School Facility: ರಾಜ್ಯದ ಎಲ್ಲಾ ಸರ್ಕಾರೀ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ಇನ್ನುಮುಂದೆ ಇವುಗಳು ಉಚಿತವಾಗಿ ಸಿಗಲಿದೆ.
ರಾಜ್ಯದ ಸರ್ಕಾರೀ ಶಲಗಳಿಗೆ ಹೊಸ ಯೋಜನೆಯನ್ನ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಸರ್ಕಾರ.
Water and Electricity Facility In School: ಸದ್ಯ ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಬಹಳ ಅದ್ದೂರಿಯಾಗಿ ನೆರವೇರುತ್ತಿದೆ. ಈ ಕನ್ನಡ ರಾಜ್ಯೋತ್ಸವದ ಶುಭಾ ದಿನದಂದು ಕರ್ನಾಟಕದಲ್ಲಿ ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಅನೇಕ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಅಳವಡಿಸಿದ್ದಾರೆ. ಇದೀಗ ರಾಜ್ಯದ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಅವರು ಕನ್ನಡ ರಾಜ್ಯೋತ್ಸವದಂದು ವಿಶೇಷ ಸೌಲಭ್ಯವನ್ನು ನೀಡುವುದಾಗಿ ಘೋಷಣೆ ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರೀ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್
ಸದ್ಯ ರಾಜ್ಯದಲ್ಲಿ ಈ ಬಾರಿ ಹೊಸ ಶಿಕ್ಷಣ ನೀತಿ ಆರಂಭವಾಗಿದೆ. ವಿದ್ಯಾರ್ಥಿಗಳು ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊರತೆ ಆಗಬಾರದೆಂದು ಸರ್ಕಾರ ಅನೇಕ ಸವಲತ್ತನ್ನು ನೀಡುತ್ತಿದೆ. ಶಾಲಾ ಮಕ್ಕಳಿಗಾಗಿ ಉತ್ತಮ ಆಹಾರವನ್ನು ನೀಡಲು ಸರ್ಕಾರ ಮುಂದಾಗಿದೆ. ಇನ್ನು ಊಟ, ಸಮವಸ್ತ್ರ ನೀಡುತ್ತಿರುವ ಸರ್ಕಾರ ಇದೀಗ ಶಾಲಾ ವಿದ್ಯಾರ್ಥಿಗಳಿಗೆ ಇನ್ನಷ್ಟು ಮೂಲಭೂತ ಸೌಕರ್ಯವನ್ನು ನೀಡಲು ಮುಂದಾಗಿದೆ.
ಇನ್ನುಮುಂದೆ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಉಚಿತವಾಗಿ ಸಿಗಲಿದೆ
ಶಾಳೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುವುದು ಸಹಜ. ಶಾಲೆಗಳಲ್ಲಿ ನೀರಿನ ಸೌಲಭ್ಯ ಮುಖ್ಯವಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸಲು, ಶಾಲಾ ವಠಾರವನ್ನು ಸ್ವಚ್ಛವಾಗಿರಲು ನೀರು ಮುಖ್ಯವಾಗಿರುತ್ತದೆ.
ಇನ್ನು ನೀರಿನ ಸೌಲಭ್ಯ ಯಾವುದೇ ತೊಂದರೆ ಇರದೇ ಬರಲು ಮುಖ್ಯವಾಗಿ ವಿದ್ಯುತ್ ಅವಶ್ಯಕವಾಗಿದೆ. ವಿದ್ಯುತ್ ಇಲ್ಲದೆ ಇದ್ದರೆ ನೀರನ್ನು ಪಡೆಯಲು ಸಾದ್ಯವಾಗುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದ ಸರ್ಕಾರೀ ಶಾಲೆಗಳಲ್ಲಿ ಉಚಿತವಾಗಿ ನೀರು ಹಾಗೂ ವಿದ್ಯುತ್ ಅನ್ನು ನೀಡಲು ಮುಂದಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ನೀರು ಹಾಗೂ ವಿದ್ಯುತ್ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆ ರೂಪಿಸಿದೆ.