Image Credit: Original Source
Pavitra Gowda New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಾಣದಲ್ಲಿ ಎ1 ಆರೋಪಿಯಾಗಿ ಪವಿತ್ರ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲು ಪಾಲಾಗಿರುವ ಪವಿತ್ರ ಗೌಡ ನೋವಿನಲ್ಲಿದ್ದರೆ.
ಸರಿಯಾದ ಊಟ, ನಿದ್ದೆ ಇಲ್ಲದೆ ಪರದಾಡುತ್ತಿದ್ದರಂತೆ. ಇನ್ನು ಜುಲೈ 4 ರವರಿಗೆ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರ ಗೌಡ ಅವರನ್ನು ಆಚೆ ತರಲು ಅವರ ಪರ ವಕೀಲರು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಸದ್ಯ ಮಾಧ್ಯಮದ ಮುಂದೆ ಪವಿತ್ರ ಗೌಡ ಅವರ ಪರ ವಕೀಲರು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಸಂಕಷ್ಟದಲ್ಲಿ ಪವಿತ್ರ ಗೌಡ
ಇದೀಗ ನಟಿ ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಜೈಲಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಪವಿತ್ರಾ ಗೌಡ ಶಾಕ್ ಆಗಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೆ ನಾನು ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದರೆ ಎಂದು ವಕೀಲರು ಹೇಳಿದರು. ನ್ಯಾಯಾಂಗ ಬಂಧನದಲ್ಲಿರುವ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ. ಅವರನ್ನು ಹಿಂಸಿಸಲು ಕರ್ಕೊಂಡ್ ಬಂದಿಲ್ಲ.ಕೇವಲ ಪರಿವರ್ತನೆಗಾಗಿ ಅಥವಾ ವಿಚಾರಣೆ ಮುಗಿಯುವವರೆಗೂ ಜೈಲಿನಲ್ಲಿರಬೇಕಾಗುತ್ತದೆ.
ಅದಲ್ಲದೆ, ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳ ಸೌಲಭ್ಯಗಳಂತೆಯೇ ಅವರಿಗೂ ಇರುತ್ತದೆ. ಅದನ್ನು ಬಿಟ್ಟರೆ ಬೇರೆ ವಿಶೇಷ ಸೌಲಭ್ಯ ಇಲ್ಲ. ಅವರು ಹಾಗೆಯೆ ಇದ್ದರೆ. ಜೈಲು ಊಟ ಸೇರುತ್ತಿಲ್ಲ, ನೆಲದ ಮೇಲೆ ಮಲಗಿರುವುದು ಮಾಧ್ಯಮಗಳ ಸೃಷ್ಟಿ, ಇದರಲ್ಲಿ ವಿಶೇಷವೇನೂ ಇಲ್ಲ, ಕಾನೂನು ಎಲ್ಲರಿಗೂ ಒಂದೇ ಎಂದು ವಕೀಲರು ಹೇಳಿದರು.
ವಕೀಲರಿಂದ ಶಾಕಿಂಗ್ ಹೇಳಿಕೆ
ಬೇಲ್ ಬಗ್ಗೆ ಚರ್ಚಿಸಲು ನಾನು ಪವಿತ್ರಾ ಅವರನ್ನು ಭೇಟಿಯಾದೆ. ಅವರಿಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಘಟನೆಯ ಬಗ್ಗೆ ಏನೂ ತಿಳಿಯದಿದ್ದಾಗ ಇದ್ದಕ್ಕಿದ್ದಂತೆ ಕೇಳಿದಾಗ ಶಾಕ್ ಆಗಿದ್ದ ಅವರು ಈಗ ಅದೇ ಶಾಕ್ ನಲ್ಲಿದ್ದಾರೆ. ಯಾವಾಗ ತಪ್ಪು ಮಾಡಿರಲ್ಲ ಅವಾಗ ಖಂಡಿತವಾಗಿಯೂ ನೋವಾಗುತ್ತದೆ. ಅದನ್ನೇ ಶಾಕ್ ಎನ್ನೋದು, ಅದೇ ಶಾಕ್ ನಲ್ಲಿ ಪವಿತ್ರ ಇದ್ದಾರೆ.
ತಪ್ಪು ಮಾಡಿರುವವರಿಗಾದ್ರೆ ತಪ್ಪು ಮಾಡಿದ್ದೇನೆ ಅನ್ನೋ ಮನೋಭಾವಇರುತ್ತದೆ. ಆದರೆ ಯಾವುದೇ ತಪ್ಪು ಮಾಡಿಲ್ಲ ಅಂದಾಗ ಖಂಡಿತವಾಗಿಯೂ ಅವರಲ್ಲಿ ನೋವಿರುತ್ತೆ. ಶಾಕ್ ಆಗುತ್ತೆ. ಅದೇ ರೀತಿ, ನಾನೇನು ಮಾಡಿಲ್ಲ ನಂಗ್ಯಾಕೆ ಈ ತರಾ ಪರಿಸ್ಥಿತಿ ಬಂದು ಅನ್ನೋ ಭಾವನೆ ಅವರಲ್ಲಿದೆ. ಸ್ವಲ್ಪ ದಿನದ ನಂತರ ಅಂದರೆ ಜುಲೈ 4 ರ ನಂತ್ರ ಬೇಲ್ ಬಗ್ಗೆ ಇನ್ನಷ್ಟು ಪ್ಲಾನ್ ಮಾಡ್ತೀವಿ ಎಂದು ಪವಿತ್ರ ಪರ ವಕೀಲರು ಹೇಳಿದ್ದಾರೆ.
Board Exam Cancelled For 5, 8, And 9th Students: 2024 -25 ಶೈಕ್ಷಣಿಕ ವರ್ಷದಲ್ಲಿ SSLC ಮತ್ತು…
Prohibition Of Mobile Use In School And College: ಸದ್ಯ ಎಲ್ಲ ವಯೋಮಾನದವರು ಕೂಡ ಮೊಬೈಲ್ ಅನ್ನು ಬಳಸುತ್ತಾರೆ.…
Vijayalakshmi Clarification About Darshan And Pavitra Gowda Relationship: ರೇಣುಕಾಸ್ವಾಮಿ ಕೊಲೆ ವಿಚಾರವಾಗಿ ದರ್ಶನ್ ಜಾಳು ಸೇರುತ್ತಿದ್ದಂತೆ ದರ್ಶನ್…
Team India Dance Video Viral: ಜೂನ್ 29 ಶನಿವಾರ ನಡೆದ India ಮತ್ತು South Africa ಪಂದ್ಯದಲ್ಲಿ ಟೀಮ್…
Gold Rate Hike Today: ದೇಶದಾದ್ಯಂತ ಚಿನ್ನದ ಬೆಲೆಯಲ್ಲಿ (Gold Rate) ಐತಿಹಾಸಿಕ ಏರಿಕೆ ಕಂಡು ಬರುತ್ತಿದೆ. ಚಿನ್ನದ ಬೇಡಿಕೆ…
Darshan And Pavithra Gowda Meet: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ತಮ್ಮ ಗೆಳತಿಗೆ…