Renuka Swamy Message: ಪವಿತ್ರ ಹೆಸರಲ್ಲಿ ರೇಣುಕಾ ಸ್ವಾಮಿಗೆ ಮೆಸೇಜ್ ಮಾಡಿದ್ದು ಯಾರು…? ಕೊನೆಗೂ ಸತ್ಯ ಹೊರಕ್ಕೆ

ರೇಣುಕಾಸ್ವಾಮಿ ಜೊತೆ ಪವಿತ್ರ ಹೆಸರಲ್ಲಿ ಮೆಸೇಜ್ ಮಾಡಿದ್ದು ಯಾರು ನೋಡಿ

Renukaswami And Pavitra Gowda Chatting Details: ರೇಣುಕಾ ಸ್ವಾಮಿ ಕೊಲೆಗೆ ಕಾರಣವಾದ ಅಂಶಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ರೇಣುಕಾಸ್ವಾಮಿ ಕೊಲೆ ಹಿಂದಿನ ಫುಲ್ ಪ್ಲಾನ್ ಇದೀಗ ವಿಚಾರಣೆಯಲ್ಲಿ ಒಂದೊಂದಾಗಿ ರಿವೀಲ್ ಆಗುತ್ತಿದೆ. ಈಗಾಗಲೇ ಹಲವಾರು ಅಚ್ಚರಿಯ ವಿಚಾರಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿದೆ.

ರೇಣುಕಾಸ್ವಾಮಿ ಪವಿತ್ರ ಗೌಡ ಗೆ ಮೆಸೇಜ್ ಮಾಡಿದ್ದರಿಂದ ಹಿಡಿದು, ರೇಣುಕಾಸ್ವಾಮಿ ಕಿಡ್ನಾಪ್ ವರೆಗೆ ಪೊಲೀಸರು ಎಲ್ಲ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ನಾವೀಗ ಈ ಲೇಖನದಲ್ಲಿ ರೇಣುಕಾಸ್ವಾಮಿ ಹಾಗೂ ಪವಿತ್ರ ಗೌಡ ಚಾಟಿಂಗ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Renukaswamy And Pavitra Gowda
Image Credit: Oneindia

ರೇಣುಕಾಸ್ವಾಮಿ ಜೊತೆ ಪವಿತ್ರ ಹೆಸರಲ್ಲಿ ಮೆಸೇಜ್ ಮಾಡಿದ್ದು ಪವನ್…!
ಫೆಬ್ರವರಿ ತಿಂಗಳಲ್ಲೇ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅವರಿಂದ ಮೊದಲ ಮೆಸೇಜ್ ಬಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ರೆಡ್ಡಿ ಅನ್ನೋ ಹೆಸರಿನಲ್ಲಿ ತೆರೆದಿರುವ ಇನ್ಸ್ಟಾಗ್ರಾಮ್ ಖಾತೆಯಿಂದ ಮೆಸೇಜ್ ಗಳು ಬರತೊಡಗಿದವು. ನಂತರ ಚಾಟಿಂಗ್ ಶುರುವಾಯಿತು. ಈ ಸಂದರ್ಭದಲ್ಲಿ ಪವಿತ್ರಾ ಗೌಡಗೆ ಬೈಯುತಿದ್ದ ರೇಣುಕಾಸ್ವಾಮಿ ಅವಾಚ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ. ಕೊನೆಗೆ ಪವಿತ್ರಾ ಈ ವಿಷಯ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಬಳಿ ಹೇಳಿದ್ದಾಳೆ. ಪವನ್ ಜೊತೆ ಮಾತನಾಡಿ ಒಂದು ಪ್ಲಾನ್ ಮಾಡಿದರು. ಅದರಂತೆ ಪವಿತ್ರಾ ವಾಟ್ಸಪ್ ನಂಬರ್ ಕೊಡುವುದಾಗಿ ಹೇಳಿದ್ದು, ಪವನ್ ವಾಟ್ಸಾಪ್ ನಂಬರ್ ಕೊಟ್ಟಿದ್ದಾರೆ.

ಜೂನ್ ಆರಂಭದಿಂದಲೂ ರೇಣುಕಾಸ್ವಾಮಿ ಆ ವಾಟ್ಸ್ ಆ್ಯಪ್ ನಂಬರ್ ನಲ್ಲಿ ಚಾಟ್ ಮಾಡುತ್ತಿದ್ದ. ಇನ್ನು ಚಾಟ್ ನಲ್ಲಿ ರೇಣುಕಾಸ್ವಾಮಿ ಅವರು ಕೆಲಸ ಮಾಡಿದ ಊರಿನ ಬಗ್ಗೆ ಕೇಳಿದ್ದರು. ಪವಿತ್ರಾ ಕೇಳಿದಂತೆಯೇ ರೇಣುಕಾಸ್ವಾಮಿ ಎಲ್ಲ ಮಾಹಿತಿ ನೀಡಿದ್ದರು. ರೇಣುಕಾಸ್ವಾಮಿ ಅವರು ತಾವು ಕೆಲಸ ಮಾಡುತ್ತಿದ್ದ ಮೆಡಿಕಲ್ ಶಾಪ್ ಹಾಗೂ ಲೊಕೇಶನ್ ಫೋಟೋವನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದರು. ಇದೆಲ್ಲವನ್ನೂ ಜೂನ್ 5 ರಂದು ದರ್ಶನ್ ಜೊತೆ ಚರ್ಚಿಸಲಾಗಿದೆ. ಇದಾದ ಬಳಿಕ ಚಿತ್ರದುರ್ಗದ ರಾಘವೇಂದ್ರಗೆ ಕರೆ ಮಾಡಿದ್ದ ದರ್ಶನ್, ರೇಣುಕಾಸ್ವಾಮಿ ಅವರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.

Renukaswamy And Pavitra Gowda Chatting Details
Image Credit: Oneindia

Join Nadunudi News WhatsApp Group

Join Nadunudi News WhatsApp Group