Rashmika Mandanna Kirik: ಕನ್ನಡ ಚಿತ್ರರಂಗದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕಿರಿಕ್ ಪಾರ್ಟಿ (Kirik Party) ಚಿತ್ರ ತಂಡಕ್ಕೆ ಅವಮಾನ ಆಗುವ ರಿತಿಯಲ್ಲಿ ಮಾತನಾಡಿದ್ದರು.
ತಾವು ಮಾಡಿದ ಮೊದಲ ಸಿನಿಮಾದ ಹೆಸರನ್ನು ಹೆಳದೆ ಕೈ ಸನ್ನೆಯ ಮೂಲಕ ತೋರಿಸಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು. ಹೀಗಿರುವಾಗ ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಂದರ್ಶನ ಒಂದರಲ್ಲಿ ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ರಶ್ಮಿಕಾ ಮಂದಣ್ಣ ಬಗ್ಗೆ ಹೇಳಿದ ಮಾತು
ತೆಲುಗಿನ ಯೂಟ್ಯೂಬ್ ಚಾನೆಲ್ (Youtube Chanel) ನ ಸಂದರ್ಶನ ಒಂದರಲ್ಲಿ ತೆಲುಗಿನ ಖ್ಯಾತ ಚಲನಚಿತ್ರ ಬರಹಗಾರ ತೋಟಾ ಪ್ರಸಾದ (Thota Prasad) ರಶ್ಮಿಕಾ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ರಶ್ಮಿಕಾ ಇತ್ತೀಚಿನ ಸಂದರ್ಶನ ಒಂದರಲ್ಲಿ ಕಿರಿಕ್ ಪಾರ್ಟಿ ಚಿತ್ರದ ಬಗ್ಗೆ ಹೇಳದೆ ಟ್ರೋಲ್ (Troll) ಗೆ ಗುರಿಯಾಗಿದ್ದರು.
ರಕ್ಷಿತ್ ಶೆಟ್ಟಿ (Rakshith Shetty) ಅವರ ಜೊತೆ ಬ್ರೇಕ್ ಅಪ್ (Break Up) ಆದ ಕಾರಣ ಅವರ ಹೆಸರನ್ನು ಹೇಳದೆ ಇರಬಹುದು , ಆದರೆ ನಿರ್ದೇಶಕರ ಹೆಸರನ್ನಾದರೂ ಹೇಳಬಹುದಿತ್ತು. ರಶ್ಮಿಕಾ ಅವರು ಕನ್ನಡ ಚಿತ್ರ ರಂಗದಲ್ಲಿ ಬ್ಯಾನ್ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಎಂದು ಹೇಳಿದ್ದರು.
ಇನ್ನು ಅವರು ತೆಲಗು ಚಿತ್ರ ರಂಗವನ್ನು ಪ್ರವೇಶಿಸಿ “ಚಲೋ” (Chalo) ಚಿತ್ರದಲ್ಲಿ ನಟಿಸಿದ ನಾಗಶೌರ್ಯ (Naga shaurya) ಅವರ ಬಗ್ಗೆ ಕೂಡ ಎಲ್ಲೂ ಹೇಳಿಲ್ಲ,
ರಶ್ಮಿಕಾ ಮಂದಣ್ಣ ಟ್ವೀಟ್
ಇನ್ನು ಚಲೋ ಚಿತ್ರದ ವಾರ್ಷಿಕೋತ್ಸವದ ಕುರಿತು ರಶ್ಮಿಕಾ ಟ್ವೀಟ್ (Tweet) ಮಾಡಿಕೊಂಡಿದ್ದರು. ಅದರಲ್ಲಿ ನಿರ್ದೇಶಕರ ಹೆಸರನ್ನು ಮಾತ್ರ ಮೆಂಷನ್ (Mention) ಮಾಡಲಾಗಿತ್ತು, ಚಿತ್ರದ ನಾಯಕ ನಾಗಶೌರ್ಯ ಬಗ್ಗೆ ಏನನ್ನು ಬರೆದಿಲ್ಲ. ಇದರಲ್ಲೇ ಗೊತ್ತಾಗುತ್ತದೆ. ಎಷ್ಟೇ ಆದರೂ ಮೊದಲು ತುತ್ತು ಇಟ್ಟವರನ್ನು ಮರೆಯಬಾರದು, ಕೃತಜ್ಞತೆ ಇರಬೇಕು ಎಂದು ಬೇಸರ ಹೊರಹಾಕಿದ್ದರು.
ಹಾಗೆ ಮಾತನ್ನು ಮುಂದುವರೆಸಿದ ತೋಟಾ ಪ್ರಸಾದ್ ಅವರು, ಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಅವರನ್ನು ಬ್ಯಾನ್ (Rashmika Mandanna Ban) ಮಾಡಲಾಗುತ್ತದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಯಾವುದೇ ಚಿತ್ರ ರಂಗಕ್ಕೂ ಯಾವುದೇ ನಟ ನಟಿಯ ಮೇಲೂ ನಿಷೇದ ಹೇರಲು ಆಗುದಿಲ್ಲ. ಅದರಲ್ಲೂ ಯಶಸ್ಸಿನ ಹಾದಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡುವುದು ಅಸಾಧ್ಯ ಎಂದು ಎಂದಿದ್ದಾರೆ.