Shivananda Shivayogi Rajendra Swamiji: ರಾಜಕೀಯದ ಬಗ್ಗೆ ಇನ್ನೊಂದು ಭವಿಷ್ಯ ನುಡಿದ ಕೊಡಿ ಮಠದ ಸ್ವಾಮಿಗಳು.
Shivananda Shivayogi Rajendra Swamiji: ರಾಜ್ಯ ವಿಧಾನಸಭಾ ಚುನಾವಣೆ (Election) ಇನ್ನೇನು ಹತ್ತಿರಬರುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರ ಕಾರ್ಯ ಶುರುವಾಗಿದೆ. ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಎಲ್ಲೆಡೆ ಜೋರಾಗಿದೆ. ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಕಳೆದ ಬಾರಿ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು, ಇನ್ನು ಈ ಬಾರಿಯಾದರೂ ಒಂದೇ ಪಕ್ಷಕ್ಕೆ ಅಧಿಕಾರ ಸಿಗಲಿದೆಯೇ ಅಥವಾ ಕಳೆದ ಬಾರಿಯಂತೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆಯಾ ಎಂಬ ಕುತೂಹಲ ಅನೇಕರಲ್ಲಿ ಮನೆ ಮಾಡಿದೆ.
![Another prophecy about politics was made by the Swami of Kodi Mutt](https://nadunudi.in/wp-content/uploads/2023/02/Kosdimata.png)
ಇದೀಗ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಮುಂದಿನ ಸರ್ಕಾರದ ರಚನೆ ಕುರಿತಂತೆ ಮಹತ್ವದ ಭವಿಷ್ಯ ನುಡಿದಿದ್ದಾರೆ.
ಒಂದೇ ಪಕ್ಷ ಅಧಿಕಾರಕ್ಕೆ ಬರುವುದೋ ಅಥವಾ ಕಳೆದ ಬಾರಿಯಂತೆಯೇ ಆಗುವುದೋ ಎನ್ನುವ ಬಗ್ಗೆ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ.
![Another prophecy about state politics was made by the Swami of Kodi Mutt](https://nadunudi.in/wp-content/uploads/2023/02/kodi-mutt-swamy.png)
ಮುಂದಿನ ಸರ್ಕಾರ ರಚನೆ ಕುರಿತು ಕೋಡಿಮಠದ ಶ್ರೀಗಳ ಮಾತುಗಳು
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮುಂದಿನ ಸರ್ಕಾರದ ರಚನೆ ಕುರಿತಂತೆ ಮಹತ್ವದ ಭವಿಷ್ಯ ನುಡಿದಿದ್ದಾರೆ. “ಒಂದೇ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ” ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.
![Swami of Kodi Mutt predicted the next government](https://nadunudi.in/wp-content/uploads/2023/02/Kodi-mutt-swamy-about-politics.png)
‘ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಸಾಮಾನ್ಯ. ಪಕ್ಷಗಳು ಇಬ್ಬಾಗವಾಗುವ ಲಕ್ಷಣಗಳಿವೆ. ಆದರೆ ಇದರ ಮದ್ಯೆಯೂ ಒಂದೇ ಪಕ್ಷ ಬಹುಮತಗಳೊಂದಿಗೆ ಅಧಿಕಾರಕ್ಕೆ ಬರಲಿದೆ. ಅಲ್ಲದೆ ಮುಂದಿನ ಮೂರು ವರ್ಷ ಎಷ್ಟು ಸುಖವಿದೆಯೋ ಅಷ್ಟೇ ಕಷ್ಟವಿದೆ’ ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಶುಕ್ರವಾರದಂದು ಮಾತನಾಡಿದ್ದಾರೆ.