Image Source: Times Of India
Reserve Bank Of India New Rules: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿಯಲ್ಲಿ ಹೊಸ ರೂಲ್ಸ್ ಜಾರಿಗೆ ತರುತ್ತದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ನಿಂದ ಯಾವುದೇ ಮಾಹಿತಿ ತಿಳಿದು ಬಂದರು ಸಹ ಅದಕ್ಕೆ ಬದ್ಧರಾಗಿರಬೇಕು.
ರಿಸರ್ವ್ ಬ್ಯಾಂಕ್ ನಿಂದ ಹೊಸ ರೂಲ್ಸ್ ಜಾರಿ ಆಗಲಿದೆ
ಆರ್ಥಿಕತೆಯಲ್ಲಿ ನೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಅಂಶದಲ್ಲಿ ಸೆಂಟ್ರಲ್ ಬ್ಯಾಂಕ್ (Central Bank) ರಿಟೇಲ್ ಹಣದುಬ್ಬರದ ಅಂಕಿ ಅಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಒಂದು ನಿರ್ದಿಷ್ಟ ವಸ್ತುವಿಗೆ ಒಂದು ನಿರ್ದಿಷ್ಟ ಮಟ್ಟದಲ್ಲಿ ಚಿಲ್ಲರೆ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
ವಯಕ್ತಿಕ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ, ವ್ಯಾಪಾರ ಸಾಲಗಳು, ಕ್ರೆಡಿಟ್ ಕಾರ್ಡ್ ಗಳು ಮೊದಲಾದ ಸಾಲಗಳ ಮೇಲೆ ಪರಿಣಾಮ ಬೀರುವ ದರ ಹೆಚ್ಚಳ ಪ್ರಕ್ರಿಯೆಯನ್ನು ಮುಂದಿನ ಹಣಕಾಸು ನೀತಿಗೂ ಮುನ್ನವೇ ಫೆಬ್ರವರಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿರಾಮಗೊಳಿಸಬಹುದು ಎಂಬುದಾಗಿ ತಳಿದು ಬಂದಿದೆ.
ರಿಟೇಲ್ ಹಣದುಬ್ಬರವು ಸತತವಾಗಿ ಎರಡನೇ ತಿಂಗಳಿನಲ್ಲಿಯೂ 6% ಕ್ಕಿಂತ ಕಡಿಮೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ವರದಿಯಾಗಿದೆ.
ಅರ್ಥಶಾಸ್ತ್ರ ತಜ್ಞರ ಅಭಿಪ್ರಾಯ
ಅಕ್ಟೋಬರ್ ಡಿಸೆಂಬರ್ ಅವಧಿಯಲ್ಲಿ ಭಾರತದ ಹಣದುಬ್ಬರವು ಆರ್ ಬಿ ಐ (RBI) ನ ಅಂದಾಜಿಗಿಂತ ಕಡಿಮೆ ಇರುವುದರಿಂದ ಕೇಂದ್ರ ಬ್ಯಾಂಕ್ ತನ್ನ ಕಾರ್ಯತಂತ್ರವನ್ನು ಮರು ಮೌಲ್ಯಮಾಪನ ಮಾಡಬಹುದು ಎಂದು ಡಿ ಎಸ್ ಪಿ ಮ್ಯೂಚುಯಲ್ ಫ್ಯಾನ್ಡ್ ನ ಉತ್ಪನ್ನ ವ್ಯವಸ್ಥಾಪಕ ಮತ್ತು ಅರ್ಥಶಾತ್ರಜ್ಞ ಅಂಕಿತ ಪಾಠಕ್ ತಿಳಿಸಿದ್ದಾರೆ.
ಆದರೆ ಆಹಾರ ಮತ್ತು ಇಂಧನವನ್ನು ಹೊರತುಪಡಿಸಿ ಪ್ರಮುಖ ಹಣದುಬ್ಬರವು ಡಿಸೆಂಬರ್ ನಲ್ಲಿ 6.1% ರಷ್ಟಿತ್ತು ಎಂದು ಅರ್ಥಶಾಸ್ತ್ರ ತಜ್ಞರು ತಿಳಿಸಿದ್ದಾರೆ.
ಇದಲ್ಲದೆ, ಅನುಕೂಲಕರವಾದ ಮೂಲ ಪರಿಣಾಮವು ಕ್ಷೀಣಿಸುವ ಕಾರಣ ಚಿಲ್ಲರೆ ಹಣದುಬ್ಬರವು ಈ ತಿಂಗಳು ಏರಿಕೆಯಾಗುವ ನಿರೀಕ್ಷೆಯಿದೆ.
ಚಿಲ್ಲರೆ ಹಣದುಬ್ಬರವು ಡಿಸೆಂಬರ್ನಲ್ಲಿ ಒಂದು ವರ್ಷದ ಕನಿಷ್ಠ 5.72% ಗೆ ಇಳಿದಿದೆ. 20 ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಹಣದುಬ್ಬರವನ್ನು 5.9% ಎಂದು ಊಹಿಸಿತ್ತು.ಹಣದುಬ್ಬರದ ಒಟ್ಟಾರೆ ಕುಸಿತವು ಆರ್ ಬಿ ಐ ತನ್ನ ಆರ್ಥಿಕ ನೀತಿ ಬಿಗಿಗೊಳಿಸುವಿಕೆಯನ್ನು ವಿರಾಮಗೊಳಿಸಬಹುದು ಎಂಬ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ…
Aadhar Link For Ration Card Deadline Extended: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ…
Darshan Case New Update: ಸದ್ಯ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳನ್ನು ಜುಲೈ 18 ರವರೆಗೆ ನ್ಯಾಯಾಂಗ…
Darshan Case New Update: ಸದ್ಯ ಜುಲೈ 4 ರ ವರೆಗೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ…
Bag And Uniform For Anganwadi Children's: ಪ್ರಸ್ತುತ 2024 -25 ರ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯ ಶಿಕ್ಷಣ…
Darshan Meet Pavithra Gowda Friend Samatha: ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ.…