Image Credit: Original Source
RBI New Rule For Bank Gold Loan: ಪ್ರಸ್ತುತ ದೇಶದಲ್ಲಿ Reserve Bank ನಿಯಮ ಉಲ್ಲಂಘನೆ ಮಾಡುವ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ RBI ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಪಡಿಸಿರುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ. ದೇಶದಲ್ಲಿ ಹಲವಾರು ಸಹಕಾರಿ ಬ್ಯಾಂಕ್ ಗಳು ನಿಯಮ ಉಲ್ಲಂಘನೆಯ ಕಾರಣ ಪರವಾನಗಿಯನ್ನು ಕಳೆದುಕೊಂಡಿದ್ದು, ವಹಿವಾಟನ್ನು ನಡೆಸದಂತಾಗಿದೆ. ಸದ್ಯ RBI ಚಿನ್ನದ ಸಾಲವನ್ನು ನೀಡುವ ಫೈನಾನ್ಸ್ ಕಂಪನಿಯ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಂಡಿದೆ.
IIFL ಫೈನಾನ್ಸ್ ಕಂಪನಿಯು ತಮ್ಮ ಸಾಲವನ್ನು ಸಮಯಕ್ಕೆ ಮರುಪಾವತಿಸಲು ವಿಫಲವಾದ ಗ್ರಾಹಕರ ಚಿನ್ನವನ್ನು ಹರಾಜು ಹಾಕಿದಾಗ, RBI ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ವ್ಯವಹಾರದಲ್ಲಿ ಹಲವಾರು ಅಕ್ರಮಗಳನ್ನು ಕಂಡುಹಿಡಿದಿದೆ. ಇದಾದ ಒಂದು ವಾರದ ನಂತರ ನಗದು ಪಾವತಿ ಸಾಲಕ್ಕೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ.
ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಬಿಗ್ ಅಪ್ಡೇಟ್
ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಚಿನ್ನದ ಸಾಲ ಪಡೆದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಹೌದು, ನಗದು ಪಾವತಿ ಮೊತ್ತವು 20,000 ಕ್ಕೆ ಸೀಮಿತವಾಗಿದೆ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುವುದಿಲ್ಲ ಎಂದು RBI ಸೂಚನೆ ನೀಡಿದೆ.
ಇದೀಗ 20,000 ರೂಪಾಯಿಗಳ ($240) ಅನುಮತಿಸುವ ಮಿತಿಗಿಂತ ಹೆಚ್ಚಿನ ನಗದು ಸಾಲಗಳನ್ನು ವಿತರಿಸುವುದರ ವಿರುದ್ಧ RBI ಕೆಲವು ಬ್ಯಾಂಕೇತರ ಸಾಲದಾತರಿಗೆ ಎಚ್ಚರಿಕೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ನಗದು ವಿತರಣೆಯಲ್ಲಿ ಐಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಇನ್ನುಮುಂದೆ ನಗದು ಪಾವತಿ 20 ಸಾವಿರಕ್ಕೆ ಸೀಮಿತ
ಭಾರತದ ಎರಡನೇ ಅತಿದೊಡ್ಡ ಚಿನ್ನದ ಸಾಲ ಒದಗಿಸುವ ಐಐಎಫ್ಎಲ್ ಫೈನಾನ್ಸ್ ವಿರುದ್ಧ ಆರ್ಬಿಐ ಶಿಸ್ತು ಕ್ರಮ ಕೈಗೊಂಡ ನಂತರ ನಗದು ವಿತರಣೆ ಮತ್ತು ಇತರ ನಿಯಮಗಳ ಉಲ್ಲಂಘನೆಗಾಗಿ ಎನ್ಬಿಎಫ್ಸಿ ಗಳಿಗೆ ಎಚ್ಚರಿಕೆ ನೀಡಿದೆ. ಚಿನ್ನದ ಮೇಲೆ, ಸಾಲಗಾರನು ಕೇವಲ 20 ಸಾವಿರ ನಗದು ಪಡೆಯಬಹುದು ಮತ್ತು ಉಳಿದ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು. ತುರ್ತು ಸಂದರ್ಭದಲ್ಲಿ ಚಿನ್ನದ ಸಾಲ ಪಡೆಯುವವರಿಗೆ ಇದು ಅನಾನುಕೂಲವೆಂದು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.
ಭಾರತದಲ್ಲಿನ ಆದಾಯ ತೆರಿಗೆ ನಿಯಮಗಳ ಪ್ರಕಾರ, ಸಾಲದಾತರು ಗ್ರಾಹಕರಿಗೆ 20,000 ರೂ.ಗಿಂತ ಹೆಚ್ಚಿನ ನಗದು ಸಾಲವನ್ನು ನೀಡುವುದನ್ನು ನಿಷೇಧಿಸುತ್ತವೆ. ಆದ್ದರಿಂದ, ನಿಯಮಗಳನ್ನು ಉಲ್ಲಂಘಿಸದಂತೆ ಸೆಂಟ್ರಲ್ ಬ್ಯಾಂಕ್ ಕೇಳಿಕೊಂಡಿದೆ. ಆರ್ಬಿಐ ಎನ್ಬಿಎಫ್ಸಿ ಗಳಿಗೆ ರೂ. 20,000 ನಗದು ಸಾಲದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಿಕೊಂಡಿದೆ.
Darshan Case Latest Update: ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಜುಲೈ…
Karnataka Rain Alert: ಸದ್ಯ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ.…
Sumalatha Ambareesh Posted About Darshan: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ ಅವರು ರೇಣುಕಾಸ್ವಾಮಿ ಆರೋಪದಡಿ ಜೈಲು…
Pavitra Gowda New Update: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಾಣದಲ್ಲಿ ಎ1 ಆರೋಪಿಯಾಗಿ ಪವಿತ್ರ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ.…
Govt Employees 7th Pay Latest Update: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು…
Karnataka CM Change: ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ…