಂತಹ ಧ್ವನಿ “ಚನ್ನಾಗ್ ಹೇಳಿದ್ರಿ” ಅನ್ನುವ ಸಂಭಾಷಣೆಯಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. “ಬಂಡ ನನ್ನ ಗಂಡ”, “ಹೆಂಡತಿಯರೇ ಹುಶಾರ್” ಹೀಗೆ ಹಲವು ಚಿತ್ರಗಳಲ್ಲಿ ನಟಿ ಸರ್ವಮಂಗಲಾ ಅವರು ನಟನೆಯನ್ನ ಮಾಡಿದ್ದರು. ಈಗ ಹೃದಯಾಘಾತದಿಂದ ನಟಿ ಸರ್ವಮಂಗಲಾ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಕನ್ನಡ ಚಿತ್ರರಂಗ ಈಗ ಎತ್ತರಕ್ಕೆ ಬೆಳೆಯುತ್ತಿದೆ, ಆದರೆ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣರಾದ ಒಬ್ಬೊಬ್ಬರೇ ನಟ ನಟಿಯರು ಈಗ ಕನ್ನಡ ಚಿತ್ರರಂಗವನ್ನ ಬಿಟ್ಟು ಹೋಗುತ್ತಿರುವುದು ಬಹಳ ಬೇಸರದ ಸಂಗತಿ ಆಗಿದೆ. ನಟಿ ಸರ್ವಮಂಗಲಾ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field