Image Credit: Original Source
Prohibition Of Mobile Use In School And College: ಸದ್ಯ ಎಲ್ಲ ವಯೋಮಾನದವರು ಕೂಡ ಮೊಬೈಲ್ ಅನ್ನು ಬಳಸುತ್ತಾರೆ. ಇತ್ತೀಚೆಗಂತೂ ಮೊಬೈಲ್ ಬಳಕೆ ಹೆಚ್ಚಾಗಿದೆ ಎನ್ನಬಹುದು. ಮನೆಯಲ್ಲಿರುವ ಇರುವ ಪ್ರತಿಯೊಬ್ಬ ಸದಸ್ಯರ ಬಳಿ ಕೂಡ ಒಂದೊಂದು ಮೊಬೈಲ್ ಫೋನ್ ಇದ್ದೆ ಇರುತ್ತದೆ.
ಇನ್ನು ದೇಶದಲ್ಲಿ ಕರೋನ ಅಪ್ಪಳಿಸಿದ ಸಮಯದಿಂದ ಆನ್ಲೈನ್ ಕ್ಲಾಸ್ ಗಳು ಬಂದಿದ್ದವು. ಈ ಹಿನ್ನಲ್ಲೆ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಉನ್ನತ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಯ ಬಳಿ ಕೂಡ ಮೊಬೈಲ್ ಬಂದವು. ಸದ್ಯ ರಾಜ್ಯ ಸರ್ಕಾರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೊಸ ನಿಯಮ ರೂಪಿಸಿದೆ.
ರಾಜ್ಯ ಸರ್ಕಾರದ ಹೊಸ ನಿಯಮ
ಇನ್ನು ಆನ್ಲೈನ್ ಕ್ಲಾಸ್ ಅಷ್ಟೊಂದು ನಡೆತಯುತ್ತಿಲ್ಲ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುತ್ತಿದ್ದಾರೆ. ಹೀಗಿದ್ದರೂ ಕೂಡ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ಹೆಚ್ಚುತ್ತಿದೆ. ಸದ್ಯ ಇದನ್ನು ಗಮನಿಸಿದ ರಾಜ್ಯ ಸರ್ಕಾರ ಮೊಬೈಲ್ ಬಳಕೆದಾರರಿಗೆ ಮಹತ್ವದ ನಿಯಮವನ್ನು ಜಾರಿಗೊಳಿಸಿದೆ. ಈ ಹೊಸ ನಿಯಮದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
ಇನ್ನುಮುಂದೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಸುವಂತಿಲ್ಲ
ಕಲಿಕೆಯ ಸಮಯವನ್ನು ಮೊಬೈಲ್ ಸಂವಹನದಲ್ಲಿ ಕಳೆಯಲಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳು ತರಗತಿಯಲ್ಲಿ ಸಂಗೀತ ಕೇಳಲು, ಆಟವಾಡಲು ಮತ್ತು ಎಸ್ಎಂಎಸ್ ಕಳುಹಿಸಲು ಮೊಬೈಲ್ ಫೋನ್ ಬಳಸುವುದರಿಂದ ತರಗತಿಯಲ್ಲಿ ಅಹಿತಕರ ವಾತಾವರಣ ನಿರ್ಮಾಣಗೊಂಡು ತೊಂದರೆಯಾಗುತ್ತದೆ. ಇದರೊಂದಿಗೆ ಹಲವು ಪಾಲಕರು ಕೂಡ ಹಲವು ಪ್ರಕರಣಗಳಲ್ಲಿ ಕಳವಳ ವ್ಯಕ್ತಪಡಿಸಿರುವುದರಿಂದ ಮಕ್ಕಳ ಕಲಿಕಾ ಸಮಯವನ್ನು ಕಾಪಾಡುವ ಕ್ರಮವಾಗಿ ಮೊಬೈಲ್ ಬಳಕೆ ನಿಷೇಧಿಸಬೇಕು ಎಂಬ ಸಾಮಾನ್ಯ ಅಭಿಪ್ರಾಯ ಶಿಕ್ಷಣ ಇಲಾಖೆಯದ್ದಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಲಾ-ಕಾಲೇಜುಗಳ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ, ಇದು 1 ರಿಂದ 12 ನೇ ತರಗತಿ ವರೆಗಿನ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಇದರೊಂದಿಗೆ ಶಿಕ್ಷಕರು , ಶಾಲಾ ಮತ್ತು ಕಾಲೇಜುಗಳ ಉಪನ್ಯಾಸಕರು ಮತ್ತು ಯಾವುದೇ ಸಿಬ್ಬಂದಿ ಶಾಲಾ ಅವಧಿಯಲ್ಲಿ ಶಾಲಾ ಮತ್ತು ಕಾಲೇಜು ಆವರಣದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಸಹ ನಿಷೇಧಿಸಲಾಗಿದೆ. ನಿಯಮವನ್ನು ಮೀರಿ ಮೊಬೈಲ್ ಬಳಕೆ ಆಗಿದ್ದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.
Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…