Free Ration: ಈ ಯೋಜನೆಯಡಿ ಕೇಂದ್ರದಿಂದ 5 Kg ಅಕ್ಕಿ ಉಚಿತ, ಕೇಂದ್ರದ ನಿಯಮಕ್ಕೆ ದೇಶದೆಲ್ಲಡೆ ಬಾರಿ ಮೆಚ್ಚುಗೆ.
ಈ ಯೋಜನೆಯಡಿ ದೇಶದ ಸಾಕಷ್ಟು ಬಡ ಕುಟುಂಬಳಿಗೆ ಉಚಿತ ಅಕ್ಕಿ ನೀಡಲಾಗಿತ್ತಿದೆ.
Pradhan Mantri Garib Kalyan Yojana: ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರ ಉಚಿತ ಪಡಿತರನ್ನು ನೀಡುತ್ತದೆ. ದೇಶದ ಬಡ ಜನರು ಉಚಿತ ಪಡಿತರ ಲಾಭವನ್ನು ಪಡೆಯುತ್ತಾರೆ. ಇತ್ತೀಚೆಗಂತೂ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆಯ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಬದಲಾಗಿ ಫಲಾನುಭವಿಗಳಿಗೆ ಹಣವನ್ನು ನೀಡಲಾಗುತ್ತದೆ. ರಾಜ್ಯದ ಸರ್ಕಾರ ನೀಡುವ ಉಚಿತ ಅಕ್ಕಿಯ ಬಗ್ಗೆ ಎಲ್ಲರಿಗು ತಿಳಿದೇ ಆದರೆ. ಆದರೆ ಕೇಂದ್ರ ಸರ್ಕಾರ ಕೂಡ ದೇಶದ ಬಡ ಜನರಿಗೆ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದೆ. ಈ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (Pradhan Mantri Garib Kalyan Yojana)
ಇನ್ನು 2021 ರಲ್ಲಿ ದೇಶದಲ್ಲಿ ಕರೋನ ಅಪ್ಪಳಿಸಿತ್ತು. ಇಡೀ ದೇಶದಾದ್ಯಂತ ಜನರು ಕರೋನದಿಂದಾಗಿ ಬೆಚ್ಚಿ ಬಿದ್ದಿದ್ದರು. ಈ ವೇಳೆ ದೇಶದಲ್ಲೆಡೆ ಲಾಕ್ ಡೌನ್ ಮಾಡಲಾಗಿತ್ತು. ಮನೆ ಬಿಟ್ಟು ಹೊರ ಬರದಂತೆ ಜನರನ್ನು ಲಾಕ್ ಮಾಡಲಾಗಿತ್ತು. ಮೋದಿ ಸರ್ಕಾರ ತಿಂಗಳ ಗೃಹವಾಸಕ್ಕೆ ಸಿದ್ಧತೆ ನಡೆಸಿತ್ತು. ಲಾಕ್ ಡೌನ್ ಸಮಯದಲ್ಲಿ ಬೇಕುವ ಆಹಾರ ಪದಾರ್ಥವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಈ ವೇಳೆ ಬಡವರಿಗೆ ಉಚಿತ ಅಕ್ಕಿಯನ್ನು ಘೋಷಿಸಿದ್ದರು.
5 ಕೆಜಿ ಉಚಿತ ಅಕ್ಕಿ ನೀಡುತ್ತಿರುವ ಮೋದಿ ಸರ್ಕಾರ
ಲಾಕ್ ಡೌನ್ ಸಮಯದಲ್ಲಿ ಮೋದಿ ಸರ್ಕಾರ ಬಡವರಿಗಾಗಿ ಐದು ಕೆಜಿ ಉಚಿತ ಅಕ್ಕಿಯನ್ನು ವಿತರಿಸಿತ್ತು. ದೇಶದ 80 ಕೋಟಿ ಜನರು ಈ ಉಚಿತ ಅಕ್ಕಿಯ ಪ್ರಯೋಜವನ್ನು ಪಡೆದಿದ್ದರು. ಲಾಕ್ ಡೌನ್ ಸಮಯದಲ್ಲಿ ಈ ಉಚಿತ ಅಕ್ಕಿ ಸಾಕಷ್ಟು ಜನರ ಪ್ರಾಣವನ್ನು ಉಳಿಸಿತ್ತು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದಲೂ ದೇಶದ ಬಡ ಜನರಿಗೆ ಉಚಿತ ಅಕ್ಕಿಯನ್ನು ನೀಡುತ್ತಾ ಬರುತ್ತಿದೆ. ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಯನ್ನು ಜಾರಿ ತಂದು ದೇಶದ ಯಾವೊಬ್ಬ ಬಡವರು ಕೂಡ ಯೋಜನೆಯಿಂದ ವಂಚಿತರಾಗಬಾರದೆಂದು ಮೋದಿ ಸರ್ಕಾರ ನಿರ್ಧರಿಸಿತ್ತು. ಈಗಲೂ ಕೊಡ ಈ ಯೋಜನೆಯಡಿ ದೇಶದ ಸಾಕಷ್ಟು ಬಡ ಕುಟುಂಬಳಿಗೆ ಉಚಿತ ಅಕ್ಕಿ ನೀಡಲಾಗಿತ್ತಿದೆ.