Sonu Srinivas Gowda About Darshan: ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಹೆಸರು ಮಾಡಿದ್ದ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವಂತಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಎ2 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ಖ್ಯಾತ ನಟ ಕೊಲೆ ಮಾಡಿರುವ ಬಗ್ಗೆ ಈಗಲೂ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಅಭಿಮಾನಿಗಳ ಡಿ ಬಾಸ್ ಈ ರೀತಿಯ ಕೃತ್ಯ ಮಾಡಿರುವ ಬಗ್ಗೆ ಪರ ವಿರೋಧದ ಹೇಳಿಕೆಗಳು ಸಾಕಷ್ಟು ಕೇಳಿ ಬರುತ್ತಿದೆ. ಇನ್ನು ದರ್ಶನ್ ಅವರ ವಿರುದ್ದ ಸ್ಯಾಂಡಲ್ ವುಡ್ ಕೆಲ ಸ್ಟಾರ್ ನಟ ನಟಿಯರು ಕೂಡ ಸೋಶಿಯಲ್ ಮೀಡಿಯಾದಲ್ಲಿ ದ್ವನಿಯೆತ್ತಿದ್ದರು.
ಸದ್ಯ ಬಿಗ್ ಬಾಸ್ ಕನ್ನಡ OTT ಖ್ಯಾತಿಯ Sonu Srinivas Gowda ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ಸದ್ಯ ದರ್ಶನ್ ಬಗ್ಗೆ ಮಾತನಾಡಿದ ಸೋನು ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ಸೋನು ದರ್ಶನ್ ಅವರ ಬಗ್ಗೆ ಏನು ಮಾತನಾಡಿದ್ದಾರೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.
ನಟ ದರ್ಶನ್ ಬಗ್ಗೆ ಮೌನ ಮುರಿದ ಸೋನು ಶ್ರೀನಿವಾಸ್ ಗೌಡ…?
ದರ್ಶನ್ ಪ್ರಕರಣದ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ತಮ್ಮ Youtube ಚಾನೆಲ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ತುಂಬಾ ಜನ ಅಶ್ಲೀಲ ಸಂದೇಶ, ಕಾಮೆಂಟ್ ಗಳನ್ನು ಕಳುಹಿಸುತ್ತಾರೆ. ನಿಮ್ಮ ಹೆಣ್ಣುಮಕ್ಕಳಿಗೆ ಅಶ್ಲೀಲವಾದ ಕಾಮೆಂಟ್ ಗಳನ್ನು ಮಾಡಿದರೆ ನೀವು ಸುಮ್ಮನಿರುತ್ತೀರಾ…? ಒಮ್ಮೆ ನೀವು ಅಭಿಮಾನಿಯಾದರೆ ಸಾಯುವವರೆಗೂ ನೀವು ಅಭಿಮಾನಿಯಾಗಿಯೇ ಇರುತ್ತೀರಿ.
ನಾನು ಕೂಡ ದರ್ಶನ್ ಅವರ ಅಭಿಮಾನಿ. ದರ್ಶನ್ ಮಾಡಿದ್ದು ತಪ್ಪು ಎಂದು ಅನೇಕರು ಹೇಳುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನಟ ದರ್ಶನ್ ಅವರಿಂದ ಎಷ್ಟೋ ಜನ ಬೆಳೆದಿದ್ದಾರೆ. ದರ್ಶನ್ ಅವರನ್ನು ಬಳಸಿಕೊಂಡವರು ಕೂಡ ಅವರ ಬಗ್ಗೆ ಮಾತನಾಡಲು ಮುಂದೆ ಬರುತ್ತಿಲ್ಲ. ದರ್ಶನ್ ಅನೇಕರಿಂದ ಮೋಸ ಹೋಗಿದ್ದಾರೆ, ಆದರೆ ಅವರು ಯಾರಿಗೂ ಮೋಸ ಮಾಡಿಲ್ಲ ಎಂದು ಸೋನು ಗೌಡ ಹೇಳಿದ್ದಾರೆ.
ಅಷ್ಟಕ್ಕೂ ಸೋನು ಹೇಳಿದ್ದೇನು ನೋಡಿ
ನಾನಂತೂ ತಪ್ಪು ಮಾಡದೆ ಜೈಲಿಗೆ ಹೋಗಿದ್ದೇನೆ. ಹಾಗಾಗಿ ಧ್ವನಿ ಎತ್ತಿ ಮಾತನಾಡುತ್ತಿದ್ದೇನೆ. ನಾಳೆ ನನ್ನ ಬಗ್ಗೆ ಯಾರು ಏನು ಮಾತಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ತಪ್ಪು ಮಾಡದವರೆಲ್ಲ ಜೈಲಿಗೆ ಹೋಗುವುದನ್ನು ನೋಡಿದ್ದೇನೆ. ಕೆಟ್ಟದ್ದನ್ನು ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ಅಣ್ಣ, ಮಗ, ಮಗ ಎಂದು ಹೇಳುತ್ತಿದ್ದವರು ಇಂದು ಬಾಸ್ ಬಗ್ಗೆ ಮಾತನಾಡುತ್ತಿಲ್ಲ. ಇದು ತುಂಬಾ ಬೇಸರ ತಂದಿದೆ ಎಂದು ಸೋನು ಗೌಡ ಹೇಳಿದ್ದಾರೆ. ನಾನು ಕೂಡ ದರ್ಶನ್ ಪರ ನಿಲ್ಲುತ್ತೇನೆ. ರೇಣುಕಾಸ್ವಾಮಿ ಕುಟುಂಬ ಚೆನ್ನಾಗಿರಲಿ, ಕಾನೂನಿನ ಪ್ರಕಾರ ಅವರಿಗೆ ಸಿಗಬೇಕಾದದ್ದು ಸಿಗುತ್ತದೆ. ದರ್ಶನ್ ಅವರ ಒಳ್ಳೆತನವೇ ಅವರನ್ನು ಕಾಪಾಡುತ್ತದೆ ಎಂದು ಸೋನು ಗೌಡ ಹೇಳಿದ್ದಾರೆ.