Pavitra Gowda Investigation: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಜೈಲು ಪಾಲಾಗಿರುವ ಬಗ್ಗೆ ಎಲ್ಲರಿಗು ತಿಳಿದೇ. ದರ್ಶನ್ ಗೆಳತಿಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಲಾಗಿತ್ತು.
ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾಲು ಸಾಕಷ್ಟಿದೆ ಎಂದು ಆರೋಪ ದಾಖಲಾಗಿದ್ದು, ಸದ್ಯ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಮಂದಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಗೆಳತಿ ಪವಿತ್ರ ಗೌಡ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ವಿಚಾರಣೆಯ ವೇಳೆ ಪವಿತ್ರ ಗೌಡ ರೇಣುಕಾ ಸ್ವಾಮಿ ಕೊಲೆ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ದರ್ಶನ್ ಕೇಸ್ ನಲ್ಲಿ ಬಿಗ್ ಟ್ವಿಸ್ಟ್, ಬೆಚ್ಚಿ ಬೀಳಿಸುವ ಸಂಗತಿ ಬಿಚ್ಚಿಟ್ಟ ಪವಿತ್ರ ಗೌಡ
ಪೊಲೀಸ್ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಹತ್ಯೆ ಪ್ರಕರಣಕ್ಕೂ ಮುನ್ನ ನಡೆದ ಘಟನೆಯ ಬಗ್ಗೆ ಆಘಾತಕಾರಿ ಮಾಹಿತಿ ಹಂಚಿಕೊಂಡರು. ರೇಣುಕಾಸ್ವಾಮಿ ನನಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದನ್ನು ಕಂಡು ನಾನು ಪವನ್ ಗೆ (ಪವಿತ್ರಾ ಅವರ ಮನೆಗೆಲಸಗಾರ) ತೋರಿಸಿದೆ.
ಅವನು ಯಾರು ಅವನ ಮೂಲ ಏನೆಂದು ಕಂಡುಹಿಡಿಯಿರಿ. ಆದರೆ, ಈ ವಿಷಯ ಯಾವುದೇ ಕಾರಣಕ್ಕೂ ದರ್ಶನ್ ಅವರ ಕಿವಿಗೆ ಬೀಳಬಾರದು. ಬಿದ್ದರೆ ಅನಾಹುತ ಆಗಬಹುದು ಎಂದು ಹೇಳಿದ್ದೆ’ ಎಂದರು.ಈ ವಿಷಯ ದರ್ಶನ್ ಗೆ ಗೊತ್ತಾಗಬಾರದು ಅಂತ ಬಯಸಿದ್ದೆ. ಆದರೆ ಅವರು ಕೊಲೆ ಮಾಡುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಒಂದು ವೇಳೆ ನನ್ನನ್ನು ಸಾಯಿಸಿದ್ದರೆ ದೂರು ನೀಡಿ ಸರಿಪಡಿಸುತ್ತಿದ್ದೆ ಎಂದು ಆರೋಪಿ ಪವಿತ್ರಾ ಪೊಲೀಸರಿಗೆ ಹೇಳಿರುವುದಾಗಿ ವರದಿಯಾಗಿದೆ.
ಅಪರಾಧ ಸಾಭೀತಾದರೆ ದರ್ಶನ್ ಗೆ ಇಷ್ಟು ವರ್ಷ ಜೈಲು ಖಚಿತ
IPC ಸೆಕ್ಷನ್ 304 ರ ಅಡಿಯಲ್ಲಿ ತಪ್ಪಿತಸ್ಥ ನರಹತ್ಯೆಗೆ ಶಿಕ್ಷೆಯು ಕೊಲೆಗೆ ಸಮನವಲ್ಲದ ಶಿಕ್ಷೆಯು ಇದು ಜೀವಾವಧಿಯ ಜೈಲುವಾಸದಿಂದ ನಿಗದಿತ ಅವಧಿಗೆ ಜೈಲು ಶಿಕ್ಷೆಯವರೆಗೆ ಇರುತ್ತದೆ. ಪ್ರಕರಣದ ಸಂದರ್ಭಗಳನ್ನು ಅವಲಂಬಿಸಿ ಇದು ಬದಲಾಗಬಹುದು. ಅಂತಹ ಪ್ರಕರಣಗಳಲ್ಲಿ ನಿಖರವಾದ ಶಿಕ್ಷೆಯನ್ನು ನಿರ್ಧರಿಸುವಾಗ ಕೃತ್ಯದ ಸ್ವರೂಪ, ಆರೋಪಿಯ ಉದ್ದೇಶ ಮತ್ತು ಯಾವುದೇ ದೋಷಪೂರಿತ ಸಂದರ್ಭಗಳಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ. ಯಾವುದೇ ಉದ್ದೇಶವಿಲ್ಲದೇ ಇದ್ದಲ್ಲಿ, ಆದರೆ ಯಾವುದೋ ಕೃತ್ಯದಿಂದ ಸಾವು ಸಂಭವಿಸಿರಬಹುದು ಎಂದು ತಿಳಿದಿದ್ದರೆ, ಆರೋಪಿಗಳ ವಿರುದ್ಧ u/s 304 IPC ರೀತ್ಯಾ ಕಾನೂನು ಕ್ರಮ ಜರುಗಿಸಬಹುದಾಗಿದೆ.
Rohith Sharma Ate Soil From Pitch: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ…
BSNL Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ…
KSRTC Bus Driver Job Recruitment: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿಯೇ ಇದೆ. ಸಾಕಷ್ಟು ವಿದ್ಯಾವಂತರು ಇನ್ನು ಕೂಡ ಉದ್ಯೋಗವನ್ನು…
Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ…
New Ration Card Application: ಸದ್ಯ ರಾಜ್ಯದ ಜನತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದಾರೆ. ಇದೀಗ ರಾಜ್ಯ…
Details About World Cup Trophy: ಸ್ಪೋಟ್ಸ್ ವಿಭಾಗದಲ್ಲಿ ಕ್ರಿಕೆಟ್ ಗೆ ಹೆಚ್ಚಿನ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ…