ಸದ್ಯ ಇತ್ತೀಚೆಗಷ್ಟೇ ಓಂ ಪ್ರಕಾಶ್ ರಾವ್ ರವರನ್ನು ಖ್ಯಾತ ಪತ್ರಕರ್ತ ಬಿ ಗಣಪತಿ ಯವರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ಮಾಡಿದ್ದು ಓಂ ಪ್ರಕಾಶ್ ರಾವ್ ಸ್ಯಾಂಡಲ್ ವುಡ್ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಓಂ ಪ್ರಕಾಶ್ ರಾವ್ ಅವರು ಭಾರತೀಯ ಚಲನಚಿತ್ರ ನಿರ್ದೇಶಕ ಕೂಡ ಹೌದು.
ಚಿತ್ರಕಥೆಗಾರ ಚಲನಚಿತ್ರ ನಿರ್ಮಾಪಕ ಮತ್ತು ನಟ ಕೂಡ ಆಗಿದ್ದು ಇಲ್ಲಿಯವರೆಗೆ ಅವರು ಕನ್ನಡ ಭಾಷೆಯಲ್ಲಿ ಸುಮಾರು 25 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಟನೆಗೂ ಸೈ ನಿರ್ದೇಶನ ಮಾಡುವುದರಲ್ಲೂ ಕೂಡ ಸೈ ಎನಿಸಿಕೊಂಡಿದ್ದಾರೆ. ಸದ್ಯ ಇದೀಗ ವೈರಲ್ ವಿಚಾರ ಒಂದನ್ನು ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ.
ನಾನು ಹಾಗೂ ದರ್ಶನ್ ದೂರವಾಗಲು ಮುಖ್ಯ ಕಾರಣ ನಿಖಿತಾ ತುಕ್ರಾಲ್ ಎಂದು ಸಂದರ್ಶನ ಒಂದರಲ್ಲಿ ಓಂ ಪ್ರಕಾಶ್ ರಾವ್ ಬಾಯಿ ಬಿಟ್ಟಿದ್ದು ಅವರೇ ಹೇಳಿದ ಹಾಗೆ ಈ ವಿಚಾರವನ್ನು ಇದುವರೆಗೂ ನಾನು ಎಲ್ಲೂ ಹೇಳಿಲ್ಲ ಆ ಟೈಂ ನಲ್ಲಿ ತುಂಬಾ ಮಾಧ್ಯಮದವರು ನನ್ನನ್ನು ಪ್ರಶ್ನೆ ಮಾಡಿದ್ದು ಆದರೆ ನಾನು ಎಲ್ಲೂ ಕೂಡ ಈ ವಿಚಾರ ಬಗ್ಗೆ ಚರ್ಚೆ ಮಾಡಿಲ್ಲ.
ಆದರೆ ಈಗ ಹೇಳ್ತೇನೆ ಕೇಳಿ ನಾನು ಹಾಗೂ ದರ್ಶನ್ ಬೆರೆಯಾಗಲು ಮೇಜರ್ ಕಾರಣ ನಿಖಿತಾ. ಅಂದು ನನ್ನ ಮಿಸ್ಸಸ್ ಹೇಳಿದ್ದರು ನೀನು ಅವಳ ಜೊತೆ ತುಂಬಾ ಮಾತಾಡ್ತಿದ್ಡಿ ಅವಳು ನಿನ್ನನ್ನು ಬಳಸಿಕೊಳ್ತಾ ಇದ್ದಾಳೆ ಅಂತ. ಆದರೆ ನಾನು ಆಗ ನಂಬಿರಲಿಲ್ಲ. ಮತ್ತೆ ಗೊತ್ತಾಯ್ತು ನನಗೆ. ಆದ್ರೆ ಮಾತ್ರ ನಾನು ಮತ್ತು ದರ್ಶನ್ ದೂರ ಆಗಲು ಕಾರಣ ಮಾತ್ರ ಅವಳೇ ನಿಖಿತಾ ಎಂದು ಶಾಕಿಂಗ್ ವಿಚಾರವನ್ನು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಹಾಗಿದ್ದರೆ ನೀವು ಮತ್ತು ದರ್ಶನ್ ಮತ್ತೆ ಒಂದಾಗಲ್ವಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಓಂ ಪ್ರಕಾಶ್ ರಾವ್ ನಾನ್ ಮಾತ್ರ ಅಲ್ಲ ಸರ್ ಈ ವಿಚಾರ ಬಗ್ಗೆ ದರ್ಶನ್ ಕೂಡ ಯೋಚನೆ ಮಾಡ್ಬೇಕು ನಾನು ದರ್ಶನ್ ಅವರನ್ನು ಹೊಗಳಬೇಕು ಅಂತ ಈ ವಿಚಾರ ಮಾತಾಡ್ತಾ ಇಲ್ಲ ನನ್ನ ಮಕ್ಕಳ ಸತ್ಯವಾಗಿಯೂ ಹೇಳುತ್ತಿದ್ದೇನೆ.
ನಾನು ಕೆಲಸ ಮಾಡುತ್ತಿರುವ ಕಲಾ ಸರಸ್ವತಿ ಮೇಲೆ ಆಣೆ ಇಟ್ಟು ಹೇಳುತ್ತಿದ್ದೇನೆ ಶಿವರಾಜ್ ಕುಮಾರ್ ಬಿಟ್ರೆ ನಾನು ತುಂಬಾ ಇಷ್ಟ ಪಟ್ಟ ಸ್ಟಾರ್ ದರ್ಶನ್ ಅವರ ಬಗ್ಗೆ ಎಲ್ಲೂ ಕೂಡ ಒಂದು ತಪ್ಪು ಮಾತಾಡಿದವನಲ್ಲ ನಾನು. ನೀವು ಎಲ್ಲೇ ಇರಿ ಚೆನ್ನಾಗಿರಿ ನಿಮ್ಮ ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ದರ್ಶನ್ ಸ್ನೇಹ ಹಾಗೂ ಒಡನಾಟ ಬಗ್ಗೆ ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ.
ಇನ್ನು ನಟಿ ನಿಖಿತಾ ತುಕ್ರಾಲ್ ರವರ ಈ ಹೆಸರನ್ನು ಸಿನಿಪ್ರಿಯರು ಈಗ ಮರೆತಿರಬಹುದು ಆದರೆ ಅಂದು ಸಖತ್ ಫೇಮಸ್ ನಟಿಯಾಗಿದ್ದು ಬಹುಕಾಲ ಬೇಡಿಕೆಯಲ್ಲಿದ್ದ ಚೆಂದುಳ್ಳಿ ಚೆಲುವೆ ಈಕೆ. ಇನ್ನು ಕಳೆದ ಕೆಲ ವರ್ಷಗಳಿಂದ ಸಿನಿರಂಗದಿಂದ ದೂರವಿರುವ ನಟಿ ಎಲ್ಲಿದ್ದಾರೆ ಹೇಗಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ಅಂದು ಕನ್ನಡದಲ್ಲಿ ಒಂದು ಕಾಲದಲ್ಲಿ ನಿಖಿತಾ ಅವರಿಗೆ ಬಹಳ ಬೇಡಿಕೆ ಇದ್ದು ಪ್ರತಿಯೊಬ್ಬ ನಟರೂ ಇವರೇ ನಾಯಕಿಯಾಗಿ ಬೇಕು ಎಂದು ಕೇಳುತ್ತಿದ್ದ ಸಮಯವಿತ್ತು. ಸ್ಯಾಂಡಲ್ವುಡ್ನಲ್ಲಿ ಪ್ರತಿಯೊಂದು ಸ್ಟಾರ್ ಹೀರೋಗಳ ಜೊತೆ ತೆರೆಹಂಚಿಕೊಳ್ಳುವ ಮೂಲಕ ಟಾಪ್ನಲ್ಲಿದ್ದ ನಟಿ ಎಂದರೆ ಅದು ನಿಖಿತಾ.ಇನ್ನು ಬಿಗ್ ಬಾಸ್ ಕನ್ನಡ ಮೊದಲ ಸೀಸನ್ನಲ್ಲಿ ಕಾಣಿಸಿಕೊಂಡಿದ್ದ ನಿಖಿತಾ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಹೌದು ಅಭಿಮಾನಿಗಳಂತೂ ನಿಖಿತಾ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದು 2017ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ನಿಖಿತಾ ಒಂದು ಮಗುವಿನ ತಾಯಿ ಕೂಡ. ಮದುವೆಯ ಬಳಿಕ ಅವರು ಮುಂಬೈನಲ್ಲೇ ನೆಲೆಸಿರುವ ಅವರು ಸಿನಿಮಾದಿಂದ ದೂರವಿದ್ದು ಆದರೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸದ್ಯ ನಿಖಿತಾ ತುಕ್ರಾಲ್ ಬಗ್ಗೆ ಓಂ ಪ್ರಕಾಶ್ ರಾವ್ ಈ ರೀತಿ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಯಲ್ಲಿದೆ..
Aadhar Download Online Process: ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಬಹಳ ವಿಶೇಷವಾದ ದಾಖಲೆಯಾಗಿದೆ. ನೀವು ಯಾವುದೇ ಸರ್ಕಾರಿ ಸೇವೆಯನ್ನು…
Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…
PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…
Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…
Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…
July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…