Image Source: Kannada News Today
Indian Post Office New Scheme Benefits: ಇತ್ತೀಚಿನ ದಿನಗಳಲ್ಲಿ ಜನರು ಹಣವನ್ನ ಹೂಡಿಕೆ ಮಾಡಲು ಬಹಳ ಇಷ್ಟಪಡುತ್ತಾರೆ. ತಮ್ಮ ಭವಿಷ್ಯದ ಉದ್ದೇಶದಿಂದ ಜನರು ಹಣವನ್ನ ಹೂಡಿಕೆ ಮಾಡಲು ಬಯಸುತ್ತಾರೆ. ಹಣವನ್ನ ಹೂಡಿಕೆ ಮಾಡಲು ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಬಹಳ ಯೋಜನೆಗಳು ಜಾರಿಯಲ್ಲಿದೆ.
Post Office ನಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿ ಇದ್ದು ಜನರು ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಅಂಚೆ ಕಚೇರಿ ಜನರು ಹೂಡಿಕೆ ಮಾಡಿದ ಹಣಕ್ಕೆ ಬಹಳ ಒಳ್ಳೆಯ ಲಾಭವನ್ನ ನೀಡುತ್ತದೆ. ಸದ್ಯ ಅಂಚೆ ಕಚೇರಿಯಲ್ಲಿ ಒಂದು ಉತ್ತಮವಾದ ಯೋಜನೆ ಇದ್ದು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಬಹಳ ಒಳ್ಳೆಯ ಲಾಭ ಪಡೆದುಕೊಳ್ಳಬಹುದು.
Post Office New Scheme
Indian Post Office ಜನಸಾಮಾನ್ಯರಿಗೆ ಹಲವಾರು ಸುರಕ್ಷಿತ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ಇದೀಗ ಪೋಸ್ಟ್ ಆಫೀಸ್ Grama Suraksha Yojana ಉತ್ತಮವಾಗಿದೆ. ಇದನ್ನು ದೇಶದ ಗ್ರಾಮೀಣ ಪ್ರದೇಶದ ಜನರಿಗಾಗಿ 1995 ರಲ್ಲಿ ಅಂಚೆ ಇಲಾಖೆ ಪ್ರಾರಂಭಿಸಿತು.
ಈ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಉತ್ತಮ ಆಯ್ಕೆಯಾಗಿದೆ. ಮಧ್ಯಮ ವರ್ಗದವರಿಗೆ ಇದೊಂದು ಬೆಸ್ಟ್ ಹೂಡಿಕೆಯ ವಿಧಾನ ಎನ್ನಬಹುದು. ಇದೀಗ ನಾವು ಈ ಯೋಜನೆಗೆ ಸೇರುವುದು ಹೇಗೆ…? ಅದಕ್ಕೆ ಯಾರು ಅರ್ಹರು…? ಎಷ್ಟು ಹೂಡಿಕೆ ಮಾಡಬೇಕು…? ಎನ್ನುವ ಬಗ್ಗೆ ತಿಳಿದುಕೊಳ್ಳೋಣ.
ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಲು ಇರಬೇಕಾದ ಅರ್ಹತೆ
Post Office Grama Suraksha ಯೋಜನೆಗೆ ಸೇರಲು ಪಾಲಿಸಿದಾರನ ವಯಸ್ಸು 19 ವರ್ಷವಾಗಿರಬೇಕು. ಗರಿಷ್ಠ ಪ್ರವೇಶ ವಯಸ್ಸು 55 ವರ್ಷಗಳನ್ನು ಮೀರಬಾರದು. ಕನಿಷ್ಠ ವಿಮಾ ಮೊತ್ತ ರೂ. 10,000 ಮತ್ತು ಗರಿಷ್ಟ ವಿಮ ಮೊತ್ತ ರೂ. 10 ಲಕ್ಷ. ಪಾಲಿಸಿದಾರರು ನಾಲ್ಕು ವರ್ಷಗಳ ಕವರೇಜ್ ನಂತರ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು.
ಪೋಸ್ಟ್ ಆಫೀಸ್ ನಲ್ಲಿ ಕೇವಲ 50 ರೂ ಹೂಡಿಕೆ ಮಾಡಿದರೆ ಸಿಗಲಿದೆ 35 ಲಕ್ಷ
ಗ್ರಾಮ ಸುರಕ್ಷಾ ಯೋಜನೆಯಡಿ ಪಾಲಿಸಿದಾರರಿಗೆ ಕೇವಲ 50 ರೂಪಾಯಿ ಪಾವತಿ ಮಾಡುವುದರಿಂದ ನೀವು 35 ಲಕ್ಷ ಹಣ ಗಳಿಸಬಹುದು. ನೀವು 19 ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿಗಳ ಗ್ರಾಮ ಸುರಕ್ಷಾ ಯೋಜನೆ ಖರೀದಿಸಿದರೆ, ದಿನಕ್ಕೆ 50 ರೂ. ಅಂದರೆ ಪ್ರತಿ ತಿಂಗಳಿಗೆ 1,515 ರೂ. ಪಾವತಿಸಿದರೆ ಪಾಲಿಸಿ ಮೆಚ್ಯುರಿಟಿ ನಂತರ ರೂ. 34.60 ಲಕ್ಷ ಲಾಭ ಪಡೆಯಬಹುದು. ನೀವು ಈ ಯೋಜನೆಗೆ ಸೇರ್ಪಡೆಗೊಂಡರೆ ಮತ್ತು ಐದು ವರ್ಷಗಳಲ್ಲಿ ಅದನ್ನು ತೊರೆದರೆ ನೀವು ಬೋನಸ್ ಗೆ ಅರ್ಹರಾಗಿರುವುದಿಲ್ಲ. ಪ್ರತಿ ಸಾವಿರ ರೂಪಾಯಿಗೆ ರೂ. 60 ವರೆಗೆ ಬೋನಸ್ ನೀಡಲಾಗುತ್ತದೆ.
Maruti Suzuki Alto Features: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ವಿವಿಧ…
PM Kisan Amount Hike Latest Update: ಸದ್ಯ ದೇಶದಲ್ಲಿ ಫೆಬ್ರವರಿ 24, 2019 ರಂದು, ಭೂಮಿ ಹೊಂದಿರುವ ರೈತರಿಗೆ…
Lalu Prasad Yadav About Modi: ಸದ್ಯ ರಾಜ್ಯದಲ್ಲಿ ರಾಜಕೀಯದ ವಿಚಾರಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಸತತ ಮೂರನೇ…
Samantha And Naga Chaitanya Divorce Reason: ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ…
July 6th Gold Rate: ದೇಶದಲ್ಲಿ ಮತ್ತೆ ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಜನಸಾಮಾನ್ಯರಿಗೆ…
7th Pay Latest Update: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ…