Ads By Google

ಪುಟ್ಬಾಲ್ ಆಡುತ್ತಿರುವ ರಾಯನ್ ಸರ್ಜಾ, ವೈರಲ್ ಆಗುತ್ತಿದೆ ವಿಡಿಯೋ

rayan sarja playing
Ads By Google

ಕನ್ನಡ ಚಿತ್ರರಂಗದ ಸೆಲೆಬ್ರೇಟಿ ಕಿಡ್ ಆಗಿ ಮೇಘನಾ ರಾಜ್ ಹಾಗೂ ಚಿರು ಸರ್ಜಾ ರವರ ಪುತ್ರರಾಗಿರುವ ರಾಯನ್ ರಾಜ್ ಸರ್ಜಾ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಹೌದು ಅದಕ್ಕಾಗಿಯೇ ಜೂನಿಯರ್ ಚಿರು ಸರ್ಜಾ ರವರ ಫೋಟೋವನ್ನು ಮತ್ತು ವೀಡಿಯೊಗಳನ್ನು ಆಗಾಗ ಅವರ ತಾಯಿ ಮೇಘನಾರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾರೆ.

ಇನ್ನೂ ಕೆಲವು ತಿಂಗಳ ಹಿಂದಷ್ಟೇ ಜೂನಿಯರ್ ಚಿರು ಸರ್ಜಾ ರವರಿಗೆ ಮೇಘನಾರಾಜ್ ರವರು ಮೊದಲ ವರ್ಷದ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿದ್ದರು. ಈ ಸಂದರ್ಭದಲ್ಲಿ ತೆಗೆದಂತಹ ಫೋಟೋ ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.

ಇನ್ನು ಜೂನಿಯರ್ ಚಿರು ಸರ್ಜಾ ತಮ್ಮ ತುಂಟಾಟಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಮೇಘನಾ ರಾಜ್ ರವರು ಕೂಡ ಈಗ ಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದ್ದಾರೆ. ಇತ್ತೀಚಿಗಷ್ಟೇ ಮೇಘನಾ ರಾಜ್ ರವರ ಸಹೋದರನಾಗಿರುವ ತೇಜ್ ರವರು ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ತನ್ನ ಮಾವ ತೇಜ್ ಜೊತೆಗೆ ಜೂನಿಯರ್ ಚಿರು ಸರ್ಜಾ ಆಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಷ್ಟವಾಯಿತು ತನ್ನ ಅಜ್ಜಿ ಪ್ರಮೀಳಾ ಇದರ ಜೊತೆಗೆ ಹಬ್ಬದ ಸಂದರ್ಭದಲ್ಲಿ ಸಂತೋಷದ ಸಮಯಗಳನ್ನು ಕಳೆದಿರುವ ಫೋಟೋಗಳು ಕೂಡ ವೈರಲ್ ಆಗಿದೆ. ನೀವು ಕೂಡ ಈ ವೈರಲ್ ಆಗಿರುವ ವಿಡಿಯೋವನ್ನು ಈ ಕೆಳಗಡೆ ನೋಡಬಬಹುದು ಹಾಗೂ ಇದೇ ರೀತಿ ನೂರುಕಾಲ ಜೂನಿಯರ್ ಚಿರುಸರ್ಜಾ ನಗುಮುಖದಲ್ಲಿ ಬಾಳಲಿ ಎಂಬುದಾಗಿ ಹಾರೈಸಿ.

ಇನ್ನು ಮೇಘನಾ ರಾಜ್ ಅವರ ಸಹೋದರ ಅದಾಗಲೇ ಸ್ಯಾಂಡಲ್ವುಡ್ ಗೆ ಭರ್ಜರಿಯಾಗಿ ರೀವೈಂಡ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದು ಅದಾಗಲೇ ಮತ್ತೊಂದು ಸಿನಿಮಾ ರಾಮಾಚಾರಿ 2.0 ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿರುವ ನಟರಾಗಿದ್ದಾತೆ. ಇನ್ನು ಇವರಿಗೆ ಚಿತ್ರರಂಗ ಹೊಸದೇನಲ್ಲ ಅದಾಗಲೇ ಬಾಲನಟನಾಗಿ ಶಂಕರ್ ನಾಗ್ ಹಾಗೂ ಡಾ.ರಾಜ್ ಕುಮಾರ್ ಅವರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿರುವ ಇವರು ನಂತರದಲ್ಲಿ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು ವಿಜ್ಞಾನಿಯಾದರು.

ಆದರೆ ಚಿಕ್ಕ ವಯಸ್ಸಿನಿಂದ ಕಲೆಯ ಮೇಲೆ ಆಸಕ್ತಿ ಹಾಗೂ ಗೌರವವಿದ್ದ ಕಾರಣ ಮತ್ತೆ ಚಿತ್ರರಂಗಕ್ಕೆ ಬರಲು ಸಕಲ ತಯಾರಿ‌ ನಡೆಸಿ ಪಕ್ವವಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ್ದಾರೆ. ರೀವೈಂಡ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ದೇಶನದ ಹೊಣೆಯೂ ಇವರದ್ದೇ. ಬಹುಮುಖ ಪ್ರತಿಭೆ ಯಾಗಿರುವ ತೇಜ್ ಈಗಾಗಲೇ ತಮಿಳು ಚಿತ್ರರಂಗದಲ್ಲಿ ಬಹಳ ಪರಿಚಿತರಾಗಿದ್ದು, ಇದೀಗ ಕನ್ನಡದಲ್ಲಿ ರೀವೈಂಡ್ ನಂತರ ರಾಮಾಚಾರಿ 2.0 ಸಿನಿಮಾ ಮೂಲಕ ಬೆಳ್ಳಿ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ ತೇಜ್ ಅವರ ಸಿನಿಮಾ ಜರ್ನಿಗೆ ಶುಭವಾಗಲಿ ಎಂದು ಹಾರೈಸೋಣ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field